Amit Shah: ಬಿಜೆಪಿಗೆ ನಿರಂತರ ಬೆಂಬಲ ನೀಡುತ್ತಿರುವ ಕರ್ನಾಟಕಕ್ಕೆ ಧನ್ಯವಾದ; ಅಮಿತ್ ಶಾ
Sira, RR Nagar by Election Result 2020: ಉಪಚುನಾವಣೆಯಲ್ಲಿನ ಅಭೂತಪೂರ್ವ ಗೆಲುವಿಗಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ನಳೀನ್ ಕುಮಾರ್ ಕಟೀಲ್ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಅಭಿನಂದಿಸಿದ್ದಾರೆ

ಅಮಿತ್ ಶಾ
- News18 Kannada
- Last Updated: November 10, 2020, 9:42 PM IST
ಬಿಜೆಪಿಗೆ ನಿರಂತರ ಬೆಂಬಲ ನೀಡುತ್ತಿರುವ ಕರ್ನಾಟಕಕ್ಕೆ ಧನ್ಯವಾದಗಳು.
ಉಪಚುನಾವಣೆಯಲ್ಲಿನ ಅಭೂತಪೂರ್ವ ಗೆಲುವಿಗಾಗಿ ಮುಖ್ಯಮಂತ್ರಿ @BSYBJP ಜೀ, ಶ್ರೀ @nalinkateel & @BJP4Karnataka ಕಾರ್ಯಕರ್ತರನ್ನು ಅಭಿನಂದಿಸುತ್ತೇನೆ.
ಪ್ರಧಾನಿ ಶ್ರೀ @narendramodi ಅವರ ಮಾರ್ಗದರ್ಶನದಡಿ ರಾಜ್ಯವು ಅಭಿವೃದ್ಧಿ ಸಾಧಿಸಲಿದೆ.
— Amit Shah (@AmitShah) November 10, 2020
ರಾಜ್ಯದಲ್ಲಿ ಬಿಜೆಪಿ ಒಂದಾದರ ಮೇಲೆ ಒಂದು ಉಪಚುನಾವಣೆಗಳಲ್ಲಿ ಜಯ ಸಾಧಿಸುತ್ತಿದ್ದು, ನರೇಂದ್ರ ಅವರ ಮಾರ್ಗದರ್ಶನದಡಿ ರಾಜ್ಯವು ಅಭಿವೃದ್ಧಿ ಸಾಧಿಸಲಿದೆ ಎಂದು ತಿಳಿಸಿದ್ದಾರೆ.
ರಾಜರಾಜೇಶ್ವರಿ ನಗರದಲ್ಲಿ ಸ್ನೇಹಿತ @MunirathnaMLA ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ... ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಪರ ಪ್ರಚಾರದ ನೇತೃತ್ವ ವಹಿಸಿದ್ದು ನನಗೆ ಖುಷಿ ತಂದಿದೆ. ಜನ ನಮ್ಮ ಆಡಳಿತವನ್ನು ಮೆಚ್ಚಿದ್ದಾರೆ. ಮುನಿರತ್ನ ಅವರಿಗೆ ಅಭಿನಂದನೆಗಳು... pic.twitter.com/IYaM4ap2Wg
— R. Ashoka (ಆರ್. ಅಶೋಕ) (@RAshokaBJP) November 10, 2020
I congratulate @BJP4Karnataka Karyakartas for the huge victory in Rajarajeshwarinagara & Sira by-elections.
Deepavali has been ushered in earlier with this remarkable performance.
It is time for us to celebrate by distributing sweets & bursting Crackers.#KarnatakaWithBJP
— C T Ravi 🇮🇳 ಸಿ ಟಿ ರವಿ (@CTRavi_BJP) November 10, 2020
ಆರ್ಆರ್ನಗರ ಹಾಗೂ ಶಿರಾದಲ್ಲಿ ಗೆಲುವು ದಾಖಲಿಸುತ್ತಿದ್ದಂತೆ ಕಾರ್ಯಕರ್ತರಲ್ಲಿ ಕೂಡ ಹರ್ಷ ವ್ಯಕ್ತವಾಗಿದ್ದು, ಸಂಭ್ರಮ ವ್ಯಕ್ತಪಡಿಸಿದ್ದಾರೆ. ಈ ಗೆಲುವಿಗೆ ಸಂತಸ ವ್ಯಕ್ತಪಡಿಸಿರುವ ಬಿಎಸ್ ಯಡಿಯೂರಪ್ಪ, ಆರ್ ಅಶೋಕ್ ಸೇರಿದಂತೆ ಅನೇಕ ಸಚಿವರು ಸಿಹಿ ಹಂಚಿ ಸಂಭ್ರಮಿಸಿದರು.
ಜನಸೇವೆ ಮಾಡುವ ಪ್ರಾಮಾಣಿಕ ತುಡಿತ, ಸತತ ಪ್ರಯತ್ನ, ಕಾರ್ಯಕರ್ತರ ಬೆಂಬಲ, ಹಿರಿಯ ನಾಯಕರ ಮಾರ್ಗದರ್ಶನಗಳಿದ್ದಲ್ಲಿ ಸಾರ್ವಜನಿಕ ಜೀವನದಲ್ಲಿ ಜನರ ಆಶೀರ್ವಾದ ನಿಶ್ಚಿತ. ಹೀಗೆಯೇ ಇಂದು ಐತಿಹಾಸಿಕ ಜನಾದೇಶ ಪಡೆದು ಶಿರಾ ಉಪಚುನಾವಣೆಯಲ್ಲಿ ಗೆದ್ದ ನಮ್ಮ ಪಕ್ಷದ ಅಭ್ಯರ್ಥಿ ಡಾ.ರಾಜೇಶ್ ಗೌಡರಿಗೆ ಸಿಹಿ ತಿನಿಸಿ ಅಭಿನಂದನೆ ಸಲ್ಲಿಸಲಾಯಿತು. #BJP4Sira pic.twitter.com/NuaZ3f1sAJ
— Vijayendra Yeddyurappa (@BYVijayendra) November 10, 2020
ಶಿರಾ ಉಪಚುನಾವಣಾ ಹೊಣೆ ಹೊತ್ತ ಬಿವೈ ರಾಘವೇಂದ್ರ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಅವರನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಅವರ ಕಾರ್ಯಕ್ಕೆ ಕೂಡ ಮೆಚ್ಚುಗೆ ವ್ಯಕ್ತವಾಗಿದೆ. ಕೆಆರ್ ಪೇಟೆ ಚುನಾವಣೆ ಬಳಿಕ ಶಿರಾದಲ್ಲಿ ಅವರ ಕಾರ್ಯತಂತ್ರ ಫಲಿಸಿದೆ.