ಸ್ಯಾಂಡಲ್ವುಡ್ ರೆಬೆಲ್ ಸ್ಟಾರ್ ಅಂಬರೀಷ್ ಅವರು ಅಗಲಿ ಇಂದಿಗೆ ಎರಡು ವರ್ಷ. ಅಂಬರೀಷ್ ಅವರ ಅಗಲಿಕೆ ಕುಟುಂಬಕ್ಕೆ ಬರಸಿಡಿಲಿನಂತೆ ಬಡಿದಿತ್ತು. ಇಂದು ಅವರ 2ನೇ ವರ್ಷದ ಪುಣ್ಯಸ್ಮರಣೆ. ಬೆಳಗ್ಗೆ 9 ಗಂಟೆಗೆ ಸುಮಲತಾ ತಮ್ಮ ಮಗ ಅಭಿಷೇಕ್ ಅಂಬರೀಷ್ ಅವರೊಂದಿಗೆ ಅಂಬಿ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಇವರ ಜೊತೆಗೆ ದರ್ಶನ್, ಜೈಜಗದೀಶ್, ವಿಜಯ ಲಕ್ಷ್ಮಿ ಸಿಂಗ್ ಹಾಗೂ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಚಿತ್ರರಂಗದ ಹಲವಾರು ಮಂದಿ ಪೂಜೆಯಲ್ಲಿ ಭಾಗಿಯದರು. ಸದ್ಯ ರಾಜಕೀಯದಲ್ಲಿ ಸಕ್ರಿಯವಾಗಿರುವ ಸುಮಲತಾ ಅವರು ಮಂಡ್ಯದ ಸಂಸದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರೀತಿಸಿ ವಿವಾಹವಾಗಿದ್ದ ಬಾಳ ಸಂಗಾತಿಯನ್ನು ಕಳೆದುಕೊಂಡ ಸುಮಲತಾ ಅಂಬಿ ಇಲ್ಲದೆ ಎರಡು ವರ್ಷಗಳನ್ನು ಕಳೆದಿದ್ದಾರೆ. ಅವರ ಪುಣ್ಯಸ್ಮರಣೆಯಂದು ಅಗಲಿದ ಗಂಡನಿಗಾಗಿ ಭಾವುಕರಾಗಿ ಒಂದು ಪತ್ರ ಬರೆದಿದ್ದಾರೆ.
ಅಂಬರೀಷ್ ಇಲ್ಲದ ಆ ಎರಡು ವರ್ಷಗಳನ್ನು ಕಳೆದಿರುವ ಸುಮಲತಾ ಅವರು ತಮ್ಮ ದುಖಃವನ್ನು ಪತ್ರದ ಮೂಲಕ ಹೊರ ಹಾಕಿದ್ದಾರೆ. 'ಪದೇ ಪದೇ ನಿನ್ನ ಮಾತು ಕೇಳಲೆಂದು ಕಿವಿ ಮುಚ್ಚುತ್ತೇನೆ, ನಿನ್ನ ನೋಡಲೆಂದು ಕಣ್ಣು ಮುಚ್ಚುತ್ತೇನೆ. ಆದರೆ ನನ್ನ ಹೃದಯವನ್ನು ಮುಚ್ಚಲು ಸಾಧ್ಯವಿಲ್ಲ. ಈ ಅಗಾದ ಪ್ರೀತಿಯನ್ನು ಹಾಗೂ ನಿನ್ನ ನೆನಪುಗಳನ್ನು ಹಿಡಿದಿಟ್ಟುಕೊಳ್ಳಬೇಕೆಂದಬ ಹಂಬಲ. ಆದರೆ ಈ ಎಲ್ಲವನ್ನೂ ಹಿಡಿದಿಟ್ಟುಕೊಳ್ಳಲು ಯಾವುದೇ ಹೃದಯಕ್ಕೆ ಸಾಧ್ಯವಿಲ್ಲ. ನಾನು ನಿಮ್ಮೊಂದಿಗೆ ಕಳೆದ ಪ್ರತಿ ಕ್ಷಣವನ್ನೂ ಸದಾ ಮೆಲುಕು ಹಾಕುತ್ತೇನೆ. ನಾನು ಪ್ರತಿ ಸಲ ತೆಗೆದುಕೊಳ್ಳುವ ಉಸಿರಿನಲ್ಲೂ ನೀವು ಇರುತ್ತೀರಿ. ನಿಮ್ಮ ಪ್ರೀತಿಯೇ ನನಗೆ ಶಕ್ತಿ ಹಾಗೂ ಧೈರ್ಯ. ನನ್ನ ಜೀವಿದಲ್ಲಿ ಏಳು ಬೀಳು ಕಂಡಾಗ ನನಗೆ ಧೈರ್ಯ ನೀಡುವುದೇ ನಿಮ್ಮ ಪ್ರೀತಿ' ಎಂದು ದೀರ್ಘವಾಗಿ ಮನದಾಳದ ಮಾತುಗಳನ್ನು ಹಚಿಕೊಂಡಿದ್ದಾರೆ ಸುಮಲತಾ.
View this post on Instagram
ನನ್ನ ಪ್ರೀತಿಯ ಸೀನಿಯರ್ ಅಂಬಿ ಅಪ್ಪಾಜಿ ಇಂದಿಗೆ ದೈಹಿಕವಾಗಿ ಅಗಲಿ ೨ ಸಂವತ್ಸರಗಳು ಕಳೆದಿವೆ. ಆದರೆ ನಮ್ಮೆಲರ ಮನಗಳಲ್ಲಿ ಸದಾ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಅವರ ನೇರನುಡಿಯ ವ್ಯಕ್ತಿತ್ವ, ಮಾಡಿರುವ ಸಹೃದಯಿ ಕಾರ್ಯಗಳು ಸದಾ ಕನ್ನಡಿಗರ ಮನಸ್ಸಲ್ಲಿ ಜೀವಂತವಾಗಿರುತ್ತವೆ. pic.twitter.com/GWQxYep3qY
— Darshan Thoogudeepa (@dasadarshan) November 24, 2020
ಇದನ್ನೂ ಓದಿ: Darshan: ಆಕ್ಟ್ 1978 ಚಿತ್ರತಂಡವನ್ನು ಮನೆಗೆ ಕರೆಸಿಕೊಂಡು ಉಪಚರಿಸಿದ ದರ್ಶನ್..!
ನಂತರ ಮಂಡ್ಯಕ್ಕೆ ಹೊರಡಲಿರುವ ಸಂಸದೆ ಸುಮಲತಾ ಅಂಬರೀಶ್, ಮದ್ದೂರಿನ ಹೊಟ್ಟೇಗೌಡನದೊಡ್ಡಿಯಲ್ಲಿ ಅಂಬರೀಶ್ ಅವರ ಕಂಚಿನ ಪುತ್ಥಳಿ ಅನಾವರಣ ಮಾಡಲಿದ್ದಾರೆ. ಇದರಲ್ಲಿ ದರ್ಶನ್ ಸಹ ಭಾಗಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಬಳಿಕ ಅಂಬರೀಶ್ ಅವರ ಹುಟ್ಟೂರಾದ ದೊಡ್ಡರಸಿನಕೆರೆ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ ಸುಮಲತಾ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ