ಬೆಂಗಳೂರು: ರಾಜ್ಯದಲ್ಲಿ ಲಾಕ್ಡೌನ್ನ ಮತ್ತೆ 14 ದಿನಗಳ ಕಾಲ ವಿಸ್ತರಿಸಲಾಗಿದೆ. ಅನಗತ್ಯವಾಗಿ ಓಡಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಖುದ್ದು ಸಿಎಂ ಬಿ.ಎಸ್.ಯಡಿಯೂರಪ್ಪ ಎಚ್ಚರಿಸಿದ್ದರು. ವೀಕೆಂಡ್ ಎಂದು ನಿನ್ನೆ, ಇಂದು ವಿನಾಕಾರಣ ರಸ್ತೆಗಳಿದವರಿಗೆ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ. ನಗರದ ಬಹುತೇಕ ರಸ್ತೆಗಳಲ್ಲಿ ಪೊಲೀಸರು ಪರಿಶೀಲನೆ ನಡೆಸಿ ತುರ್ತು ಕಾರಣಗಳಿರುವವರಿಗೆ ಮಾತ್ರ ಅನುಮತಿ ನೀಡಲಾಗುತ್ತಿದೆ. ಸಣ್ಣಪುಟ್ಟ ಕಾರಣ ಹೇಳಿಕೊಂಡು ರಸ್ತೆಗಿಳಿದವರ ವಾನಗಳನ್ನು ಮುಲಾಜಿಲ್ಲದೇ ವಶಕ್ಕೆ ಪಡೆಯಲಾಗುತ್ತಿದೆ. ಪೊಲೀಸರ ಕಟ್ಟುನಿಟ್ಟಿನ ಚೆಕ್ಕಿಂಗ್ನಿಂದ ನಿಶ್ಚಿತಾರ್ಥಕ್ಕೆ ಹೊರಟ್ಟಿದ್ದ ವರ ಹಾಗೂ ಆತನ ಕುಟುಂಬ ಪರದಾಡುವಂತಾಗಿದೆ.
ಎಸ್ ಜೆಪಿ ರಸ್ತೆ ನಿವಾಸಿಯಾಗಿರುವ ವರನಿಗೆ ಮೇ 28ರಂದು ಮದುವೆ ನಿಶ್ಚಿಯಿಸಿಕೊಂಡಿದ್ದರು. ಇಂದು ಸರಳವಾಗಿ ವಧುವಿನ ಮನೆಯಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮವಿತ್ತು. ಇದಕ್ಕಾಗಿ ವರ ಹಾಗೂ ಆತನ ಕುಟುಂಬ ಕಾರಿನಲ್ಲಿ ವಧುವಿನ ಮನೆಯಿರುವ ಬಿಡದಿ ಬಳಿಯ ಶಾನಮಂಗಲಕ್ಕೆ ಹೊರಟಿದ್ದರು. ಒಂದೇ ಕಾರಿನಲ್ಲಿ ಹೊರಟ್ಟಿ ನಾಲ್ವರನ್ನು ಕಲಾಸಿಪಾಳ್ಯ ಪೊಲೀಸರು ತಡೆದಿದ್ದಾರೆ. ವಾಹನ ತಪಾಸಣೆ ನಡೆಸಿ ಹೋಗಲು ಬಿಡುವುದಿಲ್ಲ ಎಂದಿದ್ದಾರಂತೆ.
ಮಧ್ಯಾಹ್ನ 3 ಗಂಟೆಯೊಳಗೆ ವಧುವಿನ ಮನೆಗೆ ಹೋಗಬೇಕು ಎಂದು ವರನ ಮನೆಯವರು ಮನವಿ ಮಾಡಿಕೊಂಡಿದ್ದಾರೆ. ವಧುವಿಗೆ ಹೂವಿನ ಹಾರ, ನಿಶ್ಚಿತಾರ್ಥ ಶಾಸ್ತ್ರಕ್ಕೆ ಬೇಕಾದ ಸಾಮಗ್ರಿಗಳೆಲ್ಲಾ ಕಾರಿನಲ್ಲಿ ಇವೆ. ವಧುವಿನ ಕಡೆಯವರು ಇಂದು ನಿಶ್ಚಿತಾರ್ಥ, ಲಗ್ನ ಶಾಸ್ತ್ರ ಇಟ್ಟುಕೊಂಡಿದ್ದಾರೆ. ಈಗಾಗಲೇ ಪುರೋಹಿತರು ಸಹ ಮನೆಗೆ ಬಂದಿದ್ದಾರೆ. ಎಲ್ಲಾ ಸಿದ್ದತೆ ಅಗಿದೆ ಅದರೆ ಪೊಲೀಸರು ಲಗ್ನ ಪತ್ರಿಕೆ ನೋಡಿದರೂ ಬಿಡುತ್ತಿಲ್ಲ. ಯಾವಾಗ ನಾವು ಅಲ್ಲಿಗೆ ಹೋಗೊದು, ಟೈಮ್ ಅಗ್ತಿದೆ ಎಂದು ವರನ ಅಣ್ಣ ಅಳಲು ತೋಡಿಕೊಂಡಿದ್ದಾರೆ. ಆದರೆ ಪೊಲೀಸರು ಮಾತ್ರ ಮದುವೆ ಕಾರ್ಡ್ ನಲ್ಲಿ ಕಾರಿನ ನಂಬರ್ ಹಾಕಿಸ ಬೇಕಿತ್ತು ಎಂದು ಹೋಗಲು ಬಿಟ್ಟಿಲ್ಲ.
ಇದಾಗಿ ಕೆಲವೇ ಸಮಯದಲ್ಲಿ ಮತ್ತೊಂದು ಬೆನ್ಜ್ ಕಾರು ಪೋಲೀಸರ ವಶಕ್ಕೆ ಬಂದಿದೆ. ವಿಚಾರಣೆ ನಡೆಸಿದಾಗ ಸ್ನೇಹಿತನ ಜೊತೆ ಊಟ ಮಾಡಲು ಹೊರಗಡೆ ಬಂದಿದ್ದಾಗಿ ಬೆನ್ಜ್ ಚಾಲಕ ಯುವಕ ತಿಳಿಸಿದ್ದಾರೆ. ಬೆನ್ಜ್ ಕಾರಿನಲ್ಲಿ ಇಬ್ಬರು ಯುವಕರು ರೌಂಡ್ ಹೊಡೆಯುತ್ತಿದ್ದು ಪೋಲೀಸರ ಪ್ರಶ್ನೆ ವೇಳೆ ಊಟಕ್ಕೆ ಹೋಗ್ತಿದ್ದೀವಿ ಎಂದಿದ್ದಾರೆ. ಇಷ್ಟೊತ್ತು ಏನ್ ಮಾಡ್ತಿದ್ರಿ ಎಂದು ಪೊಲೀಸರು ಪ್ರಶ್ನೆ ಮಾಡಿದ್ದಕ್ಕೆ ಯುವಕರು ಸೈಲೆಂಟ್ ಆಗಿದ್ದಾರೆ. ಬಳಿಕ ಪೋಲೀಸರು ಬೆನ್ಜ್ ಕಾರು ಸೀಜ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ