• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Bengaluru Lockdown: ಬೆಂಗಳೂರಿನಲ್ಲಿ ಜೂನ್ 7ರ ಬಳಿಕ ಲಾಕ್​ಡೌನ್ ತೆರವು?; ಹಂತಹಂತವಾಗಿ ಅನ್​ಲಾಕ್​ ಮಾಡಲು ಬಿಬಿಎಂಪಿ ಚಿಂತನೆ

Bengaluru Lockdown: ಬೆಂಗಳೂರಿನಲ್ಲಿ ಜೂನ್ 7ರ ಬಳಿಕ ಲಾಕ್​ಡೌನ್ ತೆರವು?; ಹಂತಹಂತವಾಗಿ ಅನ್​ಲಾಕ್​ ಮಾಡಲು ಬಿಬಿಎಂಪಿ ಚಿಂತನೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Bengaluru Lockdown: ಬೆಂಗಳೂರಿನಲ್ಲಿ ಜೂನ್ 7ರ ನಂತರ ಅನ್ ಲಾಕ್ ಫಿಕ್ಸ್ ಎನ್ನಲಾಗುತ್ತಿದೆ. ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಕೂಡ ಸುಳಿವು ಕೊಟ್ಟಿದ್ದಾರೆ.

  • Share this:

ಬೆಂಗಳೂರು (ಮೇ 31): ಕೋವಿಡ್ ಹಬ್ ಎಂದೇ ಕುಖ್ಯಾತಿ ಪಡೆದಿದ್ದ ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಕೊಂಚ ಕಡಿಮೆಯಾಗುತ್ತಿದೆ. ಜೂನ್ 7ರ ನಂತರ ಹಂತ ಹಂತವಾಗಿ ಅನ್​ಲಾಕ್​ಗೆ ಬಿಬಿಎಂಪಿ ಮನಸು ಮಾಡಿದೆ. ಗಣನೀಯವಾಗಿ ಸೋಂಕಿನ ಪ್ರಮಾಣ ಇಳಿಕೆಯಾಗಿದೆ. ಈಗ ಅನ್ ಲಾಕ್ ಮಾಡಬಹುದು. ಇನ್ನಷ್ಟು ದಿನಗಳು ಲಾಕ್ ಡೌನ್ ಮಾಡಿದರೆ ಪರಿಸ್ಥಿತಿ ನಿಭಾಯಿಸುವುದು ಕಷ್ಟ. ಅದರಿಂದ ಆದಾಯಕ್ಕೆ ಹೊಡೆತ ಬೀಳುತ್ತದೆ. ಆಡಳಿತ ಕೂಡ ಕಷ್ಟವಾಗಬಹುದು. ಜನಜೀವನ ಎಂದಿನಂತಾದರೆ ಸ್ವಲ್ಪ ನೆಮ್ಮದಿ ಸಿಗಬಹುದು ಎಂಬ ಕಾರಣಕ್ಕೆ ಹಂತ ಹಂತವಾಗಿ ಲಾಕ್ ಡೌನ್ ತೆರವಿಗೆ ಬಿಬಿಎಂಪಿ ಸಲಹೆ ಕೊಟ್ಟಿದೆ.


ಬಿಬಿಎಂಪಿ ಸರ್ಕಾರದ ಮುಂದಿಟ್ಟಿರುವ ಸಲಹೆಗಳೇನು?:


  • ಚಿತ್ರ ಮಂದಿರ, ಶಾಪಿಂಗ್ ಮಾಲ್, ಶಾಲೆ-ಕಾಲೇಜು ತೆರೆಯದೆ ಅನ್ ಲಾಕ್ ಮಾಡುವುದು
    ಸಾರಿಗೆ ಬಸ್ ಗಳಲ್ಲಿ ಶೇ. 50ರಷ್ಟು ಆಸನ ವ್ಯವಸ್ಥೆ ಮಾಡುವುದು

  • ಐಟಿ-ಬಿಟಿ ಕಂಪೆನಿಗಳನ್ನು ತೆರೆಯದೆ ಮುಂದಿನ ಮೂರು ತಿಂಗಳ ಕಾಲ ವರ್ಕ್ ಫ್ರಂ ಹೋಮ್ ಗೆ ಒತ್ತು ನೀಡುವುದು

  • ಜನದಟ್ಟಣೆ ಹೆಚ್ಚಿರುವ ಪ್ರದೇಶವನ್ನು ಅನ್ ಲಾಕ್ ಮಾಡದೆ ಇರುವುದು

  • ಮಾರ್ಕೆಟ್​ಗಳನ್ನು ಪರಿಸ್ಥಿತಿ ನೋಡಿಕೊಂಡು ಓಪನ್ ಮಾಡುವುದು

  • ಮುಖ್ಯವಾಗಿ ಮೆಜೆಸ್ಟಿಕ್, ಚಿಕ್ಕಪೇಟೆ, ಕೆಆರ್ ಮಾರ್ಕೆಟ್ ವ್ಯಾಪಾರಿಗಳಿಗೆ ವಿಶೇಷ SOP ಬಿಡುಗಡೆ ಮಾಡುವುದು

  • ಪರಿಸ್ಥಿತಿ ತಿಳಿಯಾಗುವವರೆಗೂ ನಮ್ಮ ಮೆಟ್ರೋದಲ್ಲಿ ಕಾರ್ಡ್ ವ್ಯವಸ್ಥೆ ಮುಂದುವರೆಸುವುದು

  • ಓಲಾ, ಊಬರ್ ಕ್ಯಾಬ್ ಗಳಲ್ಲಿ ಸೀಟ್‌ ಡಿವೈಡ್ ರೂಲ್ಸ್ ಕಡ್ಡಾಯವಾಗಿ ಜಾರಿಯಾಗುವಂತೆ ಫಾಲೋ ಮಾಡುವುದು

  • ಎಲ್ಲಾ ಪಾಲಿಕೆ‌ ಹಾಗೂ ಸರ್ಕಾರದ ಕೆಲಸವನ್ನು ಆನ್ ಲೈನ್ ಮೂಲಕ ಆಗುವಂತೆ ನೋಡಿಕೊಳ್ಳುವುದು

  • ಮುಂದಿನ ದಿನಗಳಲ್ಲಿ ಸೋಂಕಿನ ಪ್ರಮಾಣ ನೋಡಿಕೊಂಡು ನೈಟ್ ಕರ್ಫ್ಯೂ ಅಗತ್ಯವಿದ್ದರೆ ಜಾರಿ ಮಾಡುವುದು

  • ಬೆಂಗಳೂರು ಗಡಿ ಭಾಗದಲ್ಲಿ ವಿಶೇಷ ಚೆಕ್ ಪೋಸ್ಟ್ ರಚಿಸಿ ಮಾಹಿತಿ ಕಲೆ ಹಾಕುವುದು
    ಹಳೆಯ ಮಾದರಿಯಂತೆ ಗಡಿಯಲ್ಲಿ ಟೆಸ್ಟಿಂಗ್ ಸೆಂಟರ್ ಅನ್ನು ತೆರೆಯುವುದು.


ಹೀಗೆ ಹಲವು ಹಂತವಾಗಿ ಲಾಕ್ ಡೌನ್ ತೆರವಿಗೆ ಬಿಬಿಎಂಪಿ ಸಲಹೆ ಕೊಟ್ಟಿದೆ. ಹೀಗಾಗಿ, ಬೆಂಗಳೂರಿನಲ್ಲಿ ಜೂನ್ 7ರ ನಂತರ ಅನ್ ಲಾಕ್ ಫಿಕ್ಸ್ ಎನ್ನಲಾಗುತ್ತಿದೆ. ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಕೂಡ ಸುಳಿವು ಕೊಟ್ಟಿದ್ದಾರೆ. ಲಾಕ್ ಡೌನ್ ಸಡಿಲಿಕೆಯನ್ನು ಹಂತ ಹಂತವಾಗಿ ಮಾಡಬೇಕು. ಕೇಸ್ ಪ್ರಮಾಣ ಕಡಿಮೆ ಆಗಬೇಕು, ತಳಮಟ್ಟದಲ್ಲಿ ಸೋಂಕಿತರು ಐಸೋಲೇಷನ್ ಆಗಬೇಕು. ಸದ್ಯದ ಸ್ಥಿತಿಯಲ್ಲಿ ಎರಡೂ ಆಗ್ತಾ ಇದೆ ಎಂದು ಹೇಳಿದ್ದಾರೆ.


ಸಾಮಾಜಿಕ ಜೀವನದ ಬಗ್ಗೆ ನಮಗೆ ಕಾಳಜಿ ಇದೆ. ಹಂತ ಹಂತವಾಗಿ ರಿಲೀಫ್ ಮಾಡಿದರೆ ಉತ್ತಮ. ಈ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ ಎಂದು ಬಿಬಿಎಂಪಿ ಕಮಿಷನರ್ ಗೌರವ್ ಗುಪ್ತ ಹೇಳಿದ್ದಾರೆ.


ಜೂನ್ 7ರ ಬಳಿಕ ಕರ್ನಾಟಕದಲ್ಲಿ ಲಾಕ್​ಡೌನ್ ವಿಸ್ತರಿಸಬೇಕೇ? ಬೇಡವೇ? ಎಂಬ ಬಗ್ಗೆ ತಜ್ಞರು ಮತ್ತು ತಾಂತ್ರಿಕ ಸಲಹಾ ಸಮಿತಿಯವರು ಈಗಾಗಲೇ ವರದಿ ತಯಾರಿಸಿದ್ದಾರೆ. ನಾಳೆ ಹಿರಿಯ ಸಚಿವರ ಜೊತೆ ಸಿಎಂ ಯಡಿಯೂರಪ್ಪ ಸಭೆ ನಡೆಸಲಿದ್ದು, ಇಂದು ಕೊರೋನಾ ತಜ್ಞರು ನೀಡಿರುವ ವರದಿ ಬಗ್ಗೆ‌ ನಾಳೆ ಚರ್ಚೆ ನಡೆಯಲಿದೆ. ಕೊರೋನಾ ಸ್ಥಿತಿಗತಿಯ ಬಗ್ಗೆ ಸಚಿವರ ಜೊತೆ ಸಿಎಂ ಯಡಿಯೂರಪ್ಪ ಚರ್ಚಿಸಲಿದ್ದಾರೆ. ಸಚಿವರು, ತಜ್ಞರ ಜೊತೆ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಿರುವ ಸಿಎಂ ಲಾಕ್‌ಡೌನ್ ಅಥವಾ ಅನ್ ಲಾಕ್ ಎಂಬುದರ ಕುರಿತು ಜೂನ್ 4 ಅಥವಾ 5ರಂದು ಅಂತಿಮ ತೀರ್ಮಾನ ಮಾಡಲಿದ್ದಾರೆ.

First published: