ಬೆಂಗಳೂರು: ಜೆಡಿಎಸ್ ಯುವ ಮುಖಂಡ, ನಟ ನಿಖಿಲ್ ಕುಮಾರಸ್ವಾಮಿ ಬೆಂಬಲಿಗರು ಹಾಗೂ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಖಾನ್ ಬೆಂಬಲಿಗರ ಮಧ್ಯೆ ಗಲಾಟೆ ನಡೆದಿದೆ. ಸದಾಶಿವನಗರದಲ್ಲಿರುವ ಗೆಸ್ಟ್ಹೌಸ್ ಎನ್ನಲಾದ ರಂಕಾ ಅಪಾರ್ಟ್ಮೆಂಟ್ ಬಳಿ ಇಬ್ಬರು ಮುಖಂಡ ಬೆಂಬಲಿಗರು ಗಲಾಟೆ ಮಾಡಿಕೊಂಡಿದ್ದಾರೆ. ಗಲಾಟೆ ಸದಾಶಿವನಗರ ಠಾಣೆ ಮೆಟ್ಟಿಲೇರಿದೆ. ಗೆಸ್ಟ್ ಹೌಸ್ ಬಳಿ ನಿಖಿಲ್ ಕುಮಾರಸ್ವಾಮಿಯವರ ಮೂವರು ಬಾಡಿ ಗಾರ್ಡ್ ಗಳು ತೆರಳಿದ್ದಾರೆ. ಗೆಸ್ಟ್ ಹೌಸ್ ಬಳಿಯಿದ್ದ ಕೇರ್ ಟೇಕರ್ ರನ್ನ ಓಡಸಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಗೆಸ್ಟ್ ಹೌಸ್ ನಮ್ಮದು ಎಂದು ಕೇರ್ ಟೇಕರ್ ರನ್ನ ಓಡಿಸಿದ್ದಾರೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗಲಾಟೆ ನಡೆದಿದೆ.
ಬೆಂಬಲಿಗರ ಗಲಾಟೆ ಠಾಣೆ ಮೆಟ್ಟಿಲೇರುತ್ತಿದ್ದಂತೆ ಸದಾಶಿವನಗರ ಠಾಣೆಗೆ ಜಮೀರ್ ಪಿಎ ಫಾರುಕ್ ದೌಡಾಯಿಸಿದರು. ಸದ್ಯ ಈ ಫ್ಲ್ಯಾಟ್ ಜಮೀರ್ ಅವರ ಹೆಸರಲ್ಲಿ ಇದೆ ಎಂದು ಫಾರೂಕ್ ತಿಳಿಸಿದ್ದಾರೆ. ಸದಾಶಿವನಗರ ರಂಕಾ ಎನ್ ಕ್ಲೇವ್ ಅಪಾರ್ಟ್ಮೆಂಟ್ ಗೆ ಆಗಮಿಸಿದ ಸದಾಶಿವನಗರ ಪೊಲೀಸರು ಪರಿಶೀಲನೆ ನಡೆಸಿದರು. ಸದಾಶಿವನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ನೇತೃತ್ವದಲ್ಲಿ ಪರಿಶೀಲನೆ ನಡೆಯಿತು. ಇನ್ನು ದೂರು ನೀಡಲು ಹಿಂದೇಟು ಹಾಕಿದ ಪಿಎ ಫಾರೂಕ್ ಮಾತುಕತೆ ಮೂಲಕವೇ ಗಲಾಟೆ ಇತ್ಯರ್ಥ ಮಾಡಿಕೊಳ್ಳೋಣ ಎಂದು ಹೇಳಿದ್ದಾರೆ.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಾರು ಚಾಲಕ ಕೂಡ ಸ್ಥಳಕ್ಕೆ ಆಗಮಿಸಿದ್ದರು. ಗಲಾಟೆ ಬಗ್ಗೆ ಕಾರು ಚಾಲಕ ಶೌಕತ್ ಮಾಹಿತಿ ಪಡೆದುಕೊಂಡರು. ಈ ವೇಳೆ ಮಾಧ್ಯಮಗಳು ಪ್ರಶ್ನಿಸಿದಾಗ ಅಣ್ಣ ಹೋಗಿ ನೋಡು ಏನು ಗಲಾಟೆ ಅಂತ ಹೇಳಿದರು. ಹಾಗಾಗಿ ಸ್ಥಳಕ್ಕೆ ಬಂದಿದ್ದೇನೆ ಅಷ್ಟೇ ಎಂದು ಪ್ರತಿಕ್ರಿಯಿಸಿದ್ದಾರೆ.
ಚಾಮರಾಜನಗರದ ಕ್ಷೇತ್ರದ ಶಾಸಕ ಜಮೀರ್ ಕಾಂಗ್ರೆಸ್ಗೆ ಬರುವ ಮುನ್ನ ಜೆಡಿಎಸ್ನಲ್ಲಿದ್ದರು. ಎಚ್ಡಿ ಕುಮಾರಸ್ವಾಮಿ ಅವರ ವಿರುದ್ಧ ಭಿನ್ನಮತದ ಬಾವುಟ ಹಾರಿಸಿ ಕಾಂಗ್ರೆಸ್ಗೆ ಬಂದಿದ್ದರು. ನಂತರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯರ ಆಪ್ತ ಬಳಗದಲ್ಲಿ ಜಮೀರ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಜೆಡಿಎಸ್ ತೊರೆದ ಜಮೀರ್ ಹಾಗೂ ಎಚ್ಡಿಕೆ ರಾಜಕೀಯ ವೈರಿಗಳು ಎನ್ನಬಹುದು. ಇನ್ನು ಎಚ್ಡಿಕೆ ಅವರು ಪುತ್ರ ನಿಖಿಲ್ ಸಮೇತ ಇಡೀ ಕುಟುಂಬ ಬಿಡದಿ ಬಳಿಯ ಫಾರ್ಮ್ಹೌಸ್ನಲ್ಲಿ ಲಾಕ್ಡೌನ್ ಸಮಯವನ್ನು ಕಳೆಯುತ್ತಿದ್ದಾರೆ. ಸದಾಶಿವನಗರ ಅಪಾರ್ಟ್ಮೆಂಟ್ ಬಳಿ ನಡೆದಿರುವ ಗಲಾಟೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 92 ಸಾವಿರದ,596 ಕೋವಿಡ್-19 ಪ್ರಕರಣಗಳು ದಾಖಲಾಗಿದ್ದು, ದೇಶದ ಸಕ್ರಿಯ ಕೇಸ್ಲೋಡ್ ಸಂಖ್ಯೆ 12 ಲಕ್ಷ, 31 ಸಾವಿರದ, 415ಕ್ಕೆ ಬಂದು ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ 1 ಲಕ್ಷ, 62 ಸಾವಿರದ, 664 ಜನರು ದೇಶದ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ. ಕಳೆದ 24 ಗಂಟೆಗಳಲ್ಲಿ 2,219 ಜನರು ಈ ಮಾರಕ ವೈರಾಣುವಿಗೆ ಬಲಿಯಾಗಿದ್ದು, ದೇಶದ ಒಟ್ಟು ಸಾವಿನ ಸಂಖ್ಯೆ 3 ಲಕ್ಷ, 53 ಸಾವಿರದ, 528 ಕ್ಕೆ ಲುಪಿದೆ. ಇದೇ ವೇಳೆ ದೇಶಾದ್ಯಂತ ಒಟ್ಟು 23 ಕೋಟಿ, 90 ಲಕ್ಷ, 58 ಸಾವಿರದ 360 ಕೊರೊನಾ ಲಸಿಕೆ ನೀಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ