ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru News) ಗಾಳಿಯ ಗುಣಮಟ್ಟ ಈ ಹಿಂದೆ ವರದಿ ಮಾಡಿದ್ದಕ್ಕಿಂತ ಅತ್ಯಂತ ಕೆಟ್ಟದಾಗಿದೆ ಎಂಬುದಾಗಿ ಅಧ್ಯಯನವೊಂದು ಬಹಿರಂಗಪಡಿಸಿದೆ. ಗಾಳಿಯ ಗುಣಮಟ್ಟವನ್ನು (Bengaluru Air Quality) ನಿರ್ವಹಿಸುವ ಮಾಪನಗಳಿಂದ ಸಂಗ್ರಹಿಸಿರುವ ಅಂಕಿ ಅಂಶಗಳ ಪ್ರಕಾರ ಗಾಳಿ ಕಲುಷಿತವಾಗಿದೆ ಎಂಬುದಾಗಿ ಅಧ್ಯಯನ ತಿಳಿಸಿದೆ.
ಸೆಂಟರ್ ಫಾರ್ ಸ್ಟಡಿ ಆಫ್ ಸೈನ್ಸ್, ಟೆಕ್ನಾಲಜಿ ಅಂಡ್ ಪಾಲಿಸಿ (CSTEP) ತನ್ನ ಹೊಸ ಅಧ್ಯಯನದಲ್ಲಿ ಗಾಳಿ ಗುಣಮಟ್ಟ ಸಾಧನದ 55 ಸಂವೇದಕಗಳನ್ನು ಬಳಸಿ ಬೆಂಗಳೂರಿನ ಬಹುಪಾಲು ನಗರ ವಲಯ ಹಾಗೂ ಅರೆ ನಗರ ಮತ್ತು ಗ್ರಾಮೀಣ ಭಾಗದ ಗಾಳಿಯ ಗುಣಮಟ್ಟವನ್ನು ಪರಿಶೀಲಿಸಿದೆ. ಗಾಳಿಯ ಗುಣಮಟ್ಟದ ಬಗ್ಗೆ ಈ ಅಧ್ಯಯನ ಬೆಳಕು ಚೆಲ್ಲಿದ್ದು, ಕಳಪೆಯಾಗಿರುವ ಗಾಳಿಯನ್ನು ಹೇಗೆ ಸ್ವಚ್ಛಗೊಳಿಸಬಹುದು ಎಂಬ ಮಾಹಿತಿಯನ್ನು ಒದಗಿಸಿದೆ.
ರಸ್ತೆಯ ಮಾಲಿನ್ಯ 1000% ಹೆಚ್ಚಾಗಿದೆ ಸಂಶೋಧಕರು
ಸಂಶೋಧಕರು 1200 ಕಿಮೀ ರಸ್ತೆ ಮಾರ್ಗಗಳನ್ನು ಗುರುತಿಸಿದ್ದಾರೆ. ಅವುಗಳನ್ನು 11 ವಿಶಿಷ್ಟ ಮಾರ್ಗಗಳಾಗಿ ವಿಂಗಡಿಸುವ ಮೂಲಕ (ಪ್ರತಿಯೊಂದೂ 100 ಕಿ.ಮೀ.) ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಮಾಲಿನ್ಯವನ್ನು ಮಾಪನ ಮಾಡಿದ್ದಾರೆ. ರಸ್ತೆಯಲ್ಲಿನ ಮಾಲಿನ್ಯವು ಸುತ್ತುವರಿದ ಮಾಲಿನ್ಯ ಮಟ್ಟಕ್ಕಿಂತ 200% ರಿಂದ 1000% ಹೆಚ್ಚಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ನಗರದ ಪ್ರದೇಶಗಳ ಗಾಳಿಯ ಗುಣಮಟ್ಟ
ದಾಸರಹಳ್ಳಿ, ರಾಜರಾಜೇಶ್ವರಿ ನಗರ, ಪಶ್ಚಿಮ ವಲಯ, ದಕ್ಷಿಣ ವಲಯ ಮತ್ತು ಬೊಮ್ಮನಹಳ್ಳಿ ಭಾಗಗಳನ್ನು ಒಳಗೊಂಡಿರುವ ಬಿಬಿಎಂಪಿ ಪ್ರದೇಶದ ಪಶ್ಚಿಮ ಭಾಗಗಳಲ್ಲಿ ರಸ್ತೆಯಲ್ಲಿನ ಗಾಳಿಯ ಮಾಪನವು PM2.5 ಹೆಚ್ಚಿನ ಮೌಲ್ಯಗಳನ್ನು (ಪ್ರತಿ ಘನ ಮೀಟರ್ಗೆ 72 ರಿಂದ 80 ಮೈಕ್ರೋಗ್ರಾಂಗಳ ನಡುವೆ) ಪ್ರದರ್ಶಿಸಿದೆ ಎಂದು ಅಧ್ಯಯನ ತಿಳಿಸಿದೆ.
ಮೈಸೂರು ರಸ್ತೆ, ನೈಸ್ ರಸ್ತೆ, ಕನಕಪುರ ರಸ್ತೆ, ಮಾಗಡಿ ಮುಖ್ಯ ರಸ್ತೆ ಮತ್ತು ತುಮಕೂರು ರಸ್ತೆಗಳಲ್ಲಿ ಪ್ರತಿ ಘನ ಮೀಟರ್ಗೆ 88 ಮೈಕ್ರೋಗ್ರಾಂಗಿಂತ ಹೆಚ್ಚಿನ ಪಿಎಂ 2.5 ಪ್ರಸ್ತುತಿ ಇರುವುದಾಗಿ ಅಧ್ಯಯನವು ತಿಳಿಸಿದೆ. ಹೆಚ್ಚಿನ ಪೂರ್ವ ಭಾಗಗಳಲ್ಲಿ ಪ್ರತಿ ಘನ ಮೀಟರ್ಗೆ 60 ಮೈಕ್ರೋಗ್ರಾಂಗಿಂತ ಕಡಿಮೆ ಇತ್ತು ಎಂಬ ಮಾಹಿತಿ ಕೂಡ ಲಭ್ಯವಾಗಿದೆ.
ಕೆಲವು ಭಾಗಗಳಲ್ಲಿ ಗಾಳಿ ಮಾಲಿನ್ಯಕಾರಕವಾಗಿದೆ
ಮಹದೇವಪುರ, ದಾಸರಹಳ್ಳಿ, ರಾಜರಾಜೇಶ್ವರಿ ನಗರ, ಪಶ್ಚಿಮ ವಲಯ ಮತ್ತು ದಕ್ಷಿಣ ವಲಯವನ್ನು ಜನವರಿ 2022 ರಲ್ಲಿ ಕಣಗಳ ಹೆಚ್ಚಿನ ಸಾಂದ್ರತೆಯೊಂದಿಗೆ ವಿಭಾಗಗಳಾಗಿ ವಿಂಗಡಿಸಿದೆ. ಬೊಮ್ಮಸಂದ್ರ ಮತ್ತು ಅತ್ತಿಬೆಲೆ ಪ್ರದೇಶಗಳು ಪ್ರತಿ ಘನ ಮೀಟರ್ಗೆ 50 ಮೈಕ್ರೋಗ್ರಾಂಗಿಂತ ಹೆಚ್ಚು PM2.5 ನಿಂದ ಪ್ರತಿನಿಧಿತವಾಗಿವೆ. ಹೊಸಕೋಟೆಯ ಹಾಟ್ಸ್ಪಾಟ್ ಪ್ರದೇಶವನ್ನು ಹೊರತುಪಡಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಪ್ರತಿ ಘನ ಮೀಟರ್ಗೆ 33 ಮೈಕ್ರೋಗ್ರಾಂಗಳೊಂದಿಗೆ ಉತ್ತಮವಾಗಿದೆ.
ಗಾಳಿಯ ಕಳಪೆ ಮಟ್ಟದಿಂದ ರೋಗಗಳು ಕಟ್ಟಿಟ್ಟ ಬುತ್ತಿ
ಮಾಲಿನ್ಯದ ಸಣ್ಣ ಸಣ್ಣ ಕಣಗಳಿಂದ ಉಂಟಾಗುವ ದೋಷವನ್ನು ಪತ್ತೆಹಚ್ಚಲಾಗಿದ್ದು ಇದು ಪರಿಸರಕ್ಕೆ ನೇರವಾಗಿ ಹಾನಿಮಾಡುತ್ತವೆ. ಅನಿಲಗಳ ದ್ಯುತಿರಾಸಾಯನಿಕದ ಮೂಲಕ ರೂಪುಗೊಳ್ಳುತ್ತದೆ ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ. ಇದು ಹೆಚ್ಚಿನ ರಕ್ತದೊತ್ತಡಕ್ಕೆ ಕಾರಣವಾಗಿವೆ ಎಂಬ ಅಂಶವನ್ನು ತಿಳಿಸಿದ್ದಾರೆ.
ಗಾಳಿಯ ಶುದ್ಧತೆ ಹೇಗೆ ಹೆಚ್ಚಿಸಬಹುದು?
ಬಹುಮಾಲಿನ್ಯಕಾರಕ ಅಂಶಗಳನ್ನು ಮಾಪನವಾಗಿ ಇರಿಸಿಕೊಂಡು ಭವಿಷ್ಯದಲ್ಲಿ ಇನ್ನಷ್ಟು ಅಧ್ಯಯನಗಳನ್ನು ಕೈಗೊಳ್ಳಬಹುದು. ಹೀಗೆ ಅನಿಲ ಮಾನದಂಡಗಳ ಮಾಲಿನ್ಯಕಾರಕಗಳ ಗುಣಲಕ್ಷಣಗಳ ಮೇಲೆ ಕೇಂದ್ರೀಕರಿಸಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: IPL 2023: ಬೆಂಗಳೂರಲ್ಲಿ ರಾತ್ರಿಯಿಡೀ ಕ್ಯೂ ನಿಂತ 10 ಸಾವಿರಕ್ಕೂ ಹೆಚ್ಚು ಯುವಕರು!
ವಾಹನಗಳು ಹೊರಸೂಸುವ ಹೊಗೆಯನ್ನು ಕಡಿಮೆ ಮಾಡುವುದು, ಮಾಲಿನ್ಯ ನಿಭಾಯಿಸಲು ಪ್ರಾದೇಶಿಕ ತಂತ್ರಗಳನ್ನು ಅಳವಡಿಸುವುದು ಅಂತೆಯೇ ಸಂಘಟಿತವಲ್ಲದ ಮಾಲಿನ್ಯಕಾರಕ ಕೈಗಾರಿಕೆಗಳು, ಸಂಸ್ಥೆಗಳ ಚಟುವಟಿಕೆಗಳ ಪರಿಶೋಧನೆ ಮೊದಲಾದ ಅಂಶಗಳಿಂದ ಗುಣಮಟ್ಟ ಸುಧಾರಿಸಬಹುದು ಎಂದು ತಿಳಿಸಿದೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಬೆಂಗಳೂರಿನಲ್ಲಿರುವ ಗಾಳಿಯ ಗುಣಮಟ್ಟವನ್ನು ಏಳು ಸುತ್ತುವರಿದ ಕೇಂದ್ರಗಳ ಡೇಟಾವನ್ನು ಆಧರಿಸಿ ಅಳೆಯುತ್ತದೆ.
ಇದನ್ನೂ ಓದಿ: Bengaluru Mysuru Expressway ಹೊಸ ಟೋಲ್ ದರ ಹೀಗಿದೆ
ಇವುಗಳಲ್ಲಿ ಎರಡು ಕೇಂದ್ರಗಳು PM 2.5 ಅನ್ನು ಮೇಲ್ವಿಚಾರಣೆ ಮಾಡುವುದಿಲ್ಲ. ಈ ಕಣಗಳು ಶ್ವಾಸಕೋಶದ ಮೂಲಕ ರಕ್ತಪ್ರವಾಹಕ್ಕೆ ಪ್ರವೇಶಿಸುವ ಸೂಕ್ಷ್ಮ ಕಣಗಳಾಗಿದ್ದು ಕ್ಯಾನ್ಸರ್ ಸೇರಿದಂತೆ ಹಲವಾರು ರೋಗಗಳಿಗೆ ಕಾರಣವಾಗುವಷ್ಟು ಸಾಮರ್ಥ್ಯ ಪಡೆದುಕೊಂಡಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ