ಬೆಂಗಳೂರು (ಫೆ. 5): ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು ಮತ್ತು ನಾಳೆ (ಫೆ. 6) ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಟಿ.ಕೆ ಹಳ್ಳಿಯ ಪೈಪ್ಲೈನ್ನಲ್ಲಿ ಸೋರಿಕೆ ಉಂಟಾಗಿರುವುದರಿಂದ ಇಂದು ಬೆಳಗ್ಗೆ 9 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಹಲವೆಡೆ ನೀರು ಸರಬರಾಜು ಇರುವುದಿಲ್ಲ. ಹಾಗಿದ್ದರೆ ಯಾವೆಲ್ಲ ಏರಿಯಾಗಳಲ್ಲಿ ಇಂದು ಕಾವೇರಿ ನೀರಿನ ಸರಬರಾಜು ಇರುವುದಿಲ್ಲ ಎಂಬ ಬಗ್ಗೆ ಇಲ್ಲಿದೆ ಮಾಹಿತಿ...
ಬೆಂಗಳೂರಿನ ಆರ್.ಆರ್ ನಗರ, ನಂದಿನಿ ಲೇಔಟ್, ರಾಜಾಜಿನಗರ, ನಾಗರಬಾವಿ, ಯಲಹಂಕ, ಬ್ಯಾಟರಾಯನಪುರ, ಹೆಚ್ಆರ್ಬಿಆರ್ ಲೇಔಟ್, ದಾಸರಹಳ್ಳಿ, ಚಂದ್ರಾ ಲೇಔಟ್, ಕೆಂಗೇರಿ, ಬಾಣಸವಾಡಿ, ಅಂಜನಾಪುರ, ಜಂಬು ಸವಾರಿ ದಿಣ್ಣೆ, ಕುತ್ತನೂರು ದಿಣ್ಣೆ, ಕೋಡಿಚಿಕ್ಕನಹಳ್ಳಿ, ಬೊಮ್ಮನಹಳ್ಳಿ, ಕೂಡ್ಲು, ಹೊಂಗಸಂದ್ರ, ಮಂಗಮ್ಮನಪಾಳ್ಯ, ಮಾರತ್ತಹಳ್ಳಿ, ಹೂಡಿ, ನಾರಾಯಣಪುರ, ಕೆ.ಆರ್ ಪುರಂ, ರಾಮಮೂರ್ತಿ ನಗರ, ವೈಟ್ಫೀಲ್ಡ್, ಸಿ.ವಿ ರಾಮನಗ ನಗರ, ಹಳೇ ಏರ್ಪೋರ್ಟ್ ರಸ್ತೆ, ರಾಮಯ್ಯ ಲೇಔಟ್ ಸುತ್ತಮುತ್ತ ಇಂದು ನೀರಿನ ಸರಬರಾಜು ಇರುವುದಿಲ್ಲ.
ಗುರುವಾರ ರಾತ್ರಿಯಿಂದಲೇ ಈ ಏರಿಯಾಗಳಲ್ಲಿ ಬಹುತೇಕ ಕಡೆ ಕಾಮಗಾರಿ ಆರಂಭವಾಗಿದೆ. ಹೀಗಾಗಿ, ಇಂದು ರಾತ್ರಿ 8 ಗಂಟೆಯವರೆಗೆ ನೀರು ಸಪ್ಲೈ ಇರುವುದಿಲ್ಲ. ನೀರಿನ ಪೈಪ್ಲೈನ್ನಲ್ಲಿ ಸೋರಿಕೆ ಇರುವುದರಿಂದ ಕಾಮಗಾರಿ ನಡೆಯುತ್ತಿದೆ. ಶನಿವಾರ ಸಂಜೆಯೊಳಗೆ ಕಾಮಗಾರಿ ಮುಗಿಯಲಿದೆ ಎಂದು ಜಲಮಂಡಳಿ ತಿಳಿಸಿದೆ.
ನಾಳೆಯೂ ನೀರು ವ್ಯತ್ಯಯ:
ಇದರ ಜೊತೆ, ಶನಿವಾರವೂ ಬೆಂಗಳೂರಿನ ಹಲವೆಡೆ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಕೋರಮಂಗಲ, ಎಂಜಿ ರಸ್ತೆ, ಜಯನಗರ, ಆಡುಗೋಡಿ, ಹಲಸೂರಿನ ಸುತ್ತಮುತ್ತ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಶನಿವಾರ ಬೆಳಗ್ಗೆ 8 ರಿಂದ ಸಂಜೆ 6ರವರೆಗೆ ನೀರಿನ ಸರಬರಾಜು ಇರುವುದಿಲ್ಲ. ಪಂಪಿಂಗ್ ಸ್ಟೇಷನ್ ಉನ್ನತೀಕರಿಸುತ್ತಿರುವ ಕಾರಣ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಇದನ್ನೂ ಓದಿ: Petrol Price: ಪೆಟ್ರೋಲ್-ಡೀಸೆಲ್ ಬೆಲೆ ಮತ್ತೆ ಏರಿಕೆ; ಪ್ರಮುಖ ನಗರಗಳಲ್ಲಿ ಇಂದಿನ ಬೆಲೆಯೆಷ್ಟು?
ಇದರ ಜೊತೆಗೆ, ಜಯನಗರ, ತಿಲಕ್ ನಗರ, ಎಸ್ಆರ್ ನಗರ, ಆಡುಗೋಡಿ, ನೇತಾಜಿನಗರ, ಕೆಪಿ ಅಗ್ರಹಾರ, ನ್ಯೂ ಬಿನ್ನಿ ಲೇಔಟ್, ರಾಘವೇಂದ್ರ ಕಾಲೋನಿ, ಟಿಪ್ಪು ನಗರ, ಚಾಮರಾಜಪೇಟೆ, ರಾಮಚಂದ್ರ ಅಗ್ರಹಾರ, ಆದರ್ಶ ನಗರ, ಪಾದರಾಯನಪುರ, ಅಂಜನಪ್ಪ ಗಾರ್ಡನ್, ಶ್ರೀನಿವಾಸನಗರ, ಬ್ಯಾಂಕ್ ಕಾಲೋನಿ, ಐಟಿಐ ಲೇಔಟ್, ಗುರುರಾಜ ಲೇಔಟ್, ವಿವೇಕಾನಂದ ನಗರ, ಕತ್ರಿಗುಪ್ಪೆ, ತ್ಯಾಗರಾಜನಗರ, ಬಸವನಗುಡಿ, ಶಾಸ್ತ್ರಿನಗರ, ಎನ್ಆರ್ ಕಾಲೋನಿ, ಮೌಂಟ್ ಜಾಯ್ ಎಕ್ಸ್ಟೆನ್ಷನ್, ಕುಮಾರಸ್ವಾಮಿ ಲೇಔಟ್, ಇಸ್ರೋ ಲೇಔಟ್, ವಿಠ್ಠಲನಗರ, ಶಾಂತಲಾ ನಗರ, ಅಂಬೇಡ್ಕರ್ ನಗರ, ನೀಲಸಂದ್ರ, ಆಸ್ಟಿನ್ ಟೌನ್, ಈಜಿಪುರ, ವಿವೇಕನಗರ, ಅಶೋಕ್ ನಗರ, ರಿಚ್ಮಂಡ್ ಟೌನ್, ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಎಚ್ಎಎಲ್ ಎರಡನೇ ಹಂತ, ಕೋಡಿಹಳ್ಳಿ, ಹಲಸೂರು, ಜೋಗುಪಾಳ್ಯ, ರಾಜೇಂದ್ರನಗರ, ನಂಜಪ್ಪ ರೆಡ್ಡಿ ಲೇಔಟ್ನಲ್ಲಿ ನಾಳೆ ನೀರಿನ ಸರಬರಾಜು ಇರುವುದಿಲ್ಲ.
ಶನಿವಾರ ಕೋರಮಂಗಲ ಸುತ್ತಮುತ್ತಲ ಪ್ರದೇಶ, ವೆಂಕಟೇಶ್ವರ ಲೇಔಟ್, ಕಾವೇರಿ ಲೇಔಟ್, ಜೋಗಿ ಕಾಲೋನಿ, ದೊಮ್ಮಲೂರು, ಬೃಂದಾವನನಗರ, ಮಾರುತಿ ನಗರ, ಎಕೆ ಕಾಲೋನಿ, ನೇತ್ರಾವತಿ 1 ರಿಂದ 10 ನೇ ಬ್ಲಾಕ್, ನಂಜಪ್ಪರೆಡ್ಡಿ ಲೇಔಟ್, ಭೋವಿ ಕಾಲೋನಿ ಸುತ್ತಮುತ್ತ ನೀರು ಸರಬರಾಜು ಇರುವುದಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ