ಚಿಕ್ಕಮಗಳೂರು(ಏ.12): ಮುಖಕ್ಕೆ ಮಾಸ್ಕ್ ಇಲ್ಲ. ಸಾಮಾಜಿಕ ಅಂತರ ಕೇಳೋದೆ ಬೇಡ. ಮುಖದ ಮೇಲೆ ಮಾಸ್ಕ್ ಇದ್ದವರಿಗಿಂತ ಇಲ್ಲದವರೇ ಹೆಚ್ಚು, ಕೊರೋನಾ ಮಧ್ಯೆಯೇ ಚಿಕ್ಕಮಗಳೂರು ಟೀಮ್ 65 ಯುವಕರ ತಂಡ ನಗರದ ಬೈಪಾಸ್ ರಸ್ತೆಯ ಪಟಾಕಿ ಗ್ರೌಂಡ್ನಲ್ಲಿ ಬೈಕ್ ರ್ಯಾಲಿ ಆಯೋಜಿಸಿತ್ತು. ಈ ಕೊರೋನಾ ಕಾಲದಲ್ಲಿ ಇದೆಲ್ಲಾ ಬೇಕಿತ್ತಾ ಅನ್ನೋ ಜಿಜ್ಞಾಸೆ ಕೂಡ ಕಾಡ್ತಿದೆ.
ಯಾಕೆಂದರೆ ಒಬ್ಬರ ಮುಖದಲ್ಲೂ ಮಾಸ್ಕ್ ಇರಲಿಲ್ಲ. ಸಾಮಾಜಿಕ ಅಂತರವಂತೂ ದೂರದ ಮಾತು. ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಜೋರಾಗ್ತಿದೆ. ಈ ಮಧ್ಯೆ ಆಯೋಜಕರು ನಾವೆಲ್ಲಾ ಮುಂಜಾಗ್ರತಾ ಕ್ರಮ ಕೈಗೊಂಡು ಆಯೋಜನೆ ಮಾಡಿದ್ದೇವೆ ಅಂತಿದ್ದಾರೆ.
ಇನ್ನು ಸುಜ್ಹಕಿ, ಹೀರೋ, ಯಮಹಾ ಕಂಪನಿಯ ಬೈಕ್ಗಳು ಕಿರಿದಾದ ಅಖಾಡದಲ್ಲಿ ನಾ ಮುಂದು ತಾ ಮುಂದು ಅಂತಾ ಧೂಳೆಬ್ಬಿಸ್ತಾ ಸಾಗುತ್ತಿದ್ದರೆ, ನೋಡಿದವರಿಗೆ ತಾವೇ ಬೈಕ್ ರೈಡ್ ಮಾಡಿದಷ್ಟು ಖುಷಿ ಆಗ್ತಿತ್ತು. ನೋಡೋಕೆ ಬೈಕ್ ರ್ಯಾಲಿಯೇನೋ ಚೆನ್ನಾಗಿತ್ತು. ಆದರೆ ಕೊರೊನಾ ಟೈಮ್ ನಲ್ಲಿ ರ್ಯಾಲಿ ಬೇಕಿತ್ತಾ ಅನ್ನೋದು ಸಾರ್ವಜನಿಕರ ಮಾತಾಗಿದೆ.
ಕೊರೋನಾ ಎಫೆಕ್ಟ್: ಬನ್ನೇರುಘಟ್ಟ ಪಾರ್ಕ್ಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆ
ಪ್ರೇಕ್ಷಕರ ಮನೋರಂಜನೆಗೆಂದೇ ಸಿದ್ಧಪಡಿಸಿದ್ದ ಟ್ರ್ಯಾಕ್ನಲ್ಲಿ ಸ್ಪರ್ಧಾಳುಗಳು ಮೈನವಿರೇಳಿಸೋ ಪ್ರದರ್ಶನ ತೋರ್ಸಿದ್ರು. ಒಂದರಿಂದ ಒಂದೂವರೆ ಕಿ.ಮೀ. ವ್ಯಾಪ್ತಿಯ ಹಾವು-ಬಳುಕಿನ ಮೈಕಟ್ಟಿನ ಮಣ್ಣಿನ ಹಾದಿಯಲ್ಲಿ ಚಾಲಕರ ಚಾಕಚಕ್ಯತೆ ನೋಡ್ತಿದ್ದೋರ ಎದೆ ಮೇಲೆ ಬೈಕ್ ಹೋದಂತಿತ್ತು. ಅಖಾಡದಲ್ಲಿ ಕೇರಳ, ಚೆನ್ನೈ, ತಮಿಳುನಾಡಿನ ಡ್ರೈವರ್ಗಳಿಗೆ ರಾಜ್ಯದ ಬೆಂಗಳೂರು, ಮೈಸೂರು, ಬೆಳಗಾವಿ, ಹಾಸನ, ಮಂಗಳೂರು, ತುಮಕೂರಿನ ರೈಡರ್ಗಳು ಸವಾಲೆಸಿದ್ರು. ರ್ಯಾಲಿಯಲ್ಲಿ ಒಟ್ಟು 90ಕ್ಕೂ ಹೆಚ್ಚು ರೈಡರ್ಗಳು ಗೆಲುವಿನ ಜಿದ್ದಾಜಿದ್ದಿಗೆ ಬಿದ್ದಿದ್ರು. ರ್ಯಾಲಿಯ ಚಾಂಪಿಯನ್ ಆಗೋಕೆ ರೈಡರ್ಗಳು ಮನಸ್ಸೋ ಇಚ್ಛೆ ನುಗ್ತಿರೋದ್ನ ಕಂಡ ಪ್ರೇಕ್ಷಕರು ಫುಲ್ ಎಂಜಾಯ್ ಮಾಡಿದ್ರು. ರೈಡರ್ ಕೂಡ ಕೊರೊನಾ ನಾನು ಬರೋದಿಲ್ಲ ಎಂದಿದ್ದೆ. ಆದರೆ, ಆಯೋಜಕರು ನಮ್ಮಲ್ಲಿ ಕಡಿಮೆ ಇದೆ. ನಾವು ಎಲ್ಲಾ ಮುಂಜಾಗೃತ ಕ್ರಮಕೈಗೊಂಡಿದ್ದೇವೆ ಎಂದಿದ್ದಕ್ಕೆ ಬಂದೆ. ಆಯೋಜನೆ ಚೆನ್ನಾಗಿದೆ ಅಂತಿದ್ದಾರೆ ಸ್ಪರ್ಧಾಳು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ