ಬೆಂಗಳೂರು (ಸೆ. 20): ಬ್ಯಾಡರಹಳ್ಳಿಯಲ್ಲಿ ಒಂದೇ ಕುಟುಂಬದ ಐವರ ಸಾವು (family Five members Suicide Case) ಪ್ರಕರಣ ಸಂಬಂಧ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ವಿದ್ಯಾವಂತರಾಗಿದ್ದರೂ ತಾಯಿಯೊಂದಿಗೆ ಮಕ್ಕಳು ಆತ್ಮಹತ್ಯೆ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಕಾರಣ ಏನು ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ನಡುವೆ ಮನೆಯಲ್ಲಿ ಮೃತ ಇಬ್ಬರು ಹೆಣ್ಣು ಮಕ್ಕಳು ಮತ್ತು ಮಗ ಮಧು ಸಾಗರ್ ಮೂರು ಡೆತ್ ನೋಟ್ (death note) ಪತ್ತೆಯಾಗಿತ್ತು. ಈ ಸಂಬಂಧ ನೀಡಿದ್ದ ಪೊಲೀಸರು ನೋಟಿಸ್ ಜಾರಿ ಮಾಡಿದ ಹಿನ್ನಲೆ ಇಂದು ಶಂಕರ್ ವಿಚಾರಣೆಗೆ ಹಾಜರಾಗಿದ್ದಾರೆ. ಈ ಆತ್ಮಹತ್ಯೆ ಪತ್ರದಲ್ಲಿ ತಮ್ಮ ದೇಹವನ್ನು ಯಾವುದೇ ಕಾರಣಕ್ಕೂ ತಂದೆಗೆ ಆಗಲಿ, ಗಂಡಂದಿರಿಗಾಗಲಿ ನೀಡಬೇಡಿ ಎಂದು ಹೆಣ್ಣು ಮಕ್ಕಳು ನೊಂದು ಬರೆದಿರುವ ಅಂಶ ಬೆಳಕಿಗೆ ಬಂದಿದೆ.
ಏನಿತ್ತು ಡೇತ್ನೋಟ್ನಲ್ಲಿ?
ಆತ್ಮಹತ್ಯೆ ಮಾಡಿಕೊಂಡಿದ್ದ ಸಿಂಚನಾ, ಸಿಂಧೂರಾಣಿ ಹಾಗೂ ಮಧುಸಾಗರ್ ಸಾವಿನ ಮುನ್ನವೇ ಬರೆದಿದ್ದ ಡೆತ್ ನೋಟ್ ನಲ್ಲಿ ಶಂಕರ್ ವಿರುದ್ಧ ಆಪಾದನೆ ಮಾಡಿದ್ದಾರೆ. ಘಟನಾ ಸ್ಥಳದಲ್ಲಿ ದೊರೆತಿರುವ ಸಾವಿನ ಪತ್ರದ ಅಕ್ಷರ ಅವರದೇನಾ ಎಂಬುದರ ಪತ್ತೆಗೆ ಪೊಲೀಸರು ಡೆತ್ ನೋಟ್ಗಳನ್ನು ಹ್ಯಾಂಡ್ ರೈಟಿಂಗ್ ಎಕ್ಸ್ ಪರ್ಟ್ ಗಳಿಗೆ ರವಾನೆ ಮಾಡಿದ್ದಾರೆ. ಹಳೆ ಕೈ ಬರಹದ ಜೊತೆಗೆ ಡೆತ್ ನೋಟ್ ಹ್ಯಾಂಡ್ ರೈಟಿಂಗ್ ಮ್ಯಾಚ್ ಮಾಡಿ ಪರಿಶೀಲನೆ ನಡೆಸಲಾಗುತ್ತದೆ. ಕೈ ಬರಹ, ಸಹಿ ಎಲ್ಲವೂ ಕೂಡ ಮ್ಯಾಚ್ ಆಗಬೇಕಿದೆ.ಆಗಷ್ಟೇ ಡೆತ್ ನೋಟ್ ಗೆ ಮತ್ತಷ್ಟು ಮಾನ್ಯತೆ ಸಿಗಲಿದೆ.
ಡೆತ್ ನೋಟ್ ನಲ್ಲಿ ಮೂವರು ಮಕ್ಕಳು ತಂದೆ ಮೇಲೆ ನೇರ ಆರೋಪ ಮಾಡಿರುವುದು ಕಂಡು ಬಂದಿದೆ. ಮಗ ಮಧು ಸಾಗರ್ ನಮ್ಮ ತಂದೆ ಸರಿ ಇಲ್ಲ ಎಂದು ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾನೆ. ತಂದೆಗೆ ನಾಲ್ಕರಿಂದ ಐದು ಜನರ ಜೊತೆಗೆ ಅನೈತಿಕ ಸಂಬಂಧವಿತ್ತು. ಮನೆಯಿಂದ ಹೊರಹೋದರೆ ಮೂರು ನಾಲ್ಕು ದಿನ ಮನೆಗೆ ಬರುತ್ತಲೇ ಇರಲಿಲ್ಲ ಎಂದಿದ್ದಾರೆ.
ಇಬ್ಬರು ಹೆಣ್ಣು ಮಕ್ಕಳು ಕೂಡ ತಂದೆ ಮೇಲೆ ಸಾಲು ಸಾಲು ಆರೋಪ ಮಾಡಿದ್ದಾರೆ. ಜೊತೆಗೆ ಅತ್ತೆ, ಮಾವ ಮತ್ತು ಗಂಡನ ಮೇಲೂ ಕೂಡ ದೂರಿದ್ದಾರೆ. ನಮಗೆ ಗಂಡನ ಮನೆಯಲ್ಲೂ ಕೂಡ ನೆಮ್ಮದಿಯಿಂದ ಇರಲು ಆಗುತ್ತಿರಲಿಲ್ಲ. ನಮಗೆ ಪೂರ್ಣ ಸ್ವತಂತ್ರ ಕೂಡ ಇರಲಿಲ್ಲ ಅವರ ಜೊತೆ ಬದುಕಲು ಹಿಂಸೆ ಆಗುತಿತ್ತು. ಹಾಗಾಗಿ ಅಮ್ಮನ ಮನೆಗೆ ಬಂದಿದ್ದೇವು. ಆದರೆ ಮನೆಯಲ್ಲಿಯೂ ತಂದೆಯಿಂದ ನೆಮ್ಮದಿ ಸಿಗಲಿಲ್ಲ. ಗಂಡನ ಮನೆಗೆ ಹೋದರು ನೆಮ್ಮದಿ ಇರಲಿಲ್ಲ. ಎಲ್ಲ ಕಡೆ ಕಿರಿಕಿರಿ ಯಾಗಿದ್ದರಿಂದ ಆತ್ಮಹತ್ಯೆ ನಿರ್ಧಾರಕ್ಕೆ ಬಂದೆವು ಎಂದು ಡೆತ್ ನೋಟ್ ನಲ್ಲಿ ಮಕ್ಕಳು ಉಲ್ಲೇಖಿಸಿದ್ದಾರೆ.
ಯುವತಿಯರ ಹೆಸರು, ನಂಬರ್, ಫೋಟೋ ಎಲ್ಲವೂ ಲ್ಯಾಪ್ ಟಾಪ್ ನಲ್ಲಿದ್ದು, ಮಹಜರು ವೇಳೆ 3 ಲ್ಯಾಪ್ ಟಾಪ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಜೊತೆಗೆ ಒಂದು ಪೆನ್ ಡ್ರೈವ್ ಕೂಡ ಮನೆಯಲ್ಲಿ ಜಪ್ತಿ ಮಾಡಿಕೊಂಡಿದ್ದರು. ಜಪ್ತಿ ಮಾಡಿಕೊಂಡಿದ್ದ ಲ್ಯಾಪ್ ಟಾಪ್ ಹಾಗೂ ಪೆನ್ ಡ್ರೈವ್ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಲಿದ್ದಾರೆ. ಸಾಕ್ಷ್ಯ ಸಿಕ್ಕ ಬಳಿಕವೂ ಪೊಲೀಸರಿಂದ ಡೆತ್ ನೋಟ್ ನಲ್ಲಿ ಹೇಳಿರುವುದು ಸತ್ಯನಾ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸಲಿದ್ದಾರೆ.
ಎಲ್ಲವನ್ನೂ ಬಹಿರಂಗ ಪಡಿಸುತ್ತೇನೆ ಎಂದ ಶಂಕರ್
ವಿಚಾರಣೆಗೆ ಹಾಜರಾಗುವ ಮಾತನಾಡಿದ ಪತ್ರಕರ್ತ ಶಂಕರ್, ನಾನೀಗ ವಿಚಾರಣೆ ಎದುರಿಸೋಕೆ ಬಂದಿದ್ದೇನೆ. ಪೊಲೀಸರು ಹಂತ ಹಂತವಾಗಿ ವಿಚಾರಣೆ ಮಾಡಲಿದ್ದಾರೆ. ಅದನ್ನ ಮುಗಿಸಿಕೊಂಡು ಬಂದು ಮಾಧ್ಯಮದ ಜೊತೆಗೆ ಮಾತನಾಡುತ್ತೇನೆ. ಡೆತ್ ನೋಟ್ ನಲ್ಲಿ ಬರೆದಿರುವುದು ಸುಳ್ಳು. ಈ ಬಗ್ಗೆ ಎಳೆ ಎಳೆಯಾಗಿ ಎಲ್ಲವನ್ನೂ ಮಾತನಾಡುತ್ತೇನೆ. ನಾನು ಪ್ರಾಮಾಣಿಕವಾಗಿದ್ದೇನೆ. ಸ್ವಂತ ದುಡಿಮೆಯಿಂದ ಎರಡು ಬಾರ್ ಗಳಿಗೆ ಮಾಲೀಕನಾಗಿದ್ದೇನೆ ಎಂದರು.