• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Congress Guarantee: ‘ಕರೆಂಟ್‌ ಬಿಲ್‌ ಕಟ್ಬೇಡಿ, ಬಸ್‌ ಟಿಕೆಟ್‌ ತಗೊಳ್ಬೇಡಿ’ -‘ಕೈ’ ಗ್ಯಾರಂಟಿಗಳ ವಿರುದ್ಧ ಬಿಜೆಪಿ-ಜೆಡಿಎಸ್‌ ಸಮರ!

Congress Guarantee: ‘ಕರೆಂಟ್‌ ಬಿಲ್‌ ಕಟ್ಬೇಡಿ, ಬಸ್‌ ಟಿಕೆಟ್‌ ತಗೊಳ್ಬೇಡಿ’ -‘ಕೈ’ ಗ್ಯಾರಂಟಿಗಳ ವಿರುದ್ಧ ಬಿಜೆಪಿ-ಜೆಡಿಎಸ್‌ ಸಮರ!

ಗ್ಯಾರಂಟಿ ಕಾದಾಟ

ಗ್ಯಾರಂಟಿ ಕಾದಾಟ

ರಾಜ್ಯದ ಜನತೆ 200 ಯೂನಿಟ್‌ಗೆ ವಿದ್ಯುತ್‌ ಬಿಲ್‌ ಕಟ್ಟಬೇಡಿ, ಮಹಿಳೆಯರು ಬಸ್​ನಲ್ಲಿ ಟಿಕೆಟ್ ತೆಗೆದುಕೊಳ್ಳ ಬೇಡಿ ಅಂತ ಜೆಡಿಎಸ್​-ಬಿಜೆಪಿ ನಾಯಕರು ಕರೆ ನೀಡಿದ್ದಾರೆ.

  • Share this:

ಬೆಂಗಳೂರು: ಸೋತು ಸುಣ್ಣವಾಗಿ, ಸೈಡಿಗೆ ಸರಿದು ಸುಮ್ಮನಾಗಿದ್ದ ಬಿಜೆಪಿ-ಜೆಡಿಎಸ್ (BJP-JDS) ನಾಯಕರು ಮೈಕೊಡವಿ ನಿಂತಿದ್ದಾರೆ. ಉಭಯ ಪಕ್ಷಗಳ ಹೀನಾಯ ಸೋಲಿಗೆ ಕಾರಣವಾದ ಕಾಂಗ್ರೆಸ್‌‌ ಗ್ಯಾರಂಟಿಗಾಗಿ (Congress Guarantee) ಸಮರ ಸಾರಿದ್ದಾರೆ. ಫ್ರೀ ಫ್ರೀ ಅಂದ್ರಿ ಈಗೆಲ್ಲಿದೆ ಫ್ರೀ? (Free) ಜನ್ರೇ ಜೂನ್ 2ರಿಂದ ಬಿಲ್ ಕಟ್ಟಬೇಡಿ. ಬಸ್ ಟಿಕೆಟ್ ತಗೋಬೇಡಿ ಅಂತ ಮಾಜಿ ಡಿಸಿಎಂ ಆರ್.ಅಶೋಕ್ (R Ashok) ಹೇಳಿದ್ದಾರೆ. ಬಿಜೆಪಿಗರು ಮಾತ್ರವಲ್ಲ, ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಕೂಡಾ ಸಿಡಿದೆದ್ದಿದ್ದಾರೆ. 200 ಯೂನಿಟ್‌ಗೆ 24 ಸಾವಿರ ಕೋಟಿ ಬೇಕು. ಅದನ್ನ ಎಲ್ಲಿಂದ ತರ್ತೀರಿ ಅಂತ ಪ್ರಶ್ನಿಸ್ತಿದ್ದಾರೆ.


ಕಾಂಗ್ರೆಸ್ ಗ್ಯಾರಂಟಿ ಯೋಜನೆ ಬಗ್ಗೆ ಕಿಡಿ


ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ, ಕಾಂಗ್ರೆಸ್ ಗ್ಯಾರಂಟಿ ಯೋಜನೆ ಬಗ್ಗೆ ಕಿಡಿಕಾರಿದ್ದಾರೆ. ಅಲ್ಲದೇ ರಾಜ್ಯದ ಜನತೆ ಕರೆಂಟ್ ಬಿಲ್ ಕಟ್ಟಬೇಡಿ, 200 ಯೂನಿಟ್‌ಗೆ ವಿದ್ಯುತ್‌ ಬಿಲ್‌ ಕಟ್ಟಬೇಡಿ ಅಂತ ಕರೆ ನೀಡಿದ್ದಾರೆ. ಅಲ್ಲದೇ, ಮಹಿಳೆಯರು ಸರ್ಕಾರಿ ಬಸ್‌‌ನಲ್ಲಿ ಟಿಕೆಟ್ ಪಡೆಯಬೇಡಿ, ಕಾಂಗ್ರೆಸ್ 5 ಗ್ಯಾರಂಟಿ ಯೋಜನೆಗಳನ್ನು ಕೂಡಲೇ ಜಾರಿಗೆ ತರಬೇಕು ಅಂತ ಒತ್ತಾಯಿಸಿದರು.


ಇದನ್ನೂ ಓದಿ: Karnataka Cabinet Expanstion: 24 ಶಾಸಕರಿಗೆ ಒಲಿದು ಬಂದ 'ಮಂತ್ರಿ ಭಾಗ್ಯ'! 'ಕೈ' ಲಿಸ್ಟ್‌ನಲ್ಲಿ ಯಾರ ಯಾರ ಹೆಸರಿದೆ?




ನನಗೂ ಕೃಷಿ ಸಚಿವನಾಗುವ ಆಸೆಯಿದೆ


ಕಾಂಗ್ರೆಸ್ ಗ್ಯಾರಂಟಿ ಜಾರಿಯಾಗದಿದ್ರೆ ರಾಜಕೀಯ ಸನ್ಯಾಸ ಸ್ವೀಕರಿಸ್ತೇನೆ ಎಂದು ನವಲಗುಂದ ಕಾಂಗ್ರೆಸ್ ಶಾಸಕ ಎನ್.ಎಚ್ ಕೋನರೆಡ್ಡಿ ಸವಾಲ್ ಹಾಕಿದ್ದಾರೆ. ನನಗೂ ಸಹ ಮುಖ್ಯ ಮಂತ್ರಿ, ಉಪಮುಖ್ಯ ಮಂತ್ರಿ, ಮಂತ್ರಿ ಯಾಗಬೇಕು ಅನ್ನೋ ಆಸೆಯಿದೆ. ಅವಕಾಶ ಸಿಗುತ್ತೆ ಅಂತ ಎಲ್ಲರಿಗೂ ಆಸೆ ಇರುತ್ತೆ. ನನಗೂ ಕೃಷಿ ಸಚಿವನಾಗುವ ಆಸೆಯಿದೆ. ಯುವಕರಿಗೆ ಮತ್ತು ಹೊಸ ಮುಖಗಳಿಗೆ ಅವಕಾಶ ನೀಡಬೇಕು ಅಂದರೆ ನನ್ನನ್ನು ಸಹ ಪರಿಗಣಿಸಿ, ನಮ್ಮ ಪಕ್ಷದ ವರಿಷ್ಠರಿಗೆ ಇದು ನನ್ನ ಮನವಿ.


ನನ್ನ ಬಳಿ ಹೊಸ ಡ್ರೆಸ್ ಯಾವಾಗಲೂ ಇರುತ್ತೆ, ನಾನು ರೈತ ಯಾವ ಡ್ರೆಸ್ ಆದರೇನು? ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗೆ ಸಚಿವ ಸ್ಥಾನ ನೀಡಬೇಕು, ಸಚಿವ ಸ್ಥಾನ ಕೊಟ್ಟರೆ ಏನು ತಪ್ಪಿಲ್ಲ. ಅವರು ಹಿರಿಯರು ಮತ್ತು ಮಾಜಿ ಸಿಎಂ ಇದ್ದಾರೆ. ಅವರಿಗೆ ಸೂಕ್ತ ಸ್ಥಾನಮಾನ ಕೊಟ್ರೆ ಒಳ್ಳೆಯದು. ಐದು ಗ್ಯಾರಂಟಿ ಜಾರಿಗೆ ಮಾಡೇ ಮಾಡುತ್ತೇವೆ. ಅದಕ್ಕಾಗಿ ಸ್ವಲ್ಪ ಕಾಲಾವಕಾಶ ಬೇಕು, ಐದು ಗ್ಯಾರಂಟಿ ಜಾರಿ ಆಗದಿದ್ದರೆ ರಾಜಕೀಯ ಸನ್ಯಾಸತ್ವ ಸ್ವೀಕಾರ ಮಾಡುವೆ ಎಂದು ಸವಾಲು ಹಾಕಿದ್ದಾರೆ.

top videos
    First published: