• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಅಂತರರಾಜ್ಯ ಬೈಕ್ ಕಳ್ಳನ ಬಂಧಿಸುವಲ್ಲಿ ಅಥಣಿ ಪೋಲಿಸರು ಯಶಸ್ವಿ; ಆರೋಪಿಯಿಂದ 15 ವಾಹನಗಳ ಜಪ್ತಿ

ಅಂತರರಾಜ್ಯ ಬೈಕ್ ಕಳ್ಳನ ಬಂಧಿಸುವಲ್ಲಿ ಅಥಣಿ ಪೋಲಿಸರು ಯಶಸ್ವಿ; ಆರೋಪಿಯಿಂದ 15 ವಾಹನಗಳ ಜಪ್ತಿ

ಬಂಧಿತ ಆರೋಪಿ

ಬಂಧಿತ ಆರೋಪಿ

ಆರೋಪಿ ರಮಜಾನ್ ಹುಸೇನ್ ಐನಾಪೂರೆ ಕಳೆದ ಮೂರು ವರ್ಷಗಳಿಂದಲೂ ಬೈಕ್​ ಗಳನ್ನ ಕಳ್ಳತನ ಮಾಡುತ್ತಲೇ ಬಂದಿದ್ದ. ಕಳ್ಳತನ ಮಾಡಿದ ಬೈಕ್ ಗಳನ್ನ ಅಥಣಿ ಕಾಗವಾಡ ಭಾಗದಲ್ಲಿ ಗ್ರಾಮೀಣ ಭಾಗದ ಜನರಿಗೆ ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

  • Share this:

ಚಿಕ್ಕೋಡಿ(ಸೆ.04): ಅಂತರರಾಜ್ಯ ಬೈಕ್​ ಕಳ್ಳನನ್ನು ಬಂಧಿಸುವಲ್ಲಿ ಬೆಳಗಾವಿ ಜಿಲ್ಲೆಯ ಅಥಣಿ ಪೋಲಿಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯಿಂದ ಸುಮಾರು 15 ಬೈಕ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಅಥಣಿ ಹಾಗೂ ಕಾಗವಾಡ ತಾಲೂಕಿನಲ್ಲಿ ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚಿದ್ದವು. ದಾಖಲೆ ಇಲ್ಲದ ಬೈಕ್​​ ಸವಾರನೊಬ್ಬನ ವಿಚಾರಣೆ ಮಾಡಿದ ವೇಳೆ ಕಡಿಮೆ ಹಣಕ್ಕೆ ಬೈಕ್ ಖರೀದಿ ಮಾಡಿರುವುದಾಗಿ ಹೇಳಿದ್ದ. ಈ ಮೂಲವನ್ನು ಹುಡುಕುತ್ತಾ ಹೊರಟ ಅಥಣಿ ಪೋಲಿಸರಿಗೆ ಬೆಳಗಾವಿ, ಬಾಗಲಕೋಟೆ ಮತ್ತು ಮಹಾರಾಷ್ಟ್ರದ ವಿವಿಧ ಪೋಲಿಸ್ ಠಾಣೆಗಳ ವ್ಯಾಪ್ತಿಯಲ್ಲಿ ಬೈಕ್ ಗಳನ್ನು ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಆರೋಪಿಯ ಸುಳಿವು ಸಿಕ್ಕಿತ್ತು.


ಶಿರಹಟ್ಟಿ ಗ್ರಾಮದ ಆರೋಪಿ ರಮಜಾನ್ ಹುಸೇನಸಾಬ್ ಐನಾಪೂರೆ ಈಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಕಳೆದ ಎರಡು ಮೂರು ವರ್ಷಗಳಿಂದ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಬೈಕ್​ಗಳನ್ನು ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಈತನ ಬಳಿ ಇದ್ದ ಹದಿನೈದು ಬೈಕಗಳನ್ನು ಪೋಲಿಸರು ವಶಪಡಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ  ಹಾಜರುಪಡಿಸಿದ್ದಾರೆ.


Coronavirus India Updates: ಗುರುವಾರ ದೇಶದಲ್ಲಿ 83,341 ಕೊರೋನಾ ಕೇಸು ಪತ್ತೆ; 39 ಲಕ್ಷ ದಾಟಿದ ಸೋಂಕಿತರ ಸಂಖ್ಯೆ


ಆರೋಪಿ ರಮಜಾನ್ ಹುಸೇನ್ ಐನಾಪೂರೆ ಕಳೆದ ಮೂರು ವರ್ಷಗಳಿಂದಲೂ ಬೈಕ್​ ಗಳನ್ನ ಕಳ್ಳತನ ಮಾಡುತ್ತಲೇ ಬಂದಿದ್ದ. ಕಳ್ಳತನ ಮಾಡಿದ ಬೈಕ್ ಗಳನ್ನ ಅಥಣಿ ಕಾಗವಾಡ ಭಾಗದಲ್ಲಿ ಗ್ರಾಮೀಣ ಭಾಗದ ಜನರಿಗೆ ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಕಳ್ಳತನ ಮಾಡಿದ ಬೈಕ್​ಗಳನ್ನು  ಕಡಿಮೆ ದರದಲ್ಲಿ ಮಾರಾಟ ಮಾಡಿ  ಹತ್ತು-ಹದಿನೈದು ದಿನಗಳಲ್ಲಿ ಅವುಗಳ ದಾಖಲೆ ನೀಡುವದಾಗಿ ಹೇಳಿ ವಂಚಿಸುತ್ತಿದ್ದ ಎನ್ನಲಾಗಿದೆ.


ಕಳೆದ ಕೆಲ ದಿನಗಳಿಂದ ಕಾಗವಾಡ ಹಾಗೂ ಅಥಣಿ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚಿದ ಹಿನ್ನಲೆಯಲ್ಲಿ, ಅಪರಾಧ ವಿಭಾಗದ ಪಿಎಸ್ಐ ಎಮ್ ಡಿ ಘೋರಿ ಅವರ ನೇತೃತ್ವದಲ್ಲಿ ಎಎಸ್ಐ ವ್ಹಿ ಜಿ ಆರೇರ್, ಸಿಬ್ಬಂದಿಗಳಾದ ಎ ಎ ಈರಕರ,ಪಿ ಬಿ ನಾಯಕ,ಎಮ್ ಬಿ ದೊಡಮನಿ,ಬಿ ಜೆ ತಳವಾರ,ಎಸ್ ಕೆ ನೇಮಗೌಡ ಇವರ ತಂಡವನ್ನು ರಚಿಸಲಾಗಿತ್ತು. ಸತತ ಕಾರ್ಯಾಚರಣೆಯ ನಂತರ ಆರೋಪಿಯನ್ನು ಪತ್ತೆ ಹಚ್ಚಿ ಅಂದಾಜು 5 ಲಕ್ಷ ಮೌಲ್ಯದ ಹದಿನೈದು ಬೈಕಗಳನ್ನು ಜಪ್ತಿ, ಮಾಡಿ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಇನ್ನು ಸಿಬ್ಬಂದಿಗಳ ತಂಡದ ಕಾರ್ಯಾಚರಣೆ ಬೆಳಗಾವಿ ಪೋಲಿಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ, ಹಾಗೂ ಹೆಚ್ಚುವರಿ ಅಧೀಕ್ಷಕ ಅಮರನಾಥ ರೆಡ್ಡಿ ಮೆಚ್ಚುಗೆ ವ್ಯಕ್ತ ಪಡಿಸಿ ಕಾರ್ಯಾಚರಣೆಯಲ್ಲಿ ಭಾಗಿಯಾದ ಸಿಬ್ಬಂದಿಗಳಿಗೆ ಬಹುಮಾನ ಘೋಷಣೆ ಮಾಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಜನರನ್ನ ಮೋಸ ಮಾಡಿ ಬೈಕ್ ಗಳನ್ನ ಮಾರಾಟ ಮಾಡುವ ಪ್ರಕರಣಗಳು ಹೆಚ್ಚುತ್ತಿವೆ. ಹೀಗೆ ಸಿಕ್ಕಿ ಹಾಕಿಕೊಂಡಾಗ ಬೈಕ್ ಖರೀದಿಸಿದವರು ಕಷ್ಟ ಅನುಭವಿಸಿ ಬೈಕ್ ಮತ್ತು ಹಣ ಎರಡನ್ನೂ ಕಳೆದುಕೊಳ್ಳಬೇಕಾಗುತ್ತದೆ. ಗ್ರಾಮೀಣ ಭಾಗದ ಜನ ವಾಹನ ಖರೀದಿಸುವ ಮುನ್ನ ದಾಖಲಾತಿಗಳನ್ನ ಪರಿಶೀಲಿಸಿ, ಬಳಿಕವಷ್ಟೇ ವಾಹನ ಖರೀದಿಸುವಂತೆ ಎಸ್.ಪಿ. ಲಕ್ಷ್ಮಣ ನಿಂಬರಗಿ ಸಲಹೆ ನೀಡಿದ್ದಾರೆ‌.

Published by:Latha CG
First published: