Bengaluru Crime: ಹಾಡಹಗಲೇ ಬ್ಯಾಂಕ್​ನಲ್ಲಿ ರೌಡಿಶೀಟರ್​ ಬರ್ಬರ ಕೊಲೆ..!

ಕೊಲೆಯಾದ ರೌಡಿಶೀಟರ್ ಬಬ್ಲಿ

ಕೊಲೆಯಾದ ರೌಡಿಶೀಟರ್ ಬಬ್ಲಿ

ಬಾಬುಲಿ@ಬಬ್ಲಿ ಕಾಂಟ್ರಾಕ್ಟ್ ಕೆಲಸ ಮಾಡುತ್ತಿದ್ದ. 2011ರ ಬಳಿಕ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರಲಿಲ್ಲ. 2011ರ ಆಚೆಗೆ ಕೆಲ ಕೇಸ್ ಗಳು ದಾಖಲಾಗಿದ್ದವು ಎಂದು ಕೊಲೆಯಾದ ರೌಡಿ ಶೀಟರ್​ ಬಗ್ಗೆ ಮಾಹಿತಿ ನೀಡಿದರು.

  • Share this:

    ಬೆಂಗಳೂರು(ಜು.20): ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಹಾಡಹಗಲೇ ದುಷ್ಕರ್ಮಿಗಳು ಬ್ಯಾಂಕ್​ ಒಳಗಡೆ ನುಗ್ಗಿ ರೌಡಿಶೀಟರ್​​​​ನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. ಕೋರಮಂಗಲದ 8ನೇ ಬ್ಲಾಕ್​ನ ಯೂನಿಯನ್​  ಬ್ಯಾಂಕ್​ನಲ್ಲಿ ಈ ಭಯಾನಕ ಕೃತ್ಯ ನಡೆದಿದೆ.  ದುಷ್ಕರ್ಮಿಗಳು ರೌಡಿಶೀಟರ್​ ಬಬ್ಲಿ ಎಂಬಾತನನ್ನು ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.  ಸ್ಥಳಕ್ಕೆ ಕೋರಮಂಗಲ ಪೊಲೀಸರು ಹಾಗೂ ಡಿಸಿಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


    ರೌಡಿ ಶೀಟರ್ ಬಬ್ಲಿ ಮಧ್ಯಾಹ್ನ 1.30ರ ಸುಮಾರಿಗೆ ತನ್ನ ಪತ್ನಿ ಜೊತೆ ಬ್ಯಾಂಕ್ ಗೆ ಬಂದಿದ್ದ ಎನ್ನಲಾಗಿದೆ.  ಬಬ್ಲಿ ಬ್ಯಾಂಕ್ ಒಳಗಡೆ ಹೋಗಿದ್ದೇ ತಡ ಆತನ ಹಿಂದೆ ಐದಾರು ಮಂದಿ ದುಷ್ಕರ್ಮಿಗಳು ಹೋಗಿ, ಮಾರಕಾಸ್ತ್ರಗಳಿಂದ ಕೊಚ್ಚಿ ಬಬ್ಲಿಯನ್ನು ಕೊಲೆಗೈದಿದ್ದಾರೆ. ಹತ್ಯೆ ಮಾಡಿದ ಬಳಿಕ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ.  ಕೋರಮಂಗಲ ಪೊಲೀಸರು  ಬ್ಯಾಂಕ್​ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಸಿಸಿಬಿ ಪೊಲೀಸರೂ ಸಹ ಭೇಟಿ ಪರಿಶೀಲನೆ ನಡೆಸಿದ್ದಾರೆ.


    ಇದನ್ನೂ ಓದಿ:Gold Price Today: ಆಭರಣ ಪ್ರಿಯರಿಗೆ ಸಿಹಿ ಸುದ್ದಿ; ಚಿನ್ನದ ಬೆಲೆ ಮತ್ತೆ ಇಳಿಕೆಯಾಗಿದೆ ನೋಡಿ...!


    ಹಾಡಹಗಲೇ ರೌಡಿಶೀಟರ್ ಕೊಲೆ ಹಿನ್ನಲೆ,  ಸ್ಥಳಕ್ಕೆ ಪೂರ್ವ ವಲಯ ಹೆಚ್ಚುವರಿ ಆಯುಕ್ತ ಎಸ್.ಮುರುಗನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, ಬಾಬುಲಿ@ಬಬ್ಲಿ ಕಾಂಟ್ರಾಕ್ಟ್ ಕೆಲಸ ಮಾಡುತ್ತಿದ್ದ. 2011ರ ಬಳಿಕ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರಲಿಲ್ಲ. 2011ರ ಆಚೆಗೆ ಕೆಲ ಕೇಸ್ ಗಳು ದಾಖಲಾಗಿದ್ದವು ಎಂದು ಕೊಲೆಯಾದ ರೌಡಿ ಶೀಟರ್​ ಬಗ್ಗೆ ಮಾಹಿತಿ ನೀಡಿದರು.


    ಹೆಂಡತಿ-ಮಗಳ ಜೊತೆ ಬೈಕ್​ನಲ್ಲಿ ಬ್ಯಾಂಕ್​ಗೆ ಬಂದಿದ್ದ ಬಬ್ಲಿಯನ್ನು 7-8  ಮಂದಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಹಾಡಹಗಲೇ ಬ್ಯಾಂಕ್​ನಲ್ಲಿ ಈ ದುಷ್ಕೃತ್ಯ ನಡೆದಿದ್ದು,  ಕೂಡಲೇ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಮುರುಗನ್ ಹೇಳಿದರು.


    ಇದನ್ನೂ ಓದಿ:Karnataka 2nd PU Results Today: ಇಂದು ಸಂಜೆ 4.30ಕ್ಕೆ ಪಿಯು ಫಲಿತಾಂಶ ಪ್ರಕಟ; ರಿಸಲ್ಟ್ ನೋಡಲು ಇಲ್ಲಿ ಕ್ಲಿಕ್ ಮಾಡಿ


    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.

    Published by:Latha CG
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು