ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election 2023) ಹೊಸ್ತಿಲಲ್ಲಿ ಬಿಬಿಎಂಪಿ ಇಂಜಿನಿಯರ್ (BBMP Engineers)ಗಳಿಗೆ ಮೂಗುದಾರ ಹಾಕಲು ಪಾಲಿಕೆ ಮುಂದಾಗಿದೆ. ಇನ್ಮುಂದೆ ತಳಮಟ್ಟದಲ್ಲಿರುವ ಇಂಜಿನಿಯರ್ಗಳು ರಸ್ತೆ ಅಗೆಯೋದಕ್ಕೆ ಇತರೆ ಸರ್ಕಾರಿ ಸಂಸ್ಥೆಗಳಿಗೆ (Government Agency) ಅನುಮತಿ ನೀಡಿದರೆ ಹುಷಾರ್ ಎಂದಿದೆ ಪಾಲಿಕೆ (BBMP). ಇತ್ತೀಚಿಗೆ ಬೆಂಗಳೂರಿನ ಮೂರ್ನಾಲ್ಕು ಕಡೆ ರಸ್ತೆಗಳು ಏಕಾಏಕಿ ಕುಸಿದು (Sink Hole) ಅವಾಂತರ ಸೃಷ್ಟಿಯಾಗಿತ್ತು. ಇದರ ಬೆನ್ನಲ್ಲೇ ಈಗ ಬಿಬಿಎಂಪಿ ಹಿರಿಯ ಅಧಿಕಾರಿಗಳು ಹೊಸ ಆದೇಶ ಮಾಡಿದ್ದಾರೆ. ಇನ್ಮುಂದೆ ಸ್ಥಳೀಯ ಎಂಜಿನಿಯರ್ಗಳು ರಸ್ತೆ ಅಗೆಯೋದಕ್ಕೆ ಇತರೆ ಸರ್ಕಾರಿ ಸಂಸ್ಥೆಗಳಿಗೆ ಅನುಮತಿ ನೀಡುವಂತಿಲ್ಲ. ಒಂದು ವೇಳೆ ಅನುಮತಿ ಕೊಟ್ಟು ಅವಾಂತರ ಸೃಷ್ಟಿಯಾದರೆ ಪಾಲಿಕೆ ಎಂಜಿನಿಯರ್ಗಳೇ ನೇರ ಹೊಣೆ. ಈ ಬಗ್ಗೆ ಯೋಜನಾ ವಿಭಾಗದ ವಿಶೇಷ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ರಸ್ತೆಯನ್ನು ಅಗೆಯಲು ಪರ್ಮಿಷನ್ ಕೊಡ್ಬೇಡಿ; ಸ್ಥಳೀಯ ಎಂಜಿನಿಯರ್ಸ್ಗೆ ಕಟ್ಟು ನಿಟ್ಟಿನ ಆದೇಶ!
ಎಲ್ಲಾದರೂ ರಸ್ತೆ ಕುಸಿದು ಗುಂಡಿ ಬಿದ್ದರೆ ಅದಕ್ಕೆ ನೇರವಾಗಿ ಪಾಲಿಕೆ ಎಂಜಿನಿಯರ್ಗಳೇ ಹೊಣೆ. ಅಲ್ಲದೆ ಅದರ ದುರಸ್ತಿಗೆ ತಗುಲುವ ಸಂಪೂರ್ಣ ವೆಚ್ಚ ಎಂಜಿನಿಯರ್ಗಳ ಸಂಬಳದಿಂದಲೇ ವಸೂಲಿ ಮಾಡಲಾಗುತ್ತೆ ಅಂತ ಬಿಬಿಎಂಪಿ ಸುತ್ತೋಲೆ ಹೊರಡಿಸಿದೆ. ಇದು ಎಂಜಿನಿಯರ್ಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಇದನ್ನೂ ಓದಿ: Aero India 2023: ಏಷ್ಯಾದ ಅತಿದೊಡ್ಡ ಏರ್ ಶೋ; ಏರೋ ಇಂಡಿಯಾಗೆ 1.40 ಕೋಟಿ ರೂಪಾಯಿ ವೆಚ್ಚದಲ್ಲಿ ಬಿಬಿಎಂಪಿ ಸಿದ್ಧತೆ
ಬಿಡಬ್ಲ್ಯೂಎಸ್ಎಸ್ಬಿ, ಬೆಸ್ಕಾಂ, ಕೆಪಿಟಿಸಿಎಲ್ ಏನಾದರೂ ಇದ್ರೆ, ರಸ್ತೆಯನ್ನು ಕಟ್ ಮಾಡಿ ಪೂರ್ಣ ರಸ್ತೆಯನ್ನು ಅವರೇ ಸರಿ ಮಾಡಬೇಕು. ಹೀಗಾದರೆ ಮಾತ್ರ ಅನುಮತಿ ಕೊಡುತ್ತೇವೆ ಎಂದು ಬಿಬಿಎಂಪಿ ಚೀಫ್ ಕಮಿಷನರ್ ತುಷಾರ್ ಗಿರಿನಾಥ್ ಮಾಹಿತಿ ನೀಡಿದ್ದಾರೆ.
ಎಂಜಿನಿಯರ್ಗಳಿಗೆ ಕಸಿವಿಸಿ ಉಂಟು ಮಾಡಿದ ಪಾಲಿಕೆ ಆದೇಶ
ರಸ್ತೆ ಡಾಂಬರೀಕರಣ ಕುಸಿತ ಕಂಡರೂ ಎಇಇ, ಎಇ, ಸಿಇ ಗಳೇ ಹೊಣೆ ಎಂದು ಚುನಾವಣೆ ಹೊಸ್ತಿಲಲ್ಲೇ ಆದೇಶ ಆಗಿರುವುದು ತಳಮಟ್ಟದ ಎಂಜಿನಿಯರ್ಗಳಿಗೆ ಕಸಿವಿಸಿ ಉಂಟು ಮಾಡಿದೆ. ಮುಂದಿನ ಆದೇಶದ ತನಕ ಬಿಡಬ್ಲ್ಯೂಎಸ್ಎಸ್ಬಿ, ಬೆಸ್ಕಾಂ ಸೇರಿದಂತೆ ಯಾರಿಗೂ ಅನುಮತಿ ಕೊಡದಂತೆ ತಾಕೀತು ಮಾಡಲಾಗಿದೆ.
ಇದನ್ನೂ ಓದಿ: VV Puram Food Street: ಬೆಂಗಳೂರಿನ ವಿ ವಿ ಪುರಂ ಫುಡ್ ಸ್ಟ್ರೀಟ್ಗೆ ಹೊಸ ಲುಕ್! ಹೈಟೆಕ್ ಟಚ್ ಕೊಡಲು ಬಿಬಿಎಂಪಿ ಪ್ಲಾನ್
ರಸ್ತೆ ಅಗೆಯಲು ಅನುಮತಿ ಕೊಟ್ಟಿಲ್ಲ ಎಂದರೆ ಮತ್ತೊಂದು ರೀತಿ ಸಮಸ್ಯೆ
ಚುನಾವಣೆ ಸಮಸ್ಯೆಯದಲ್ಲಿ ರಸ್ತೆ ಗುಂಡಿ ಅವಾಂತರ ಹಿನ್ನಡೆ ಉಂಟು ಮಾಡುತ್ತೆ ಅನ್ನುವ ಕಾರಣಕ್ಕೆ ಈ ಆದೇಶ ಮಾಡಲಾಗಿದೆ. ಆದರೆ ಬಿಡಬ್ಲ್ಯೂಎಸ್ಎಸ್ಬಿ, ಬೆಸ್ಕಾಂ ಸಮಸ್ಯೆ ಆದಾಗ ಎಂಜಿನಿಯರ್ಗಳು ರಸ್ತೆ ಅಗೆಯಲು ಅನುಮತಿ ಕೊಟ್ಟಿಲ್ಲ ಅಂದರೂ ಮತ್ತೊಂದು ರೀತಿಯ ಸಮಸ್ಯೆ ಆಗುತ್ತೆ. ಹೀಗಾಗಿ ಅನುಮತಿ ಕೊಟ್ಟ ಬಳಿಕ ಸ್ಪಾಟ್ನಲ್ಲೇ ಇದ್ದು ಕಾಮಗಾರಿ ಪೂರ್ಣ ಮಾಡುವ ಜವಾಬ್ದಾರಿ ಕೊಟ್ಟಿದ್ದರೆ ಸರಿಯಾಗಿರುತ್ತಿತ್ತು. ಈ ಬಗ್ಗೆ ಅಧಿಕಾರಿಗಳು ಚಿಂತಿಸಬೇಕಿದೆ.
ರಾಷ್ಟ್ರಪತಿ ಭವನದ (Rashtrapati Bhavan) ಎದುರಿನ ಮೊಘಲ್ ಉದ್ಯಾನವನ್ನ (Mughal Gardens) ಅಮೃತ್ ಉದ್ಯಾನ್ (Amrit Udyan) ಅಂತ ಮರು ನಾಮಕರಣ ಮಾಡಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉದ್ಯಾನವನ ಉದ್ಘಾಟಿಸಲಿದ್ದಾರೆ. ಜನವರಿ 31 ರಿಂದ ಮಾರ್ಚ್ 26 ರವರೆಗೆ ಎರಡು ತಿಂಗಳ ಕಾಲ ಸಾರ್ವಜನಿಕರಿಗೆ ತೆರೆದಿರಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ