• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Corona Lockdown: ಜನತಾ ಕರ್ಫ್ಯೂ ನಾಲ್ಕನೇ ದಿನವೂ ಮುಂದುವರೆದ ಕಾರ್ಮಿಕರ ವಲಸೆ, ಬೆಂಗಳೂರಿನಿಂದ ತಮ್ಮೂರಿಗೆ ತೆರಳಲು ರೈಲ್ವೆ ನಿಲ್ದಾಣದಲ್ಲೇ ಠಿಕಾಣಿ

Corona Lockdown: ಜನತಾ ಕರ್ಫ್ಯೂ ನಾಲ್ಕನೇ ದಿನವೂ ಮುಂದುವರೆದ ಕಾರ್ಮಿಕರ ವಲಸೆ, ಬೆಂಗಳೂರಿನಿಂದ ತಮ್ಮೂರಿಗೆ ತೆರಳಲು ರೈಲ್ವೆ ನಿಲ್ದಾಣದಲ್ಲೇ ಠಿಕಾಣಿ

ರೈಲಿಗಾಗಿ ಕಾಯುತ್ತಿರುವ ಕಾರ್ಮಿಕರು

ರೈಲಿಗಾಗಿ ಕಾಯುತ್ತಿರುವ ಕಾರ್ಮಿಕರು

ಬಸ್ ಗಳಿಲ್ಲದೆ ಇರೋದ್ರಿಂದ ಮೂರು ನಾಲ್ಕು ದಿನದ ಹಿಂದೆಯೇ ಬಂದು ರೈಲ್ವೇ ನಿಲ್ದಾಣದಲ್ಲಿ ಠಿಕಾಣಿ ಹೂಡಿದ್ದಾರೆ. ಹೆಚ್ಚಿನ ಕಾರ್ಮಿಕರು ಬಿಹಾರ,ಪಶ್ವಿಮ ಬಂಗಾಳ, ಮಣಿಪುರ, ಉತ್ತರಪ್ರದೇಶದ, ರಾಜಸ್ತಾನದ ಕಡೆ ಪ್ರಯಾಣ ಬೆಳಸುತ್ತಿದ್ದಾರೆ. ಈ ರೈಲುಗಳಲ್ಲಿ ಅರ್ಧ ದಾರಿಯವರಗೆ ಸಾಗಿ ಅಲ್ಲಿಂದ ಬೇರೆ ರೈಲು ಹಿಡಿಯುವ ಆಲೋಚನೆಯೂ ಹಲವರದ್ದಾಗಿದೆ.

ಮುಂದೆ ಓದಿ ...
  • Share this:

    ಬೆಂಗಳೂರು(ಮೇ1): ಕರ್ನಾಟಕದಲ್ಲಿ ಜನತಾ ಕರ್ಫ್ಯೂ ನಾಲ್ಕನೇ ದಿನವಾದ ಇಂದು ಕೂಡಾ ಮುಂದುವರೆದಿದೆ. ರಾಜಧಾನಿ ಬೆಂಗಳೂರಿನಲ್ಲಿ ಕಾರ್ಮಿಕರ ವಲಸೆಯೂ ನಿರಂತರವಾಗಿ ಮುಂದುವರೆದಿದೆ. 14 ದಿನಗಳ ಕರ್ಫ್ಯೂ ಘೋಷಣೆಯಾದಾಗಿನಿಂದ ನಿರಂತರವಾಗಿ ವಲಸೆ ಪರ್ವ ನಡೆಯುತ್ತಿದೆ.


    ಬೆಂಗಳೂರಿನ ಮೆಜೆಸ್ಟಿಕ್​ನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಮುಂಜಾನೆಯೇ ಅನೇಕ ಕಾರ್ಮಿಕರು ತಂತಮ್ಮ ಊರುಗಳಿಗೆ ಹೋಗಲು ಜಮಾಯಿಸಿದ್ದಾರೆ. ಬೆಳಗ್ಗೆ 9 ಮತ್ತು 9.30ರ ರೈಲಿನಲ್ಲಿ ತಂತಮ್ಮ ಊರುಗಳಿಗೆ ಹೋಗಲು ಕಾರ್ಮಿಕರು ಮುಂಜಾನೆಯೇ ಬಂದು ಕಾಯುತ್ತಿದ್ದಾರೆ. ಬಸ್ ಗಳಿಲ್ಲದ ಹಿನ್ನಲೆಯಲ್ಲಿ ಬೆಳಿಗ್ಗೆಯೇ ಕ್ಯಾಬ್ ಗಳಲ್ಲಿ ರೈಲ್ವೇ ನಿಲ್ದಾಣಕ್ಕೆ ಕಾರ್ಮಿಕರು ಆಗಮಿಸುತ್ತಿದ್ದು, ಎಲ್ಲರೂ ಗಂಟು ಮೂಟೆ ಸಮೇತ ತಮ್ಮ ಊರುಗಳತ್ತ ಹೊರಟು ನಿಂತಿದ್ದಾರೆ.


    ಕೆಲವರು ಬಸ್ ಗಳಿಲ್ಲದೆ ಇರೋದ್ರಿಂದ ಮೂರು ನಾಲ್ಕು ದಿನದ ಹಿಂದೆಯೇ ಬಂದು ರೈಲ್ವೇ ನಿಲ್ದಾಣದಲ್ಲಿ ಠಿಕಾಣಿ ಹೂಡಿದ್ದಾರೆ. ಹೆಚ್ಚಿನ ಕಾರ್ಮಿಕರು ಬಿಹಾರ,ಪಶ್ವಿಮ ಬಂಗಾಳ, ಮಣಿಪುರ, ಉತ್ತರಪ್ರದೇಶದ, ರಾಜಸ್ತಾನದ ಕಡೆ ಪ್ರಯಾಣ ಬೆಳಸುತ್ತಿದ್ದಾರೆ. ಈ ರೈಲುಗಳಲ್ಲಿ ಅರ್ಧ ದಾರಿಯವರಗೆ ಸಾಗಿ ಅಲ್ಲಿಂದ ಬೇರೆ ರೈಲು ಹಿಡಿಯುವ ಆಲೋಚನೆಯೂ ಹಲವರದ್ದಾಗಿದೆ.


    ಇದನ್ನೂ ಓದಿhttps://kannada.news18.com/news/explained/myths-and-truths-around-corona-vaccine-doctors-clarify-them-all-sktv-557885.html


    ರಾಜ್ಯ ಸರ್ಕಾರ ಇದು ತಾತ್ಕಾಲಿಕ ಕರ್ಫ್ಯೂ, ಹಾಗಾಗಿ ಯಾರೂ ವಲಸೆ ಹೋಗಬಾರದು ಎಂದು ಕೂಲಿ ಕಾರ್ಮಿಕರಲ್ಲಿ ಮನವಿ ಮಾಡಿತ್ತು. ಆದ್ರೆ ಈಗ 14 ದಿನ ಇರುವ ಕರ್ಫ್ಯೂ ಮುಂದೆ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗದೆ ಮತ್ತಷ್ಟು ದಿನ ಮುಂದುವರೆದರೆ ಆಗೇನು ಮಾಡುವುದು ಎನ್ನುವ ಆತಂಕ ಈ ಕಾರ್ಮಿಕರಲ್ಲಿದೆ.


    ಅಲ್ಲದೇ ಇಲ್ಲಿ ಅಂದಿನ ದುಡಿಮೆಯಿಂದ ಅಂದಿನ ತುತ್ತಿನ ಚೀಲ ತುಂಬಿಸಿಕೊಳ್ಳುವ ಇವರು ಕೆಲಸವೂ ಇಲ್ಲದೇ ಪರ ಊರಿನಲ್ಲಿ ಹೆಚ್ಚು ಸಮಯ ಇರಲು ಇಚ್ಛಿಸುತ್ತಿಲ್ಲ. ತಂತಮ್ಮ ಊರುಗಳಿಗೆ ತೆರಳಿ ಕನಿಷ್ಠ ಕುಟುಂಬದವರೊಂದಿಗಾದರೂ ಇರುವ ಆಶಯದಿಂದ ಬೆಂಗಳೂರು ತೊರೆದು ಹೋಗುತ್ತಿದ್ದಾರೆ.

    Published by:Soumya KN
    First published: