• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಹೆಚ್. ವಿಶ್ವನಾಥ್, ಎಂಟಿಬಿಗೆ ಮಂತ್ರಿ ಸ್ಥಾನ ನೀಡಿ; ಸಚಿವ ಶ್ರೀಮಂತ ಪಾಟೀಲ ಆಗ್ರಹ

ಹೆಚ್. ವಿಶ್ವನಾಥ್, ಎಂಟಿಬಿಗೆ ಮಂತ್ರಿ ಸ್ಥಾನ ನೀಡಿ; ಸಚಿವ ಶ್ರೀಮಂತ ಪಾಟೀಲ ಆಗ್ರಹ

ಸಚಿವ ಶ್ರೀಮಂತ ಪಾಟೀಲ್

ಸಚಿವ ಶ್ರೀಮಂತ ಪಾಟೀಲ್

ಪಕ್ಷ ಬಿಟ್ಟು ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ತ್ಯಾಗ ಮಾಡಿದವರಿಗೆ ಸಚಿವ ಸ್ಥಾನ‌ ನೀಡಿದರೆ ಒಳ್ಳೆಯದಾಗುತ್ತದೆ. ಆದರೆ ಇದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರವಾಗಿದೆ ಎಂದು ಸಚಿವ ಶ್ರೀಮಂತ ಪಾಟೀಲ್ ಹೇಳಿದ್ದಾರೆ.

  • Share this:

ಧಾರವಾಡ : ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ವಿಶ್ವನಾಥ ಹಾಗೂ ಎಂ.ಟಿ.ಬಿ‌. ನಾಗರಾಜ ತ್ಯಾಗ ಮಾಡಿದ್ದಾರೆ. ಅವರಿಗೂ ಸಹ ಸಚಿವ ಸ್ಥಾನ ನೀಡಬೇಕೆಂದು ಸಚಿವ ಶ್ರೀಮಂತ ಪಾಟೀಲ್ ಆಗ್ರಹ ಪಡಿಸಿದ್ದಾರೆ.


ಧಾರವಾಡ ಜಿಲ್ಲಾಡಳಿತ ಭವನದಲ್ಲಿ ಇಲಾಖೆ ಅಧಿಕಾರಿಗಳ ಸಭೆ‌ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಶ್ರೀಮಂತ ಪಾಟೀಲ್, ಪಕ್ಷ ಬಿಟ್ಟು ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ತ್ಯಾಗ ಮಾಡಿದವರಿಗೆ ಸಚಿವ ಸ್ಥಾನ‌ ನೀಡಿದರೆ ಒಳ್ಳೆಯದಾಗುತ್ತದೆ. ಆದರೆ ಇದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರವಾಗಿದೆ. ಅಲ್ಲದೇ, ಇದನ್ನು ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.


ಇದನ್ನೂ ಓದಿ: 13 ಐಎಎಸ್​ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ


ಸಚಿವ ಸ್ಥಾನ ಆಕಾಂಕ್ಷಿಗಳಿಗೆ ನಿಗಮ‌-ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ನಿಗಮ ಮಂಡಳಿ ಬೇಡ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವ ಶ್ರೀಮಂತ ಪಾಟೀಲ್, ನಮ್ಮ‌ ಸಿಎಂ ಯಡಿಯೂರಪ್ಪ ಹಾಗೂ ಪಕ್ಷದ ನಾಯಕರು ಯಾವುದೇ ತೊಂದರೆ ಆಗದಂತೆ ನೊಡಿಕೊಳ್ಳುತ್ತಾರೆ. ನಿಗಮ ಮಂಡಳಿ ಬೇಡ ಎಂದವರ ಜೊತೆಗೆ ಸಿಎಂ ಯಡಿಯೂರಪ್ಪ ಚರ್ಚೆ ಮಾಡಲಿದ್ದಾರೆ ಎಂದರು.


ಇದೇ ಸಂದರ್ಭದಲ್ಲಿ ಸರ್ಕಾರ ಒಂದು ವರ್ಷ ಪುರೈಸಿದ ಬಗ್ಗೆ ಮಾತನಾಡಿ, ಕಳೆದ ಒಂದು ವರ್ಷದಲ್ಲಿ ಹಲವು ಸಂಕಷ್ಟಗಳನ್ನು ಬಗೆಹರಿಸಿದೆ. ಪ್ರವಾಹದ ಸಮಯದಲ್ಲಿ ಹಾಗೂ ಕೊರೊನಾ ವಿಚಾರವಾಗಿ ಸರ್ಕಾರ ಉತ್ತಮ ಕೆಲಸ‌ ಮಾಡಿದೆ ಎಂದರು.

Published by:Sushma Chakre
First published: