• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಬೆಂಗಳೂರು ಪೊಲೀಸರ ಮಾನವೀಯತೆ; ಕೋಮಾದಲ್ಲಿದ್ದ ಅಪರಿಚಿತ ವ್ಯಕ್ತಿಗೆ ಒಂದು ತಿಂಗಳು ಆರೈಕೆ

ಬೆಂಗಳೂರು ಪೊಲೀಸರ ಮಾನವೀಯತೆ; ಕೋಮಾದಲ್ಲಿದ್ದ ಅಪರಿಚಿತ ವ್ಯಕ್ತಿಗೆ ಒಂದು ತಿಂಗಳು ಆರೈಕೆ

ಕೋಮಾದಲ್ಲಿದ್ದ ಸಂಜಯ್​ಗೆ ಒಂದು ತಿಂಗಳೂ ಪೊಲೀಸರಿಂದ ಆರೈಕೆ

ಕೋಮಾದಲ್ಲಿದ್ದ ಸಂಜಯ್​ಗೆ ಒಂದು ತಿಂಗಳೂ ಪೊಲೀಸರಿಂದ ಆರೈಕೆ

ಆಗಸ್ಟ್ 16ರಂದು ಮಾರತಹಳ್ಳಿ ಬಳಿ ಅಪಘಾತಗೊಂಡು ಬಿದ್ದು ಕೋಮಾ ತಲುಪಿದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಗುಣಮುಖರಾಗುವವರೆಗೂ 1 ತಿಂಗಳವರೆಗೂ ಆರೈಕೆ ಮಾಡಿದ ಓಲ್ಡ್ ಏರ್ಪೋರ್ಟ್ ಠಾಣೆಯ ಪೊಲೀಸರ ಕಾರ್ಯಕ್ಕೆ ತಲೆದೂಗಬೇಕಿದೆ.

  • Share this:

ಬೆಂಗಳೂರು(ಅ. 01): ಮಾನವೀಯ ಸಂಬಂಧಗಳೇ ಮರೆಯಾಗುತ್ತಿರುವ ಇಂಥ ಹೊತ್ತಲ್ಲಿ ಅಪರೂಪದಲ್ಲಿ ಅಪರೂಪದ ಘಟನೆಗೆ ಬೆಂಗಳೂರಿನ ಸಂಚಾರಿ ಪೊಲೀಸರು ಕಾರಣರಾಗಿದ್ದಾರೆ. ಗೊತ್ತು-ಗುರಿ ಇಲ್ಲದ, ಸಂಬಂಧಿಕನೋ ಅಥವಾ ಕನಿಷ್ಠ ಪರಿಚಯವೂ ಇಲ್ಲದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಮಗುವಿನಂತೆ ನೋಡಿಕೊಂಡಿದ್ದಾರೆ. ಅಪಘಾತವಾಗಿ ನರಳಾಡುತ್ತಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದ ಓಲ್ಡ್ ಏರ್ಪೋರ್ಟ್ ಸಂಚಾರಿ ಪೊಲೀಸರು ಆ ವ್ಯಕ್ತಿ ಕೋಮಾದಿಂದ ಹೊರಬರುವವರೆಗೂ ಕಾದು ಆರೈಕೆ ಮಾಡಿದ್ದಾರೆ.


ಕಳೆದ ಆಗಸ್ಟ್‌ 16ರಂದು ಮಾರತ್ ಹಳ್ಳಿ ಬಳಿ ನಡೆದುಕೊಂಡು ಹೋಗುತ್ತಿದ್ದ ಸಂಜಯ್ ಅವರಿಗೆ ವೇಗವಾಗಿ ಬಂದ ಬೈಕ್​​ವೊಂದು ಹಠಾತ್ತನೇ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ತಲೆಗೆ ಗಂಭೀರ ಗಾಯಗಳಾಗಿ ಸಂಜಯ್ ನಡುರಸ್ತೆಯಲ್ಲೇ ನರಳಾಡಿಕೊಂಡು ಬಿದ್ದಿದ್ದ. ಯಾರೊಬ್ಬರೂ ಸಹಾಯಕ್ಕೆ ಧಾವಿಸದೆ ಮೌನವಾಗಿದ್ದಂತೆಯೇ ದೇವರಂತೆ ಬಂದವರು ಸಂಚಾರಿ ಪೊಲೀಸ್ ಠಾಣೆಯ ಕಾನ್ಸ್​ಟೆಬಲ್​ಗಳಾದ ಕಾಶಪ್ಪ, ಚೀರಂಜಿವಿ ಮತ್ತು ಇನ್ನಿತರ ಸಿಬ್ಬಂದಿ.


ಇದನ್ನೂ ಓದಿ: ಕೊಪ್ಪಳ : ಹಳ್ಳದಲ್ಲಿ ಕೊಚ್ಚಿ ಹೋದ ಟ್ರ್ಯಾಕ್ಟರ್ ; ಕುಸಿದು ಬಿದ್ದ ಮನೆ ಗೋಡೆ


ಚನ್ನೇಶ್ ನೇತೃತ್ವದಲ್ಲಿ ಪೊಲೀಸರು ಆ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದರು. ತಲೆಗೆ ತೀವ್ರ ಪೆಟ್ಟಾಗಿ ಸಂಜಯ್ ಅದಾಗಲೇ ಕೋಮಾ ಹಂತ ತಲುಪಿದ್ದ. ಕೋಮಾಗೆ ಹೋಗಿದ್ದರಿಂದ ಸಂಜಯ್​ಗೆ ಶಸ್ತ್ರ ಚಿಕಿತ್ಸೆ ಅನಿವಾರ್ಯವಾಗಿತ್ತು. ಕೂಡಲೇ ಸ್ಥಳೀಯ ಆಸ್ಪತ್ರೆಯಿಂದ ನಿಮ್ಹಾನ್ಸ್​ಗೆ ಕರೆತಂದ ಪೊಲೀಸರು,  ಸಂಜಯ್ ತಲೆಯಲ್ಲಿ ಹೆಪ್ಪುಗಟ್ಟಿದ್ದ ರಕ್ತದ ಗಡ್ಡೆಯನ್ನ ಶಸ್ತ್ರಚಿಕಿತ್ಸೆ ಮೂಲಕ ತೆಗೆದರು. ಆದರೆ, ಸಂಜಯ್ ಮಾತ್ರ ಕೋಮಾದಿಂದ ಎದ್ದಿರಲಿಲ್ಲ. ಕೊನೆಗೆ ಸಂಜಯ್​ನ ಹಿನ್ನೆಲೆ ಕಲೆಹಾಕಿದ ಪೊಲೀಸರಿಗೆ ಸಂಜಯ್ ಮಹಾರಾಷ್ಟ್ರ ಮೂಲದವವೆಂಬುದು ತಿಳಿದು ಬಂದಿತು.


ಇದನ್ನೂ ಓದಿ: ಮೈತ್ರಿಗೆ ಕಾಂಗ್ರೆಸ್ ಯೋಗ್ಯ ಪಕ್ಷವಲ್ಲ: ಹೆಚ್.ಡಿ. ಕುಮಾರಸ್ವಾಮಿ


ಈ ವೇಳೆ, 15ದಿನಗಳ ಕಾಲ ಸಂಜಯ್ ಮಾತ್ರ ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿಯಲ್ಲೇ ದಿನದೂಡಿದ್ದ. ಸಂಜಯ್ ಕೋಮಾ ಸ್ಥಿತಿಯಲ್ಲಿ ಆಸ್ಪತ್ರೆಯ ಬೆಡ್​ನಲ್ಲಿ ಪವಡಿಸಿದ್ದರೆ, ಇತ್ತ ಅವನಿಗಾಗಿ ಬಂದವರ್ಯಾರೂ ಇಲ್ಲ. ಆಗೆಲ್ಲಾ ಜೊತೆಯಾಗಿದ್ದು ರಾತ್ರಿ ಹಗಲೆನ್ನದೆ ಸಂಜಯ್​ನ ಆರೈಕೆ ಮಾಡಿದ್ದು ಪೊಲೀಸರೇ. ಆಸ್ಪತ್ರೆಯಲ್ಲಿ ಒಂದು ತಿಂಗಳವರೆಗೂ ಪಾಳಿಯಂತೆ ಕಾನ್​​ಸ್ಟೆಬಲ್​ಗಳಾದ ಕಾಶಪ್ಪ, ಚೀರಂಜೀವಿ ಹಾಗೂ ಶ್ರೀಕಾಂತ್ ಮತ್ತು ಇತರ ಸಿಬ್ಬಂದಿ ಸಂಜಯ್‌ ಗುಣಮುಖನಾಗುವವರೆಗೂ ಕಾದು ಉಪಚರಿಸಿದ್ದಾರೆ. ಸಂಪೂರ್ಣ ಗುಣಮುಖನಾದ ಮೇಲೆಯೇ ಸಂಜಯ್ ಅವರನ್ನು ಪೊಲೀಸರು ಮಹಾರಾಷ್ಟ್ರಕ್ಕೆ ಹೋಗಲು ಟಿಕೆಟ್​ಗೆ ಹಣ ಕೊಟ್ಟು ಕಳುಹಿಸಿದ್ದಾರೆ.


ಇದೀಗ ಪೊಲೀಸರ ಈ ಮಾನವೀಯತೆ ಕಂಡು ಹಿರಿಯ ಅಧಿಕಾರಿಗಳೇ ತಲೆ ಬಾಗಿದ್ದಾರೆ. ಸಾರ್ವಜನಿಕ ವಲಯದಲ್ಲೂ ಪೊಲೀಸರಿಗೆ ಮೆಚ್ಚುಗೆ ಸಿಕ್ಕಿದೆ. ಇವರ ಆರೈಕೆ ಉಂಡ ಸಂಜಯ್​ನ ಕಣ್ಣುಗಳಲ್ಲಿ ಕೃತಜ್ಞತೆಯ ಭಾವ ಮೂಡಿದೆ.


ವರದಿ: ಗಂಗಾಧರ ವಾಗಟ

Published by:Vijayasarthy SN
First published: