• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka LockDown: ರಾಜಧಾನಿ ತೊರೆಯಲು ಮುಂದಾದ ವಲಸಿಗರು; ಮೆಜೆಸ್ಟಿಕ್​ನಲ್ಲಿ ಹೆಚ್ಚಿದ ಪ್ರಯಾಣಿಕರ ಸಂಖ್ಯೆ

Karnataka LockDown: ರಾಜಧಾನಿ ತೊರೆಯಲು ಮುಂದಾದ ವಲಸಿಗರು; ಮೆಜೆಸ್ಟಿಕ್​ನಲ್ಲಿ ಹೆಚ್ಚಿದ ಪ್ರಯಾಣಿಕರ ಸಂಖ್ಯೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಳೆದ ಬಾರಿ ಏಕಾಏಕಿ ಲಾಕ್​ಡೌನ್​ನಿಂದಾಗಿ ಊರು ತೊರೆಯದೇ ರಾಜಧಾನಿಯಲ್ಲಿ ತೊಂದರೆಗೆ ಒಳಗಾದ ಜನಸಾಮಾನ್ಯರು, ಈ ಬಾರಿ ಕೂಡ ತೊಂದರೆ ಅನುಭವಿಸುವುದು ಬೇಡ ಎಂದು ರಾಜಧಾನಿ ತೊರೆಯಲು ಮುಂದಾಗಿದ್ದಾರೆ.

  • Share this:

    ಬೆಂಗಳೂರು (ಏ. 26): ಸೋಂಕು ನಿಯಂತ್ರಣಕ್ಕೆ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ ನಾಳೆಯಿಂದ ರಾಜ್ಯದಲ್ಲಿ ಸಂಪೂರ್ಣ ಲಾಕ್​​ಡೌನ್​ ಘೋಷಣೆ ಮಾಡಿದೆ. ಏ. 27ರಿಂದ ರಾತ್ರಿಯಿಂದ ಮೇ 10ರವರೆಗೆ ರಾಜ್ಯ ಸಂಪೂರ್ಣ ವಾಗಿ ಸ್ತಬ್ಧವಾಗಲಿದೆ. ಕೊರೋನಾ ನಿಯಂತ್ರಣಕ್ಕೆ ಈ ಕ್ರಮ ಅನಿವಾರ್ಯವಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಈ ಲಾಕ್​ಡೌನ್​ನಿಂದಾಗಿ ಬಡ ಮತ್ತು ಮದ್ಯಮ ವರ್ಗದವರು ಕಂಗೆಟ್ಟಿದ್ದಾರೆ. ಕಳೆದ ಬಾರಿ ಲಾಕ್​ಡೌನ್​ನಿಂದ ಉದ್ಯೋಗವಿಲ್ಲದೇ, ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿದ್ದ ಜನರಿಗೆ ಈ ಬಾರಿಯ ಮತ್ತೊಂದು ಲಾಕ್​ಡೌನ್​ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಕಳೆದ ಬಾರಿ ಏಕಾಏಕಿ ಲಾಕ್​ಡೌನ್​ನಿಂದಾಗಿ ಊರು ತೊರೆಯದೇ ರಾಜಧಾನಿಯಲ್ಲಿ ತೊಂದರೆಗೆ ಒಳಗಾದ ಜನಸಾಮಾನ್ಯರು, ಈ ಬಾರಿ ಕೂಡ ತೊಂದರೆ ಅನುಭವಿಸುವುದು ಬೇಡ ಎಂದು ರಾಜಧಾನಿ ತೊರೆಯಲು ಮುಂದಾಗಿದ್ದಾರೆ.


    ಲಾಕ್​ಡೌನ್​ ಜಾರಿಗೆ ಇನ್ನೂ ಒಂದು ದಿನ ಬಾಕಿ ಇದೆ. ಈ ನಡುವೆಯೇ ತಾರಾತುರಿಯಲ್ಲಿ ಮಧ್ಯಮ ಮತ್ತು ಬಡ ವರ್ಗದವರು ರಾಜಧಾನಿ ತೊರೆಯಲು ಮುಂದಾಗಿದ್ದಾರೆ. ಸರ್ಕಾರ ಕಟ್ಟಡ ಕೂಲಿ ಕಾರ್ಮಿಕರು ಮತ್ತು ಗಾರ್ಮೆಂಟ್ಸ್​ ಉದ್ಯೋಗಿಗಳಿಗೆ ಅವಕಾಶ ನೀಡಿದೆ. ಆದರೆ, ಉಳಿದಂತೆ ಇತರೆ ಕಾರ್ಯದಲ್ಲಿ ನಿರತರಾಗಿವರುವ ವಲಸಿಗರು ಈ ಲಾಕ್​ಡೌನ್​ನಿಂದ ಸಾಕಷ್ಟು ತೊಂದರೆಗೆ ಒಳಗಾಗಿದ್ದಾರೆ. ಕೆಲಸವಿಲ್ಲದೇ ಅನಗತ್ಯ ಖರ್ಚಿನೊಂದಿಗೆ ದಿನ ದೂಡುವ ಬದಲು ಸ್ವಂತ ಊರಿಗೆ ತೆರಳುವುದು ಲೇಸು ಎಂಬ ನಿರ್ಧಾರಕ್ಕೆ ಬಂದಿದ್ದಾರೆ.


    ಈಗಾಗಲೇ ವಿಕೇಂಡ್​ ಲಾಕ್​ಡೌನ್​ ಘೋಷಣೆ ಮಾಡಿದ ಹಿನ್ನಲೆ ಕೆಲವು ವಲಸಿಗರು ಊರು ತೊರೆಯಲು ನಿರ್ಧರಿಸಿದ್ದು, ಇದೀಗ ರಾಜ್ಯ ಸಂಪೂರ್ಣ ಸ್ತಬ್ದವಾಗುತ್ತಿರುವ ಹಿನ್ನಲೆ ಜನರು ಮೆಜೆಸ್ಟಿಕ್​ನತ್ತ ದಾಪುಗಾಲು ಇಡಲು ಮುಂದಾಗಿದ್ದಾರೆ. ಜನರು ಕುಟುಂಬ ಸಮೇತ ಸಾರಿಗೆ ಬಸ್​ ನಿಲ್ದಾಣದತ್ತ ಮುಖ ಮಾಡಿರುವ ದೃಶ್ಯ ಕಂಡು ಬಂದಿದೆ


    ಇದನ್ನು ಓದಿ: ಮದ್ಯದಂಗಡಿ ಮುಂದೆ ಸಾಲು ನಿಂತ ಪಾನಪ್ರಿಯರು


    ಇನ್ನು ಕೊರೋನಾ ಹಿನ್ನಲೆ ಬಸ್​ಗಳಲ್ಲಿ ಶೇ 50 ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ಕೋವಿಡ್​ ಮಾರ್ಗಸೂಚಿ ನಡುವೆ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟಾಗುತ್ತಿದ್ದು, ಕೆಸ್​ಆರ್​ಟಿಸಿ ಹೆಚ್ಚುವರಿ ಬಸ್​ ನಿಯೋಜಿಸುವ ಕುರಿತು ಚಿಂತನೆ ನಡೆಸಿದೆ ಎನ್ನಲಾಗಿದೆ. ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಜನರು ಗಟ್ಟು ಮೂಟೆ ಕಟ್ಟಿಕೊಂಡು ಆಗಮಿಸುತ್ತಿದ್ದು, ಸಂಜೆ ಹೊತ್ತಿಗೆ ಮೆಜೆಸ್ಟಿಕ್​ ಬರುವವರ ಸಂಖ್ಯೆ ಮತ್ತಷ್ಟು ಹೆಚ್ಚುವ ನೀರಿಕ್ಷೆ ಇದೆ.


    ಅತಿ ಹೆಚ್ಚಿನ ಸಂಖ್ಯೆಯಲ್ಲಿ ಉತ್ತರ ಕರ್ನಾಟಕದ ವಲಸಿಗರು ಕಂಡು ಬಂದಿದ್ದಾರೆ. ಸೋಂಕು ಕಡಿಮೆಯಾದ ಹಿನ್ನಲೆ ಇವರೆಲ್ಲಾ ಕಳೆದೆರಡೂ ಮೂರು ತಿಂಗಳ ಹಿಂದೆ ರಾಜಧಾನಿಗೆ ಮತ್ತೆ ಕೆಲಸ ಅರಸಿ ವಲಸೆ ಬಂದಿದ್ದರು. ಈಗ ಮತ್ತೊಮ್ಮೆ ಲಾಕ್​ಡೌನ್​ ಘೋಷಣೆಯಾದ ಬಳಿಕ ತಮ್ಮೂರಿನತ್ತ ಪ್ರಯಾಣಕ್ಕೆ ಮುಂದಾಗಿದ್ದಾರೆ.

    Published by:Seema R
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು