• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Mallikarjun Kharge ಹೆಂಡ್ತಿ, ಮಕ್ಕಳ ಹತ್ಯೆಗೆ ಸಂಚು; ಬಿಜೆಪಿ ಅಭ್ಯರ್ಥಿಯ ಆಡಿಯೋ ಲೀಕ್

Mallikarjun Kharge ಹೆಂಡ್ತಿ, ಮಕ್ಕಳ ಹತ್ಯೆಗೆ ಸಂಚು; ಬಿಜೆಪಿ ಅಭ್ಯರ್ಥಿಯ ಆಡಿಯೋ ಲೀಕ್

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಸುದ್ದಿಗೋಷ್ಠಿಯಲ್ಲಿ ರವಿ ಎಂಬಾತನ ಜೊತೆಯಲ್ಲಿ ಮಣಿಕಂಠ ರಾಥೋಡ್ ಮಾತಾಡಿದ್ದಾರೆ ಎನ್ನಲಾದ ಆಡಿಯೋ ತುಣಕನ್ನು ಕಾಂಗ್ರೆಸ್ ಬಿಡುಗಡೆಗೊಳಿಸಿದೆ.

  • Share this:

ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Congress President Mallikarjun Kharge) ಕುಟುಂಬದ ಹತ್ಯೆಯ ಸಂಚಿಗೆ ಸಂಬಂಧಿಸಿದ ಎನ್ನಲಾದ ಆಡಿಯೋ ಲೀಕ್ (Audio Leak) ಆಗಿದೆ. ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ (Manikant Rathod, BJP Candidate), ಕಾರ್ಯಕರ್ತ ರವಿ ಎಂಬಾತನ ಜೊತೆ ಮಾತನಾಡಿರುವ ಆಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆಡಿಯೋ ಸಂಬಂಧ ಇಂದು ಎಐಸಿಸಿ ನಾಯಕರಾದ ರಣ್​ದೀಪ್​ ಸುರ್ಜೇವಾಲಾ (Randeep Surjewala), ಪವನ್​ ಖೇರಾ (Pavan Khera) ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದರು. ಚಿತ್ತಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಿಯಾಂಕ್ ಖರ್ಗೆ (Priyank Kharge) ಸ್ಪರ್ಧೆ ಮಾಡಿದ್ದಾರೆ.


ಮಲ್ಲಿಕಾರ್ಜುನ ಖರ್ಗೆ ಎಐಸಿಸಿ‌ಅಧ್ಯಕ್ಷರು. ಇದೀಗ ಖರ್ಗೆ,ಹೆಂಡತಿ ಮಕ್ಕಳನ್ನ ಸಾಫ್ ಮಾಡ್ತೇನೆ ಎಂದು ಮಣಿಕಂಠ ರಾಥೋಡ್ ಹೇಳಿದ್ದಾರೆ. ಇದು ತುಂಬಾ ಅಪಾಯಕಾರಿ ನಡೆಯಾಗಿದ್ದು, ಖರ್ಗೆಯವರ ಕುಟುಂಬ ಆತಂಕದಲ್ಲಿದೆ ಎಂದು ರಣ್​​ದೀಪ್ ಸುರ್ಜೇವಾಲಾ ಹೇಳಿದರು.


ಪ್ರಧಾನಿ, ಸಿಎಂ ಇದನ್ನ ಗಂಭೀರವಾಗಿ ಪರಿಗಣಿಸಿಲ್ಲ. ಮಲ್ಲಿಕಾರ್ಜುನ ಖರ್ಗೆ ಹತ್ಯೆಗೆ ಸಂಚು ನಡೆದಿದೆ. ದಲಿತ ನಾಯಕರಾಗಿರುವ ಮಲ್ಲಿಕಾರ್ಜನ ಖರ್ಗೆಯವರ ಹತ್ಯೆಗೆ ಬಿಜೆಪಿ ನಾಯಕರು ಹೊರಟಿದ್ದಾರೆ ಎಂದು ರಣ್​ದೀಪ್​ ಸುರ್ಜೇವಾಲಾ ಗಂಭೀರ ಆರೋಪ ಮಾಡಿದರು.


ಸುದ್ದಿಗೋಷ್ಠಿಯಲ್ಲಿ ರವಿ ಎಂಬಾತನ ಜೊತೆಯಲ್ಲಿ ಮಣಿಕಂಠ ರಾಥೋಡ್ ಮಾತಾಡಿದ್ದಾರೆ ಎನ್ನಲಾದ ಆಡಿಯೋ ತುಣಕನ್ನು ಕಾಂಗ್ರೆಸ್ ಬಿಡುಗಡೆಗೊಳಿಸಿದೆ.




ಕಾಂಗ್ರೆಸ್ ಬಿಡುಗಡೆಗೊಳಿಸಿರುವ ಆಡಿಯೋದಲ್ಲಿ ಏನಿದೆ?


ರವಿ, ಕಾರ್ಯಕರ್ತ: ಅಣ್ಣಾ, ನಿಮ್ಮ ಮೇಲೆ ಎಷ್ಟು ಕೇಸ್​ಗಳಿವೆ?


ಮಣಿಕಂಠ ರಾಥೋಡ್: ಯಾವ ಬೋ.. ಮಗ ಕಾಂಗ್ರೆಸ್​ನವನು ಕೇಳಲಿ. 44  ಕೇಸ್​ಗಳಿವೆ ಅಂತ ಹೇಳಲಿ.


ರವಿ: ಅಣ್ಣಾ..ಅದನ್ನು ಖರ್ಗೆ ಕಡೆಯವರು ಮಾಡ್ತಾರೆ. ನಾವ್ಯಾರು ಮಾಡಲ್ಲ.


ಮಣಿಕಂಠ ರಾಥೋಡ್: ಖರ್ಗೆ ಕಡೆಯಿಂದಲೇ ಕೇಳಲೇ?


ರವಿ: ಅಣ್ಣಾ ನನ್ನ ಹತ್ರ ಅವರ ನಂಬರ್ ಇಲ್ಲ. ಕೇಳೋಣ ಅಂದ್ರೆ ಅವರ ನಂಬರ್ ಇಲ್ಲ, ಇದ್ರೆ ಕೊಡಿ. ಫೋನ್ ಮಾಡಿ ನಮ್ಮ ಅಣ್ಣನ ಬಗ್ಗೆ ಯಾಕೆ ಹಿಂಗ್ ಮಾತಾಡ್ತೀರಿ ಅಂತ ಕೇಳ್ತೀನಿ.




ಮಣಿಕಂಠ ರಾಥೋಡ್: ನನ್ನ ಬಳಿ ಫೋನ್ ನಂಬರ್ ಇದ್ದಿದ್ರೆ ಅವರ ಹೆಂಡ್ತಿ ಮಕ್ಕಳನ್ನು ಸಾಫ್ ಮಾಡ್ತಿದ್ದೆ.


ರವಿ: ಯಾರ ಹೆಂಡರ ಮಕ್ಕಳ ಅಣ್ಣಾ?


ಮಣಿಕಂಠ ರಾಥೋಡ್: ಇವಾಗ ಯಾರ ಹೆಸರು ತೊಗೊಂಡಿ ನೀನು?


ಇದನ್ನೂ ಓದಿ: Siddaramiah - Kharge Campaign: ಬಿಜೆಪಿ ರಣತಂತ್ರಕ್ಕೆ ಕೈ ವಿಲವಿಲ! ವರುಣಾ ಬಿಟ್ಟು ಕದಲುತ್ತಿಲ್ಲ ಸಿದ್ದು, ಕಲಬುರಗಿಯಲ್ಲಿ ಖರ್ಗೆ ಮೊಕ್ಕಾಂ!


ರವಿ: ಖರ್ಗೆ ಅವರದ್ದು ಅಣ್ಣಾ.


ಮಣಿಕಂಠ ರಾಥೋಡ್: ಖರ್ಗೆ ಅವರ ನಂಬರ್ ಇದ್ರೆ ಅವರ ಹೆಂಡ್ರು ಮಕ್ಕಳನ್ನೆಲ್ಲಾ ಸಾಫ್ ಮಾಡ್ತೀನಿ ಲೇ? ನಂಬರ್ ಇದ್ರೆ ನಾನೇ ಫೋನ್ ಮಾಡಿ ಬೈಯ್ತಿದ್ದೆ.

top videos
    First published: