• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಬೆಂಗಳೂರು ಏರ್​​​ಪೋರ್ಟ್​​​ನಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಲು ಕಲಾವಿದರಿಗೊಂದು ಸುವರ್ಣಾವಕಾಶ

ಬೆಂಗಳೂರು ಏರ್​​​ಪೋರ್ಟ್​​​ನಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಲು ಕಲಾವಿದರಿಗೊಂದು ಸುವರ್ಣಾವಕಾಶ

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ

ವಿಮಾನ ನಿಲ್ದಾಣದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಕಲಾವಿದರಿಗೆ ಇದು ಅದ್ಭುತವಾದ ಅವಕಾಶವಾಗಿದೆ. ಕಲಾ ವಸ್ತು ಮತ್ತು ಕಲಾವಿದರಿಬ್ಬರೂ ಹೆಚ್ಚಿನ ಸಂಖ್ಯೆಯ ಜನರ ಕಣ್ಣಿಗೆ ಕಾಣುವಂತೆ ಮಾಡುವ ಅದ್ಭುತ ಸಾಧ್ಯತೆಯನ್ನು ಇದು ನೀಡುತ್ತದೆ ಎಂದು ಬಿ.ಐ.ಎ.ಎಲ್.ನ ವಕ್ತಾರರು ಹೇಳಿದ್ದಾರೆ.

ಮುಂದೆ ಓದಿ ...
  • Share this:

ಬೆಂಗಳೂರು(ಸೆ.05): ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡನೇ ಟರ್ಮಿನಲ್(ಟಿ2)ನಲ್ಲಿ ಕಲಾ ಯೋಜನೆಗಾಗಿ ವರ್ಣಚಿತ್ರ ಕಲಾವಿದರು ಮತ್ತು ಕಲಾ ಸಮೂಹಗಳು ಪ್ರಸ್ತಾವನೆಯನ್ನು ಸಲ್ಲಿಸಲು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಬಿ.ಐ.ಎ.ಎಲ್.)ದಿಂದ ಅರ್ಜಿ ಆಹ್ವಾನಿಸಲಾಗಿದೆ. ಬೆಂಗಳೂರು ವಿಮಾನ ನಿಲ್ದಾಣದ 2ನೇ ಟರ್ಮಿನಲ್ ಕರ್ನಾಟಕದ ಸಮೃದ್ಧ ಪರಂಪರೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವುದಲ್ಲದೆ, ಭರತನ ನಾಟ್ಯಶಾಸ್ತ್ರದಲ್ಲಿ ಎತ್ತಿ ತೋರಲಾಗಿರುವ 9 ಭಾವನೆಗಳಾದ ನವರಸಗಳನ್ನು ಈ ಯೋಜನೆ ಪ್ರಮುಖವಾಗಿ ಪ್ರದರ್ಶಿಸಲಿದೆ. ಟರ್ಮಿನಲ್2ನಲ್ಲಿನ ನಿರ್ದಿಷ್ಟ ಸ್ಥಳಗಳಿಗಾಗಿ ಪ್ರಸ್ತಾವನೆಗಳನ್ನು ಆಹ್ವಾನಿಸಲಾಗುತ್ತಿದ್ದು, ಈ ಕಲಾವಸ್ತುಗಳು ಸ್ವಂತದ್ದಾಗಿದ್ದು, ಯಾವುದೇ ಈ ಹಿಂದಿನ ಕಲಾವಸ್ತುವಿನ ನಕಲು ಆಗಿರಬಾರದು. ಪ್ರಸ್ತಾವನೆಗಳನ್ನು ಸ್ವತಂತ್ರ ಸಲಹಾ ಸಮಿತಿ ಮತ್ತು ಬಿ.ಐ.ಎ.ಎಲ್.ನ ಪಾಲುದಾರರು ಮೌಲ್ಯೀಕರಿಸಲಿದ್ದಾರೆ.


Kallathigiri Falls : ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ ಚಿಕ್ಕಮಗಳೂರಿನ ಕಲ್ಲತ್ತಿಗಿರಿ ಜಲಪಾತ


ಹೆಚ್ಚಿನ ಮಾಹಿತಿಗೆ :https://www.bengaluruairport.com/corporate/media/news-press-releases/bial-invites-artists-to-submit-proposals-for-t2-art-programme.html  ಈ ವೆಬ್​ಸೈಟ್​​ಗೆ ಭೇಟಿ ನೀಡಬಹುದಾಗಿದೆ.


ನೂತನ ಭಾರತಕ್ಕೆ ಪ್ರವೇಶ ದ್ವಾರವಾಗಿರುವ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮ್ಮ ಪ್ರಯಾಣಿಕರಿಗೆ ನಮ್ಮ ರಾಜ್ಯ ಮತ್ತು ದೇಶದ ನೈಜ ಅನುಭವವನ್ನು ನೀಡುವುದು ನಮ್ಮ ಗುರಿಯಾಗಿದೆ. ಸಾಮಾನ್ಯ ರೀತಿಯಲ್ಲಿ ವಿಮಾನ ಹತ್ತುವ ಪ್ರಕ್ರಿಯೆಯಲ್ಲಿ ಕೊಂಚ ಅಚ್ಚರಿಯನ್ನು ಪೂರೈಸುವುದಲ್ಲದೆ, ನಮ್ಮ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಕರು ಸಾಗುವಾಗ ಅವರಲ್ಲಿ ಆನಂದವನ್ನು ಸೃಷ್ಟಿಸುವ ಅಚ್ಚರಿಯ ಸಾಮರ್ಥ್ಯವನ್ನು ಕಲೆ ಹೊಂದಿರುತ್ತದೆ. ವಿಮಾನ ನಿಲ್ದಾಣದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಕಲಾವಿದರಿಗೆ ಇದು ಅದ್ಭುತವಾದ ಅವಕಾಶವಾಗಿದೆ. ಕಲಾ ವಸ್ತು ಮತ್ತು ಕಲಾವಿದರಿಬ್ಬರೂ ಹೆಚ್ಚಿನ ಸಂಖ್ಯೆಯ ಜನರ ಕಣ್ಣಿಗೆ ಕಾಣುವಂತೆ ಮಾಡುವ ಅದ್ಭುತ ಸಾಧ್ಯತೆಯನ್ನು ಇದು ನೀಡುತ್ತದೆ ಎಂದು ಬಿ.ಐ.ಎ.ಎಲ್.ನ ವಕ್ತಾರರು ಹೇಳಿದ್ದಾರೆ.


ಬಿ.ಐ.ಎ.ಎಲ್.ನ ಕಲಾ ಯೋಜನೆ ಕುರಿತು , ಬಿ.ಐ.ಎ.ಎಲ್.ನ ಕಲಾ ಯೋಜನೆ ಖಾಯಂ ಪ್ರದರ್ಶನಗಳನ್ನು ಮಾತ್ರವಲ್ಲದೇ ಪರಿಭ್ರಮಿಸುವ ಪ್ರದರ್ಶನಗಳನ್ನು ಕೂಡ ಒಳಗೊಂಡಿರುತ್ತದೆ. ಇವೆಲ್ಲವೂ ಒಂದಾಗಿ ಟರ್ಮಿನಲ್ 2ನ ಸೌಂದರ್ಯವನ್ನು ವಿಸ್ತರಿಸಲಿವೆ. ಬೆಂಗಳೂರಿನ ಸಂಸ್ಕೃತಿ ಮತ್ತು ಅದನ್ನು ಅನನ್ಯವಾಗಿಸುವ ಜನರ ಕುರಿತು ಕಥೆಗಳನ್ನು ಹಂಚಿಕೊಳ್ಳುವುದಕ್ಕೆ ಅರ್ಥಪೂರ್ಣ ಅನುಭವವನ್ನು ಇವು ಸೃಷ್ಟಿಸಲಿವೆ. ಈ ಕಲಾ ಯೋಜನೆ ಟರ್ಮಿನಲ್‍ನಲ್ಲಿ ಮನಸ್ಸನ್ನು ಹಗುರಗೊಳಿಸುವ ಕ್ಷಣಗಳನ್ನು ಸೃಷ್ಟಿಸುವುದಲ್ಲದೇ, ಕರ್ನಾಟಕದ ಜನರಲ್ಲಿ ಹೆಮ್ಮೆಯ ಭಾವನೆ ಮೂಡಿಸಲಿದೆ. ಕಲೆಯ ಮೂಲಕ ಪ್ರಯಾಣವನ್ನು ನೆನಪಿನಲ್ಲಿಡುವಂತಹ ಅನುಭವವನ್ನಾಗಿಸುವ ಗುರಿಯನ್ನು ಬಿ.ಐ.ಎ.ಎಲ್.ನ ಕಲಾ ಯೋಜನೆ ಹೊಂದಿದ್ದು ಅತ್ಯದ್ಭುತ, ಅವಿಸ್ಮರಣೀಯ ಕರ್ನಾಟಕದ ಇತಿಹಾಸವನ್ನ ದೇಶ ವಿದೇಶಗಳ ಜನರಿಗೆ ಪರಿಚಯಿಸುವುದರಿಂದ ಮತ್ತಷ್ಟು ಕರುನಾಡ ಹಿರಿಮೆ ಬೆಳಗಲಿದೆ ಎಂದು ನ್ಯೂಸ್18 ಜೊತೆ ಸಂತಸ ಹಂಚಿಕೊಂಡಿದ್ದಾರೆ.

Published by:Latha CG
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು