• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Sad News: ನಿಂತಿದ್ದ ಕ್ಯಾಂಟರ್‌ಗೆ ಬೈಕ್ ಡಿಕ್ಕಿ, ಡೆಲಿವರಿ ಬಾಯ್ ಸಾವು, ಅತ್ತ ಬಸ್​​-ಕಾರು ಅಪಘಾತದಲ್ಲಿ ಮೂವರ ದುರ್ಮರಣ!

Sad News: ನಿಂತಿದ್ದ ಕ್ಯಾಂಟರ್‌ಗೆ ಬೈಕ್ ಡಿಕ್ಕಿ, ಡೆಲಿವರಿ ಬಾಯ್ ಸಾವು, ಅತ್ತ ಬಸ್​​-ಕಾರು ಅಪಘಾತದಲ್ಲಿ ಮೂವರ ದುರ್ಮರಣ!

ಭೀಕರ ಅಪಘಾತ

ಭೀಕರ ಅಪಘಾತ

ಮೃತರನ್ನು ಸುರಪುರ ತಾಲೂಕಿನ ರಂಗಂಪೇಟೆ ನಿವಾಸಿಗಳು ಎಂದು ಗುರುತಿಸಲಾಗಿದೆ. ರಂಗಂಪೇಟೆಯ ನಾಗರಾಜ ಸಜ್ಜನ್ (59), ಪತ್ನಿ ಮಹಾದೇವಿ (50) ಹಾಗೂ ಸಂಬಂಧಿ ರೇಣುಕಾ (45) ಮೃತ ದುರ್ಧೈವಿಗಳಾಗಿದ್ದಾರೆ.

  • Share this:

ಬೆಂಗಳೂರು: ಪಿಜ್ಜಾ ಡೆಲಿವರಿ (Pizza Delivery) ಕೊಡಲು ಹೋಗ್ತಿದ್ದವನು‌ ಗ್ರಾಹಕರಿಗೆ (Customer) ಡೆಲಿವರಿ ನೀಡುವ ಮೊದಲೇ ಹೆಣವಾಗಿ ಹೋಗಿದ್ದಾನೆ. 31 ವರ್ಷದ ನಾಗಪ್ಪ ಮೃತ ದುರ್ದೈವಿ. ನಿಂತಿದ್ದ ಕ್ಯಾಂಟರ್​ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನಪ್ಪಿದ್ದರು. ಸ್ವಿಗ್ಗಿಯಲ್ಲಿ (Swiggy) ಕೆಲಸ ಮಾಡುತ್ತಿದ್ದ ಮೃತ ನಾಗಪ್ಪ, ನಿನ್ನೆ ರಾತ್ರಿ 12.30ರ ಸಮಯ ಪಿಜ್ಜಾ ಡೆಲಿವರಿ ಕೊಡಲು ಸುಮನಹಳ್ಳಿ ಜಂಕ್ಷನ್​ನಿಂದ (Sumanahalli Junction) ನಾಗರಭಾವಿ ರಿಂಗ್ ರಸ್ತೆ ಮಾರ್ಗವಾಗಿ ಹೋಗುತ್ತಿದ್ದ. ಈ ವೇಳೆ ಮಾಳಗಾಳ ಬಳಿ ಕ್ಯಾಂಟರ್ ಕೆಟ್ಟು ನಿಂತಿದ್ದು, ರಿಪೇರಿ ಮಾಡಲಾಗುತ್ತಿತ್ತು. ಅದು ಗೊತ್ತಾಗದೇ ಸೀದ ಲಾರಿಗೆ (Lorry) ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾನೆ.


ಮೃತರಿಗೆ ಒಂದೂವರೆ ತಿಂಗಳ ಮಗುವಿದೆ


ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕ್ಯಾಂಟರ್​ಗೆ ಸಿಲುಕಿದ್ದ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಎರಡು ತಿಂಗಳ ಹಿಂದೆಯಷ್ಟೇ ಬೆಂಗಳೂರಿಗೆ ಬಂದಿದ್ದ ಮೃತ ನಾಗಪ್ಪ, ಸಂಬಂಧಿಕರ ಮನೆಯಲ್ಲಿ ಉಳಿದಿದ್ದ. ಒಂದೂವರೆ ತಿಂಗಳ ಮಗುವಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.




ಇದನ್ನೂ ಓದಿ: Karnataka Rains: ಧಾರಾಕಾರ ಮಳೆಗೆ ಹೆದ್ದಾರಿ ಜಲಾವೃತ; ಹತ್ತಾರು ಕಿ.ಮೀ. ಟ್ರಾಫಿಕ್ ಜಾಮ್, ಸವಾರರಿಗೆ ಸಂಕಷ್ಟ


ಕೆಎಸ್​ಆರ್​ಟಿಸಿ ಬಸ್ ಹಾಗೂ ಕಾರು ನಡುವೆ ಬೀಕರ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮದ್ದರಕಿ ಬಳಿಯ ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಬಸ್​​​ನಲ್ಲಿದ್ದ ಐದಾರು ಜನರಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಘಟನೆ ನಂತರ ಬಸ್ ಚಾಲಕ ಬಿಟ್ಟು ಓಡಿ ಹೋಗಿದ್ದಾರೆ.


ಮೃತರನ್ನು ಸುರಪುರ ತಾಲೂಕಿನ ರಂಗಂಪೇಟೆ ನಿವಾಸಿಗಳು ಎಂದು ಗುರುತಿಸಲಾಗಿದೆ. ರಂಗಂಪೇಟೆಯ ನಾಗರಾಜ ಸಜ್ಜನ್ (59), ಪತ್ನಿ ಮಹಾದೇವಿ (50) ಹಾಗೂ ಸಂಬಂಧಿ ರೇಣುಕಾ (45) ಮೃತ ದುರ್ಧೈವಿಗಳಾಗಿದ್ದಾರೆ. ಕೃಷಿ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ಮೃತ ನಾಗರಾಜ ಸಜ್ಜನ್, ಇಂದು ಕಲಬುರಗಿಯಲ್ಲಿ ಸಂಬಂಧಿಕರ ಮದುವೆಗೆ ಹೋಗಿದ್ದರು. ಮದುವೆ ಮುಗಿಸಿ ವಾಪಾಸ್ ಬರುವಾಗ ನಡೆದಿರುವ ಅವಘಡ ಸಂಭವಿಸಿದೆ. ಸ್ಥಳಕ್ಕೆ ಭೀಮರಾಯನ ಗುಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

top videos
    First published: