• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Bharath Bandh: ನಮ್ಮದು ರೈತಪರ ಸರ್ಕಾರ; ಭಾರತ್ ಬಂದ್ ಯಶಸ್ವಿಯಾಗಲ್ಲ; ಸಿಎಂ ಬಿಎಸ್ ಯಡಿಯೂರಪ್ಪ

Bharath Bandh: ನಮ್ಮದು ರೈತಪರ ಸರ್ಕಾರ; ಭಾರತ್ ಬಂದ್ ಯಶಸ್ವಿಯಾಗಲ್ಲ; ಸಿಎಂ ಬಿಎಸ್ ಯಡಿಯೂರಪ್ಪ

ಸಿಎಂ ಬಿಎಸ್ ಯಡಿಯೂರಪ್ಪ

ಸಿಎಂ ಬಿಎಸ್ ಯಡಿಯೂರಪ್ಪ

ಕಾಂಗ್ರೆಸ್ ಮುಳುಗಿ ಹೋಗುತ್ತಿರುವ ಹಡಗು. ಅವರು ಕಪ್ಪು-ಬಿಳಿ ಯಾವ ಬಣ್ಣದ ಪಟ್ಟಿಯನ್ನಾದರೂ ಧರಿಸಲಿ, ಅವರನ್ನು ಯಾರು ಕೇಳುತ್ತಾರೆ ಎಂದು ಕಾಂಗ್ರೆಸ್​ ಪ್ರತಿಭಟನೆ ಬಗ್ಗೆ ಸಿಎಂ ವ್ಯಂಗ್ಯ ಮಾಡಿದರು.

  • Share this:

    ಬೆಂಗಳೂರು(ಡಿ.08): ಕೃಷಿ ಮಸೂದೆ ವಿರೋಧಿಸಿ ಇಂದು ಭಾರತ್​ ಬಂದ್​ಗೆ ಕರೆ ನೀಡಲಾಗಿದ್ದು, ವಿವಿಧ ರೈತ ಸಂಘಟನೆಗಳು ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿವೆ. ಕರ್ನಾಟಕದಲ್ಲಿಯೂ ಪ್ರತಿಭಟನೆಯ ಬಿಸಿ ಜೋರಾಗಿದೆ. ರಾಜ್ಯ ಕಾಂಗ್ರೆಸ್​ ನಾಯಕರು ರೈತರ ಹೋರಾಟಕ್ಕೆ ಬೆಂಬಲ ನೀಡಿದ್ದು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಇಂದಿನ ಭಾರತ್ ಬಂದ್ ಕುರಿತಾಗಿ ವಿಧಾನಸೌಧದಲ್ಲಿ ಮಾತನಾಡಿರುವ ಸಿಎಂ ಬಿಎಸ್ ಯಡಿಯೂರಪ್ಪ, ಭಾರತ್​ ಬಂದ್ ಎಲ್ಲಿಯೂ ಯಶಸ್ವಿಯಾಗಿಲ್ಲ, ಬೆಂಗಳೂರಿನಲ್ಲಿಯೂ ಯಶಸ್ವಿಯಾಗಲ್ಲ ಎಂದು ಹೇಳಿದ್ದಾರೆ.


    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿಯವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ರೈತಪರವಾದ ಸರ್ಕಾರ ನಮ್ಮದು . ರೈತ ಪರವಾದ ಕಾಯ್ದೆಗಳನ್ನು ಜಾರಿಗೆ ತಂದಿದ್ದಾರೆ.  ಭಾರತ ಬಂದ್ ಎಲ್ಲೂ ಯಶಸ್ವಿಯಾಗಿಲ್ಲ. ಬೆಂಗಳೂರಿನಲ್ಲೂ ಯಶಸ್ವಿಯಾಗಲ್ಲ.  ವಾಸ್ತವಿಕ ಅಂಶಗಳನ್ನು ಗಮನಿಸಬೇಕು ರಾಜಕೀಯ ಕಾರಣಕ್ಕಾಗಿ ಬಂದ್​ಗೆ ಕರೆ ನೀಡುವುದು ಸರಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.


    ಕೇಂದ್ರ ಸರ್ಕಾರ ಅಂಬಾನಿ, ಅದಾನಿಯ ಕಾರ್ಪೋರೇಟ್ ಕಂಪನಿಗಳ ಕೈಗೊಂಬೆ; ಮಾಜಿ ಸಿಎಂ ಸಿದ್ದರಾಮಯ್ಯ


    ಇನ್ನು, ಕೈ ನಾಯಕರು ವಿಧಾನಸೌಧದ ಗಾಂಧಿ  ಪ್ರತಿಮೆ ಬಳಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮಾಡಿದ ವಿಚಾರಕ್ಕೆ  ಪ್ರತಿಕ್ರಿಯಿಸಿದ ಯಡಿಯೂರಪ್ಪ,  ಕಾಂಗ್ರೆಸ್ ಮುಳುಗಿ ಹೋಗುತ್ತಿರುವ ಹಡಗು. ಅವರು ಕಪ್ಪು-ಬಿಳಿ ಯಾವ ಬಣ್ಣದ ಪಟ್ಟಿಯನ್ನಾದರೂ ಧರಿಸಲಿ, ಅವರನ್ನು ಯಾರು ಕೇಳುತ್ತಾರೆ ಎಂದು ಕಾಂಗ್ರೆಸ್​ ಪ್ರತಿಭಟನೆ ಬಗ್ಗೆ ಸಿಎಂ ವ್ಯಂಗ್ಯ ಮಾಡಿದರು.


    ಮತ್ತೆ ಪುನರುಚ್ಛಿಸಿದ ಸಿಎಂ ಬಿಎಸ್​ವೈ, ಭಾರತ್ ಬಂದ್ ಎಲ್ಲೂ ಯಶಸ್ವಿ ಆಗಿಲ್ಲ.  ಕರ್ನಾಟಕದ ಜನ, ಬೆಂಗಳೂರು ಜನ ತಲೆಕೆಡಿಸಿಕೊಳ್ಳು ಅಗತ್ಯ ಇಲ್ಲ  ಎಂದರು. ಇದೇ ವೇಳೆ, ಪ್ರಧಾನಿ ಮೋದಿ ಹಾಗೂ ನಮ್ಮ ಸರ್ಕಾರ ರೈತರ ಪರ ಸರ್ಕಾರಗಳು ಪ್ರಧಾನಿ ಮೋದಿ ಯಾವತ್ತೂ ರೈತರ ವಿರುದ್ದ ಹೋದವರಲ್ಲ. ರಾಜಕೀಯಕ್ಕಾಗಿ ಬಂದ್ ಮಾಡೋದು ಸರಿಯಲ್ಲ ಎಂದು ಕಟುವಾಗಿ ಟೀಕಿಸಿದರು.

    Published by:Latha CG
    First published: