ಬೆಂಗಳೂರು (ಮೇ 2 ): ಸುಂಕದಕಟ್ಟೆಯಲ್ಲಿ ಯುವತಿಯ (Girl) ಮೇಲೆ ಆ್ಯಸಿಡ್ ದಾಳಿಯಾಗಿ 6 ದಿನಗಳು ಕಳೆದಿವೆ. ಆದರೆ, ಆರೋಪಿ ನಾಗೇಶ್ (Nagesh) ಮಾತ್ರ ಇನ್ನು ಸಿಕ್ಕಿಲ್ಲ, ಆರೋಪಿಗಾಗಿ (Accused) ಪೊಲೀಸರು ಶೋಧ (Search) ಕಾರ್ಯ ಮುಂದುವರಿಸಿದ್ದಾರೆ. ಸತತ ಆರು ದಿನಗಳಿಂದ ಆರೋಪಿ ಹುಡುಕುತ್ತಿದ್ರು ಒಂದೇ ಒಂದು ಸುಳಿವು ಸಹ ಸಿಗ್ತಿಲ್ಲ. ಆರೋಪಿ ನಾಗೇಶ್ನನ್ನು ಹಿಡಿಯೋದೇ ಪೊಲೀಸರಿಗೆ (Police) ದೊಡ್ಡ ತಲೆನೋವಾಗಿದೆ. ಸಾವು-ಬದುಕಿನ ನಡುವೆ ಆಸ್ಪತ್ರೆಯಲ್ಲಿ ಯುವತಿ ಹೋರಾಡುತ್ತಿದ್ದಾಳೆ. ಇತ್ತ ಆರೋಪಿ ನಾಗೇಶ್ ಪೊಲೀಸರ ಕೈಗೆ ಸಿಗದೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದಾನೆ.
ಆರೋಪಿ ಪತ್ತೆಗೆ ಪೊಲೀಸರಿಂದ ಕರಪತ್ರದ ಮೊರೆ
ಆರೋಪಿಯ ಬಂಧನಕ್ಕೆ 10 ತಂಡಗಳನ್ನು ರಚಿಸಿ ಪಶ್ಚಿಮ ವಿಭಾಗದ ಪೊಲೀಸರು ಕಾರ್ಯ ಪ್ರವೃತ್ತರಾಗಿದ್ದರೂ ಸಹ ಆರೋಪಿ ನಾಗೇಶ್ ಪತ್ತೆಯಾಗಿಲ್ಲ. ಈಗ ಆ್ಯಸಿಡ್ ನಾಗನ ಪತ್ತೆಗೆ ಪೊಲೀಸರು ಕರಪತ್ರದ ಮೊರೆಹೋಗಿದ್ದಾರೆ. ಪೊಲೀಸರು ತಮಿಳುನಾಡಿನಲ್ಲಿ ಆರೋಪಿ ನಾಗೇಶ್ಗಾಗಿ ಏಪ್ರಿಲ್ 27 ರಂದು ಯುವತಿ ಮುತ್ತೂಟ್ ಫಿನ್ ಕಾರ್ಪ್ ಗೆ ಕೆಲಸಕ್ಕೆ ಹೋಗುವ ವೇಳೆ ಕಂಪನಿಯ ಮೆಟ್ಟಿಲುಗಳ ಮೇಲೆಯೇ ನಾಗೇಶ್ ಆ್ಯಸಿಡ್ ದಾಳಿಯನ್ನು ಮಾಡಿದ್ದ. ಆ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದಾನೆ.
ತಮಿಳುನಾಡಿನಲ್ಲಿ ಅಡಗಿದ್ದಾನಾ ಆರೋಪಿ?
ತಮಿಳುನಾಡಿಗೆ ಆಗಿಂದಾಗ್ಗೆ ಹೋಗಿ ಬರುತ್ತಿದ್ದ ಬಗ್ಗೆ ಕಾಮಾಕ್ಷಿಪಾಳ್ಯ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಪ್ರಾಥಮಿಕ ತನಿಖೆಯ ವೇಳೆಯಲ್ಲಿಯೂ ನಾಗೇಶ್ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಟೆಕ್ನಿಕಲ್ ಸಾಕ್ಷ್ಯಾಧಾರಗಳು ಲಭಿಸಿದ್ದವು. ಹೀಗಾಗಿ, ತಮಿಳುನಾಡಿನಲ್ಲೇ ಆರೋಪಿ ಅಡಗಿರಬಹುದು ಎಂಬ ಅನುಮಾನದಲ್ಲಿ ನಾಗೇಶ್ಗಾಗಿ ತೀವ್ರ ಹುಡುಕಾಟವನ್ನು ಪೊಲೀಸರು ಮುಂದುವರೆಸಿದ್ದಾರೆ
ಇದನ್ನೂ ಓದಿ: PSI Recruitment Scam: ಆಟೋದಲ್ಲಿ ಬಂದು ಶರಣಾದ ಕಿಂಗ್ ಪಿನ್; ಕೆಮ್ಮಿದ್ರೆ ಉತ್ತರ ರಿಸೀವ್ ಎಂದರ್ಥ
ನಾಗೇಶ್ ಬಗ್ಗೆ ಯಾವುದೇ ಮಾಹಿತಿ ಸಿಗ್ತಿಲ್ಲ
ನಾಗೇಶ್ ಎಟಿಎಂ, ಫೋನ್ ಪೇ ಗೂಗಲ್ ಪೇ ಬಳಸಿಲ್ಲ. ನಾಗೇಶ್ ತಲೆಮರೆಸಿಕೊಂಡ ಬಳಿಕ ಆತ ಎಲ್ಲಿದ್ದಾನೆ. ಎಟಿಎಂನಲ್ಲಿ ನಗದನ್ನು ವಿಥ್ ಡ್ರಾ ಮಾಡಿದ್ದಾನೆಯೇ ಎಂದು ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ. ಜೊತೆಗೆ ಫೋನ್ ಪೇ ಮತ್ತು ಗೂಗಲ್ ಪೇಯನ್ನು ಬಳಸಿದ್ದಾನೆಯೇ ಎಂಬುದನ್ನು ಸಹ ಪೊಲೀಸರು ಪರಿಶೀಲಿಸಿದ್ದಾರೆ. ಆದರೆ, ಪೊಲೀಸರಿಗೆ ಈ ಬಗ್ಗೆ ಯಾವುದೇ ಮಾಹಿತಿಯೂ ಸಿಕ್ಕಿಲ್ಲ.
ಹಣಕ್ಕಾಗಿ ಪ್ಲಾನ್ ಮಾಡಿದ್ದ ನಾಗೇಶ್
ಯುವತಿಯ ಮೇಲೆ ಆ್ಯಸಿಡ್ ದಾಳಿಯನ್ನು ಮಾಡುವ ಮುನ್ನವೇ ದಾಳಿಕೋರ ನಾಗೇಶ್ ಹಲವು ಪ್ಲಾನ್ ಮಾಡಿಕೊಂಡಿರುವುದು ಪೊಲೀಸರಿಗೆ ತನಿಖೆಯ ವೇಳೆ ತಿಳಿದು ಬಂದಿದೆ. ಸುಮಾರು 10 ದಿನಗಳ ಹಿಂದೆಯೇ ಪ್ಲಾನ್ ಅನ್ನು ಮಾಡಿಕೊಂಡಿರುವ ಅನುಮಾನವಿದೆ. ಸಂತ್ರಸ್ತ ಯುವತಿಯ ಮನೆಯವರು ತನ್ನೊಂದಿಗೆ ಮದುವೆ ಮಾಡಿಕೊಡುವುದಿಲ್ಲ ಎಂದು ತಿಳಿಯುತ್ತಿದ್ದಂತೆ ಆ್ಯಸಿಡ್ ದಾಳಿಯ ಸಂಚನ್ನು ರೂಪಿಸಿದ್ದ ಎನ್ನಲಾಗ್ತಿದೆ.
ನಾಗೇಶ್ನ ಫೋನ್ ಹೊಸಕೋಟೆಯಲ್ಲಿ ಪತ್ತೆ.. ನಾಗೇಶ್ ಬೆಂಗಳೂರು ಬಿಡುವ ಮುನ್ನ ಹೊಸಕೋಟೆ ಟೋಲ್ ಬಳಿ ಮೊಬೈಲ್ ಬಿಸಾಕಿದ್ದ. ಮೊಬೈಲ್ ಸ್ವಿಚ್ ಆಫ್ ಆದ ರೀತಿಯಲ್ಲಿ ದಾರಿ ಹೋಕರೊಬ್ಬರಿಗೆ ಮೊಬೈಲ್ ಸಿಕ್ಕಿದೆ. ಅವರು ಆನ್ ಮಾಡಿದ್ದಾರೆ. ಪೊಲೀಸರು ಆ ವ್ಯಕ್ತಿಯನ್ನು ಪತ್ತೆಮಾಡಿ ವಿಚಾರಿಸಿದಾಗ ಮೊಬೈಲ್ ಬಿಸಾಕಿ ಹೋಗಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: PSI Recruitment Scam: ಸಿಐಡಿ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ದಿವ್ಯಾ ಹಾಗರಗಿ: ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆದಿದ್ದು ಹೀಗೆ?
ಫೋಟೊ ಪ್ರಿಂಟ್ ಮಾಡಿ ಕರಪತ್ರ
ಆ್ಯಸಿಡ್ ನಾಗನ ಪತ್ತೆಗೆ ಕರಪತ್ರದ ಮೊರೆಹೋದ ಪೊಲೀಸರು. ಯುವತಿಗೆ ಆ್ಯಸಿಡ್ ದಾಳಿ ನಡೆಸಿ ತಲೆಮರೆಸಿಕೊಂಡಿರುವ ಆರೋಪಿ ಪತ್ತೆಗೆ ಪೊಲೀಸರು ಹಳೆ ಪದ್ಧತಿ ಹಾದಿ ಹಿಡಿದಿದ್ದಾರೆ. ಯಾವುದೇ ಫೋನ್ ಬಳಸದ ನಾಗೇಶ್ ತನ್ನ ಅಕೌಂಟ್ ಕೂಡ ಯೂಸ್ ಮಾಡುತ್ತಿಲ್ಲ. ಈ ಹಿನ್ನೆಲೆ ಪೊಲೀಸರು ನಾಗೇಶನ ಫೋಟೊ ಪ್ರಿಂಟ್ ಮಾಡಿ ಕರಪತ್ರ ಹೊರಡಿಸಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಕರ ಪತ್ರ ಮುದ್ರಿಸಿ ಎಲ್ಲೆಡೆ ಹಂಚಿಕೆ ಮಾಡಿದ್ದಾರೆ. ಆ್ಯಸಿಡ್ ನಾಗನ ಮೂಲ ಫೋಟೋ ಹಾಗೂ ಶೇವ್ ಮಾಡಿರುವ ಫೋಟೋ ಸೇರಿ ವಿವಿಧ ರೀತಿಯ ಫೋಟೋ ಮುದ್ರಿಸಿ ಕರಪತ್ರ ಹಂಚುತ್ತಿದ್ದಾರೆ.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ