• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿಗೆ ಮುಳುವಾಗಲಿದೆಯೇ ಸಿಎಂ ಬೊಮ್ಮಾಯಿ ನಿರ್ಧಾರ; ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು?

ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿಗೆ ಮುಳುವಾಗಲಿದೆಯೇ ಸಿಎಂ ಬೊಮ್ಮಾಯಿ ನಿರ್ಧಾರ; ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು?

ಸಿಎಂ ಬಸವರಾಜ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ

"ಬೆಂಗಳೂರಿನ ಚುನಾವಣಾ ಕೆಲಸವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಬೇಕಾಗುತ್ತದೆ. ಆಡಳಿತಾತ್ಮಕ ಸಮಸ್ಯೆಗಳೂ ಇವೆ, ಇದಕ್ಕೆ ದಿನನಿತ್ಯದ ಪರಿಹಾರದ ಅಗತ್ಯವಿದೆ. ಸಿಎಂಗೆ ಇದೆಲ್ಲದಕ್ಕೂ ಸಮಯವಿದೆಯೇ?

  • Share this:

    ಕರ್ನಾಟಕದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರದಂದು ಹಣಕಾಸು ಮತ್ತು ಬೆಂಗಳೂರು ಅಭಿವೃದ್ಧಿ ಸೇರಿದಂತೆ ನಿರ್ಣಾಯಕ ಹುದ್ದೆಗಳನ್ನು ಉಳಿಸಿಕೊಂಡು ಕ್ಯಾಬಿನೆಟ್ ಖಾತೆಗಳನ್ನು ಹಂಚಿಕೊಂಡಿದ್ದು ಈಗ ಇತಿಹಾಸ. ಈ ನಿರ್ಧಾರವು ಪಕ್ಷದ ನಿಷ್ಠಾವಂತರು ಮತ್ತು ಪ್ರಮುಖ ಖಾತೆಗಳ ಮೇಲೆ ಕಣ್ಣಿಟ್ಟ ವಲಸಿಗರಿಗೆ ಅಸಮಾಧಾನವನ್ನು ಉಂಟುಮಾಡಿ ಈಗಾಗಲೇ ಒಂದಷ್ಟು ಕೋಲಾಹಲ ಕೂಡ ಸೃಷ್ಟಿಯಾಗಿದೆ.


    ಬೊಮ್ಮಾಯಿ ಅವರು ಕ್ಯಾಬಿನೆಟ್ ವ್ಯವಹಾರಗಳು, ಬೆಂಗಳೂರು ಅಭಿವೃದ್ಧಿ ಮತ್ತು ಎಲ್ಲಾ ಅನುಮತಿಸದ ಪೋರ್ಟ್‌ಫೋಲಿಯೊಗಳ ಜೊತೆಗೆ ಡಿಪಿಎಆರ್, ಹಣಕಾಸು ಮತ್ತು ಗುಪ್ತಚರವನ್ನು ಉಳಿಸಿಕೊಂಡಿದ್ದಾರೆ. ಮೂವರು ಮಂತ್ರಿಗಳಾದ - ಆರ್ ಅಶೋಕ, ಸಿಎನ್ ಅಶ್ವಥ್ ನಾರಾಯಣ್ ಮತ್ತು ವಿ ಸೋಮಣ್ಣ - ಬೆಂಗಳೂರು ಅಭಿವೃದ್ಧಿ ಹುದ್ದೆಯ ಭರವಸೆಯಲ್ಲಿದ್ದರು.


    ಬಿಬಿಎಂಪಿ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಪಕ್ಷದ ಹಿರಿಯ ನಾಯಕರು ಈ ನಡೆಯಿಂದ ಆತಂಕದಲ್ಲಿ ಇದ್ದಾರೆ ಎಂದು ಹೇಳಲಾಗಿದೆ, ಬೆಂಗಳೂರು ಅಭಿವೃದ್ಧಿ ಖಾತೆಗೆ ಹೆಚ್ಚಿನ ಗಮನ ಮತ್ತು ದೈನಂದಿನ ಮೇಲ್ವಿಚಾರಣೆಯ ಅಗತ್ಯವಿರುತ್ತದೆ, ಇದನ್ನು ಮುಖ್ಯಮಂತ್ರಿ ಪ್ರತಿದಿನ ಮಾಡಲು ಕಷ್ಟ ಆದ ಕಾರಣ ಇತರೇ ನಾಯಕರುಗಳು ಆತಂಕಕ್ಕೆ ಒಳಗಾಗಿದ್ದಾರೆ.


    "ಬೆಂಗಳೂರನ್ನು ಏಳು ಮಂತ್ರಿಗಳು ಪ್ರತಿನಿಧಿಸುತ್ತಾರೆ. ಅವರಲ್ಲಿ ಒಬ್ಬರಿಗೆ ಜವಾಬ್ದಾರಿ ನೀಡಬೇಕಿತ್ತು, ವಿಶೇಷವಾಗಿ ಕೆಲವು ತಿಂಗಳುಗಳ ಅಂತರದಲ್ಲಿ ಇರುವ ಬಿಬಿಎಂಪಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಪಕ್ಷದ ಪ್ರಚಾರವನ್ನು ಮುನ್ನಡೆಸಲು ಮತ್ತು ಚುನಾವಣೆಗೆ ಎಲ್ಲಾ ರೀತಿಯ ವೇದಿಕೆ ಸಿದ್ದ ಪಡಿಸಲು ನಿಮಗೆ ಸಚಿವರ ಅಗತ್ಯವಿದೆ, ”ಎಂದು ಅತೃಪ್ತ ಸಚಿವರೊಬ್ಬರು ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿದರು.

    ಬಿಬಿಎಂಪಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹಿರಿಯ ಅಚಿವ ಅಶೋಕ ಅವರಿಗೆ ಬೆಂಗಳೂರು ಅಭಿವೃದ್ಧಿ ಖಾತೆ ಹಂಚಿಕೆ ಮಾಡಲು ಕರ್ನಾಟಕ ಸಿಎಂ ಒಲವು ತೋರಿದ್ದರು ಎಂದು ಮೂಲಗಳು ತಿಳಿಸಿವೆ. ಆದರೆ, ಪಕ್ಷದೊಳಗೆ ಉಂಟಾಗುವ ಮತ್ತಷ್ಟು ಜಗಳವನ್ನು ತಪ್ಪಿಸಲು ಬೊಮ್ಮಾಯಿ ಅವರು ಅದನ್ನು ತಮ್ಮ ಬಳಿಯೇ ಉಳಿಸಿಕೊಂಡರು ಎಂದು ಹೇಳಲಾಗಿದೆ.


    ಈ ಮಧ್ಯೆ, ಪಕ್ಷದ ಇನ್ನೊಬ್ಬ ಕಾರ್ಯಕರ್ತ ಮಾತನಾಡಿ, "ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದರಿಂದ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಒತ್ತಡದಲ್ಲಿದೆ. ಈ ಸಮಯದಲ್ಲಿ ಸಿಎಂ ರಿಸ್ಕ್ ತೆಗೆದುಕೊಳ್ಳಲು ಸಾಧ್ಯವಿಲ್ಲ.


    ಮತ್ತೊಂದೆಡೆ, ಪ್ರತಿಪಕ್ಷ ಕಾಂಗ್ರೆಸ್ ರಾಜ್ಯದ ರಾಜಧಾನಿ ನಗರದಲ್ಲಿ ತನ್ನ ಗಣನೀಯ ಪ್ರಭಾವ ಹೆಚ್ಚಿಸಿಕೊಳ್ಳಲು ಆರ್ ರಾಮಲಿಂಗಾ ರೆಡ್ಡಿಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಿದೆ.

    ಕೇಸರಿ ಪಾಳಯವು ಬೆಂಗಳೂರಿನಲ್ಲಿ ರೆಡ್ಡಿಯ ಪ್ರಭಾವವನ್ನು ತಡೆಯಲು ಹಾಗೂ ಪ್ರಭಾವ ತಡೆಯುವುದನ್ನು ನೋಡಿಕೊಳ್ಳಲು ಬೆಂಗಳೂರಿನಿಂದ ಒಬ್ಬ ಪ್ರಬಲ ಮಂತ್ರಿಯನ್ನು ನೇಮಿಸಬೇಕು ಎಂದು ಬಿಜೆಪಿ ಪಕ್ಷದ ಕಾರ್ಯಕರ್ತರು ಅಭಿಪ್ರಾಯಪಟ್ಟಿದ್ದಾರೆ.


    "ಬೆಂಗಳೂರಿನ ಚುನಾವಣಾ ಕೆಲಸವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಬೇಕಾಗುತ್ತದೆ. ಆಡಳಿತಾತ್ಮಕ ಸಮಸ್ಯೆಗಳೂ ಇವೆ, ಇದಕ್ಕೆ ದಿನನಿತ್ಯದ ಪರಿಹಾರದ ಅಗತ್ಯವಿದೆ. ಸಿಎಂಗೆ ಇದೆಲ್ಲದಕ್ಕೂ ಸಮಯವಿದೆಯೇ? ಅದಲ್ಲದೆ, ಚುನಾವಣೆಗಳೂ ಇವೆ ಮತ್ತು ಸಿಎಂ ಅವರು ಸಮಯವನ್ನು ವಿನಿಯೋಗಿಸಲು ಸಾಧ್ಯವಿಲ್ಲ, ವಿಶೇಷವಾಗಿ ಅವರು ನಿರ್ವಹಿಸಲು ಒತ್ತಡ ಅನುಭವಿಸ ಬೇಕಾಗುತ್ತದೆ, ”ಎಂದು ಬಿಜೆಪಿ ಸಚಿವರು ಹೇಳಿದರು.


    "ಬಿಜೆಪಿ ಬಿಬಿಎಂಪಿ ಚುನಾವಣೆ ಗೆದ್ದು ಮತ್ತೆ ಅಧಿಕಾರಕ್ಕೆ ಬರುವ ಗುರಿಯನ್ನು ಹೊಂದಿದ್ದರೆ, ಅದಕ್ಕೆ ಬೆಂಗಳೂರಿನ ಪಕ್ಷದ ಶಾಸಕರು ಮತ್ತು ಸಚಿವರ ಬೆಂಬಲ ಬೇಕಾಗುತ್ತದೆ. ಬೆಂಗಳೂರು ಅಭಿವೃದ್ದಿ ಸಚಿವಾಲಯವನ್ನು ಏಳರಲ್ಲಿ ಯಾರಿಗಾದರೂ ನೀಡಿದ್ದರೆ, ಒಳ್ಳೆ ಕೆಲಸ ಮಾಡಿದಂತಾಗುತ್ತದೆ. ಈ ಸ್ಥಾನವನ್ನು ಉಳಿಸಿಕೊಳ್ಳುವ ಮೂಲಕ ಅವರು ಮುಕ್ತ ಜಗಳವನ್ನು ತಪ್ಪಿಸಿದ್ದಾರೆ, ”ಎಂದು ಮತ್ತೊಬ್ಬ ಬಿಜೆಪಿ ಶಾಸಕರು ಟೈಮ್ಸ್​ ಆಫ್​ ಇಂಡಿಯಾಗೆ ತಿಳಿಸಿದ್ದಾರೆ.


    ಉತ್ತರ ಕರ್ನಾಟಕದ ಬಿಜೆಪಿ ಸಚಿವರಿಗೆ ಸಿಎಂ ಬೊಮ್ಮಾಯಿ ಅವರು ಪ್ರಮುಖ ಹುದ್ದೆಗಳನ್ನು ನೀಡುತ್ತಿದ್ದರು. ಹೊಸದಾಗಿ ಸೇರ್ಪಡೆಯಾದ ನಿಷ್ಠಾವಂತ ಪಕ್ಷದ ನಾಯಕರಿಗೂ ಕ್ರೀಮಿ ಲೇಯರ್​ ಹುದ್ದೆಗಳನ್ನು ನೀಡಲಾಯಿತು. ಪಕ್ಷವು ಆರಗ ಜ್ಞಾನೇಂದ್ರರಿಗೆ ಗೃಹ ಇಲಾಖೆಯನ್ನು ಉಡುಗೊರೆಯಾಗಿ ನೀಡಿತು, ಇದು ಎಲ್ಲರನ್ನೂ ಅಚ್ಚರಿಗೊಳಿಸಿದ ನಿರ್ಧಾರ ಎಂದೇ ಹೇಳಬಹುದು.

    ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕಾಂಗ್ರೆಸ್ ಮತ್ತು ಜೆಡಿ (ಎಸ್) ಮೈತ್ರಿಕೂಟಕ್ಕೆ ರಾಜೀನಾಮೆ ನೀಡಿದ್ದ ವಲಸಿಗರು  ಹೆಚ್ಚು ಕಡಿಮೆ  ಹಿಂದಿನ ಖಾತೆಗಳನ್ನೇ  ಪಡೆಯಲು ಶಕ್ತರಾದರು ಎನ್ನಬಹುದು.


    ಮಾಜಿ ಉಪಮುಖ್ಯಮಂತ್ರಿ ಮತ್ತು ಹಿರಿಯ ದಲಿತ ನಾಯಕ ಗೋವಿಂದ ಕಾರಜೋಳ ಅವರಿಗೆ ಬಹು ಬೇಡಿಕೆಯಿರುವ ನೀರಾವರಿ ಖಾತೆಯನ್ನು ನೀಡಲಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಶಿವಮೊಗ್ಗ ಜಿಲ್ಲೆಯ ಇನ್ನೊಬ್ಬ ಹಿರಿಯ ನಾಯಕನಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯನ್ನು ನೀಡಲಾಗಿದೆ.


    ಬೆಂಗಳೂರಿನ ಹಿರಿಯ ಒಕ್ಕಲಿಗ ನಾಯಕ ಅಶೋಕ ಅವರಿಗೆ ಮುಜರಾಯಿ ಹೊರತುಪಡಿಸಿ ಕಂದಾಯ ಇಲಾಖೆ ಹಂಚಿಕೆ ಮಾಡಲಾಗಿದೆ. ವಾಲ್ಮೀಕಿ ಸಮುದಾಯದ ಪ್ರಮುಖ ನಾಯಕ ಮತ್ತು ಬಳ್ಳಾರಿ  ಮಾಜಿ ಗಣಿ ಧಣಿ (ಮಾಜಿ ಸಚಿವ ಗಾಲಿ ಜನಾರ್ಧನ್ ರೆಡ್ಡಿ ಮತ್ತು ಕುಟುಂಬದ ಆಪ್ತ) ಬಿ. ಶ್ರೀರಾಮುಲು ಅವರಿಗೆ ಎಸ್‌ಟಿ ಕಲ್ಯಾಣ ಇಲಾಖೆ ಸೇರಿದಂತೆ ಸಾರಿಗೆ ಖಾತೆ ನೀಡಲಾಗಿದೆ.


    ಇದನ್ನೂ ಓದಿ: ಬಿಗ್​ಬಾಸ್​-15 ಹಿಂದಿ ಅವತರಣಿಕೆ: ಮತ್ತೆ ಬಂದ ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ಕಾಲೆಳೆದ ಟ್ರೋಲ್​ ಪಡೆ

    ಸೋಮಣ್ಣ, ಪಕ್ಷದಲ್ಲಿ ತಮ್ಮದೇ ಆದ ಚಾರ್ಮ್​ ಪಡೆದು ಹೆಸರುವಾಸಿಯಾಗಿದ್ದು, ವಸತಿ ಸಚಿವಾಲಯವನ್ನು ಪಡೆದಿದ್ದಾರೆ ಮತ್ತು ಹೆಚ್ಚುವರಿಯಾಗಿ ಮೂಲಸೌಕರ್ಯ ಅಭಿವೃದ್ಧಿ  ಉಸ್ತುವಾರಿಯನ್ನು ಗಿಟ್ಟಿಸಿಕೊಂಡಿದ್ದಾರೆ.




    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

    Published by:HR Ramesh
    First published: