• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Election 2023: ಚುನಾವಣೆ ಬಿಸಿಯಲ್ಲೂ ಕೂಲ್​​ ಆಗಿ ಪತ್ನಿಯೊಂದಿಗೆ ಯೋಗೇಶ್ವರ್​ ರೀಲ್ಸ್​​; 'ಸೈನಿಕನ' ವಿಡಿಯೋ ಸಖತ್ ವೈರಲ್​!

Karnataka Election 2023: ಚುನಾವಣೆ ಬಿಸಿಯಲ್ಲೂ ಕೂಲ್​​ ಆಗಿ ಪತ್ನಿಯೊಂದಿಗೆ ಯೋಗೇಶ್ವರ್​ ರೀಲ್ಸ್​​; 'ಸೈನಿಕನ' ವಿಡಿಯೋ ಸಖತ್ ವೈರಲ್​!

ಮಾಜಿ ಸಚಿವ ಸಿ.ಪಿ ಯೋಗೇಶ್ವರ್​

ಮಾಜಿ ಸಚಿವ ಸಿ.ಪಿ ಯೋಗೇಶ್ವರ್​

ತಮ್ಮನ್ನು ಸೋಲಿಸಿದ್ದು ಏಕೆ? ನಾನು ಮಾಡಿದ ತಪ್ಪು ಏನು? ನೀವು ಗೆಲ್ಲಿಸಿದ ಅಭ್ಯರ್ಥಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ನೀಡಿದ್ದಾರಾ ಎಂಬ ಪ್ರಶ್ನೆಗಳನ್ನು ಮತದಾರರ ಮುಂದಿಟ್ಟು ಸಿ.ಪಿ ಯೋಗೇಶ್ವರ್​ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

  • Share this:

ರಾಮನಗರ: ಕೇಂದ್ರ ಚುನಾವಣಾ ಆಯೋಗ (Election Commission) ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election) ಘೋಷಣೆ ಮಾಡುತ್ತಿದ್ದಂತೆ ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳು ಬಹುಮತದೊಂದಿಗೆ ಸರ್ಕಾರ ರಚನೆ ಮಾಡಲು ತಂತ್ರ-ಪ್ರತಿತಂತ್ರ ರೂಪಿಸುವಲ್ಲಿ ಬ್ಯುಸಿಯಾಗಿದೆ. ಪ್ರಮುಖ ನಾಯಕರು ರಾಜ್ಯದ ವಿವಿಧ ಕ್ಷೇತ್ರಗಳಿಗೆ ಭೇಟಿ ನೀಡಿ ತಮ್ಮ ತಮ್ಮ ಪಕ್ಷಗಳ ಪರ ಪ್ರಚಾರ ನಡೆಸುವ ಕಾರ್ಯದಲ್ಲಿ ತೊಡಗಿದ್ದಾರೆ. ಈ ನಡುವೆ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ (CP Yogeshwar) ಅವರು ಮಾತ್ರ ಪತ್ನಿಯೊಂದಿಗೆ ರೀಲ್ಸ್ (Reels) ಮಾಡಲು ಬ್ಯುಸಿಯಾಗಿದ್ದಾರೆ ಎನ್ನಲಾಗಿದೆ. ಈ ಕುರಿತ ರೀಲ್ಸ್​ ಸಾಮಾಜಿಕ ಜಾಲತಾಣದಲ್ಲಿ (Social Media) ಸಖತ್ ವೈರಲ್​ ಆಗುತ್ತಿದೆ. ಥೇಟ್​ ಸಿನಿಮಾ ಶೈಲಿಯಲ್ಲೇ ಪತ್ನಿ ಶೀಲಾ ಯೋಗೇಶ್ವರ್ ಜೊತೆಗೆ ಮಾಜಿ ಸಚಿವರು ರೀಲ್ಸ್​ ಮಾಡಿದ್ದಾರೆ. ಇತ್ತ ಸಿ.ಪಿ ಯೋಗೇಶ್ವರ್​ ಅವರು ಚನ್ನಪಟ್ಟಣದಲ್ಲಿ (Channapatna) ಸ್ವಾಭಿಮಾನಿ ಸಂಕಲ್ಪ ನಡಿಗೆಯನ್ನು ಕೈಗೊಂಡಿದ್ದಾರೆ. ಇದರ ನಡುವೆಯೇ ಪತ್ನಿ ಜೊತೆಗೆ ಜಾಲಿ ಮೂಡ್​​ನಲ್ಲಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರ ರೀಲ್ ವಿಡಿಯೋ ಫುಲ್ ವೈರಲ್ ಆಗ್ತಿದೆ.


ಏನಿದು ಸ್ವಾಭಿಮಾನಿ ಸಂಕಲ್ಪ ನಡಿಗೆ?


ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಹೆಚ್​​​ಡಿ ಕುಮಾರಸ್ವಾಮಿ ಅವರ ಎದುರು ಸಿ.ಪಿ ಯೋಗೇಶ್ವರ್ ಸೋಲುಂಡಿದ್ದರು. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಮತದಾರರ ಮನೆ ಮನೆಗೂ ಭೇಟಿ ನೀಡಲು ಯೋಗೇಶ್ವರ್ ಅವರು ಸ್ವಾಭಿಮಾನಿ ಸಂಕಲ್ಪ ನಡಿಗೆ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ.




ಇದನ್ನೂ ಓದಿ: Transport Employees: ಹಬ್ಬದ ದಿನದಂದೇ ಸಾರಿಗೆ ನೌಕರರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ವೇತನ ಹೆಚ್ಚಿಸಿ ಆದೇಶ


ಈ ವೇಳೆ ಕಳೆದ ಚುನಾವಣೆಯಲ್ಲಿ ತಮ್ಮನ್ನು ಸೋಲಿಸಿದ್ದು ಏಕೆ? ನಾನು ಮಾಡಿದ ತಪ್ಪು ಏನು? ನೀವು ಗೆಲ್ಲಿಸಿದ ಅಭ್ಯರ್ಥಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ನೀಡಿದ್ದಾರಾ ಎಂಬ ಪ್ರಶ್ನೆಗಳನ್ನು ಮತದಾರರ ಮುಂದಿಟ್ಟು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಇದೇ ವೇಳೆ ಈ ಬಾರಿಯ ಚುನಾವಣೆಯಲ್ಲಿ ಆರ್ಶಿವಾದ ನೀಡಿ ಎಂದು ಮನವಿ ಮಾಡ್ತಿದ್ದಾರೆ.


ಮಾಜಿ ಸಿಎಂ ಹೆಚ್​​ಡಿಕೆಗೆ ಸಿಪಿವೈ ಟಾಂಗ್​​


ಇನ್ನು, ಕಳೆದ ಚುನಾವಣೆಯಲ್ಲಿ ಜೆಡಿಎಸ್ ಜೊತೆಗೆ ಬಿಜೆಪಿ ಹೊಂದಾಣಿಕೆ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಕುರಿತಂತೆ ಮಾಜಿ ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ಯೋಗೇಶ್ವರ್ ಗೆ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಕುಮಾರಸ್ವಾಮಿಗೆ ಸ್ವಾಭಾವಿಕವಾಗಿ ಕೆರಳಿಸುತ್ತದೆ, ಕಸಿವಿಸಿ ಆಗುತ್ತಾರೆ. ಅದಕ್ಕಾಗಿ ಅವರು ಚಡಪಡಿಸುತ್ತಾರೆ. ಈ ಬಾರಿ ಯಾವುದೇ ಹೊಂದಾಣಿಕೆ ನಡೆಯಲ್ಲ.


top videos



    ಆದರೆ ಈ ಬಾರಿಯೂ ಅದರ ನಿರೀಕ್ಷೆಯಲ್ಲಿ ಇದ್ದಾರೇನೋ? ಇಂತಹ ಮಾತುಗಳಿಂದ ಕಾಂಗ್ರೆಸ್ -ಜೆಡಿಎಸ್ ಗೆ ನಷ್ಟವಾಗಲಿದೆ. ಹಾಗಾಗಿ ಕುಮಾರಸ್ವಾಮಿ ಮಾತನಾಡುತ್ತಿದ್ದಾರೆ. ನೋಡೋಣಾ ಇನ್ನೆಷ್ಟು ದಿನ ಮಾತನಾಡುತ್ತಾರೆ. ಚನ್ನಪಟ್ಟಣದ ಸ್ವಾಭಿಮಾನಿ‌ ಜನ‌ ಕುಮಾರಸ್ವಾಮಿ ಅವರ ದುರಂಕಾರದ, ಏಕವಚನದ ಮಾತಿಗೆ ಉತ್ತರ ಕೊಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

    First published: