ಬೆಂಗಳೂರು (ಫೆ. 5): ಬಿಬಿಎಂಪಿ ಯೋಜನಾಧಿಕಾರಿಯೊಬ್ಬರು 20 ಲಕ್ಷ ರೂ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಎಸಿಬಿ ಕೈಗೆ ಸಿಕ್ಕಿಬಿದ್ದಾರೆ. ಬಿಬಿಎಂಪಿ ಯೋಜನಾಧಿಕಾರಿಯಾಗಿರುವ ದೇವೇಂದ್ರಪ್ಪ ಸಿಕ್ಕಿಬಿದ್ದ ಅಧಿಕಾರಿ. ಬೊಮ್ಮನಹಳ್ಳಿಯ ಟೌನ್ ಪ್ಲಾನಿಂಗ್ ಅಧಿಕಾರಿಯಾಗಿರುವ ಇವರು ಕಟ್ಟಡಕ್ಕೆ ಒಸಿ ಕೊಡಲು 40 ಲಕ್ಷ ಲಂಚದ ಬೇಡಿಕೆ ಇಟ್ಟಿದ್ದರು. ಇದರ ಮುಖಂಡವಾಗಿ ಇಂದು 20 ಲಕ್ಷ ಹಣವನ್ನು ಪಡೆಯಲು ಮುಂದಾಗಿದ್ದರು. ಮೆಜೆಸ್ಟಿಕ್ನ ಹೊಟೇಲ್ನಲ್ಲಿ 20 ಲಕ್ಷ ಹಣ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದು, ಈ ವೇಳೆ ಹಣದ ಸಮೇತ ಅಧಿಕಾರಿ ಸಿಕ್ಕಿ ಬಿದ್ದಿದ್ದಾರೆ.
ಯೋಜನಾ ಅಧಿಕಾರಿಯಾಗಿರುವ ದೇವೇಂದ್ರಪ್ಪ ವಿಕಲಚೇತನಾರಾಗಿದ್ದಾರೆ. ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂದು ಬಿಬಿಎಂಪಿಯ ಮುಖ್ಯ ಕಚೇರಿಯಲ್ಲಿ ನಡೆದ ಸಭೆಗೂ ಹಾಜರಾಗಿದ್ದರು. ಬಳಿಕ ಹಣ ಪಡೆಲು ಮುಂದಾಗಿದ್ದರು. ಹಣದ ಬೇಡಿಕೆ ಇಟ್ಟಿದ್ದ ಕುರಿತು ರಾಜೇಶ್ ಎಂಬುವವರು ಎಸಿಬಿಗೆ ದೂರು ಸಲ್ಲಿಸಿದ್ದರು.
ಸಿ ಲಕ್ಷೀ ನಾರಾಣಯಣ್ ಎನ್ನುವವರ ಬೊಮ್ಮನಹಳ್ಳಿಯ ಹುಳಿಮಾವಿನ ಬಳಿ ಕಟ್ಟಡಕ್ಕೆ ಒಸಿ ನೀಡಲು ಇವರು ಹಣದ ಬೇಡಿಕೆ ಇಟ್ಟಿದ್ದರು. ಇದಕ್ಕಾಗಿ 40 ಲಕ್ಷ ಹಣವನ್ನು ಕೇಳಿದ್ದರು.
ಇದೇ ವೇಳೆ ಎಸಿಬಿ ಅಧಿಕಾರಿಗಳು ಅವರ ಕಾರನ್ನು ಪರಿಶೀಲಿಸಿದಾಗ 7 ಲಕ್ಷದ 42 ಸಾವಿರ ಹಣ ಪತ್ತೆಯಾಗಿದೆ. ಈ ಹಣಕ್ಕೆ ಯಾವುದೇ ದಾಖಲೆ ಯನ್ನು ಅಧಿಕಾರಿ ನೀಡುವಲ್ಲಿ ವಿಫಲರಾಗಿದ್ದಾರೆ. ಈ ಕುರಿತು ಎಸಿಬಿ ಅಧಿಕಾರಿಗಳು ದೇವೇಂದ್ರಪ್ಪನನ್ನು ವಿಚಾರಣೆ ನಡೆಸಿದ್ದು, ಕಾರಿನಲ್ಲಿ ಸಿಕ್ಕ ಕೆಲ ದಾಖಲೆಗಳು ಮತ್ತು ಕಾರಿನಲ್ಲಿ ಸಿಕ್ಕ ಹಣ ವಶಕ್ಕೆ ಪಡೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ