ಬೆಂಗಳೂರು(ಡಿ.25): 'ಎದೆ ಸೀಳಿದರೆ ಒಂದಕ್ಷರ ಇಲ್ಲದವರು. ಪಂಕ್ಚರ್ ಹಾಕುವವರಿಂದ ಗಲಭೆಗಳು ನಡೆಯುತ್ತಿವೆ,' ಎಂಬ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿಕೆಗೆ ದಿವಗಂತ ಕೇಂದ್ರದ ಮಾಜಿ ಸಚಿವ ಅನಂತಕುಮಾರ್ ಮಗಳು ತಪರಾಕಿ ಬಾರಿಸಿದ್ದಾರೆ. ಕಳೆದ ಎರಡು ದಿನಗಳಿಂದ ತೇಜಸ್ವಿ ಸೂರ್ಯ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಯಾರೋ ಟ್ವಿಟ್ಟಿಗರು ತೇಜಸ್ವಿ ಸೂರ್ಯ ಬದಲಿಗೆ ತೇಜಸ್ವಿನಿ ಅನಂತಕುಮಾರ್ ಎಂದು ತಪ್ಪಾಗಿ ಅರ್ಥೈಸಿಕೊಂಡು ಬೈದು ಟ್ವೀಟ್ ಮಾಡಿದ್ದರು. ಈ ವೇಳೆ ಮಧ್ಯಪ್ರವೇಶಿಸಿ ಟ್ವಿಟ್ಟಿಗರ ಟ್ವೀಟ್ಗೆ ಪ್ರತಿಕ್ರಿಸಿದ ಅನಂತಕುಮಾರ್ ಮಗಳು ಐಶ್ವರ್ಯ ಅನಂತಕುಮಾರ್, "ಸಾರ್ ನೀವು ತಪ್ಪಾಗಿ ಅರ್ಥೈಸಿಕೊಂಡಿದ್ದೀರಿ. ಹೀಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು ತೇಜ್ವಸಿ ಸೂರ್ಯ ಹೊರತು ತೇಜಸ್ವಿನಿ ಅನಂತಕುಮಾರ್ ಅವರಲ್ಲ. ತೇಜಸ್ವಿನಿ ಅನಂತಕುಮಾರ್ ಅದಮ್ಯ ಚೇತನ ಸಂಸ್ಥೆ ಮೂಲಕ ಸಾವಿರಾರು ಸರ್ಕಾರಿ ಶಾಲೆ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಪೂರೈಕೆ ಮಾಡುತ್ತಾರೆ. ಬಡವರ ನೋವಿನ ಬಗ್ಗೆ ತೇಜಸ್ವಿನಿ ಅನಂತಕುಮಾರ್ಗೆ ಗೊತ್ತಿದೆ. ಎಂದೂ ಈ ರೀತಿಯ ಹೇಳಿಕೆ ತೇಜಸ್ವಿನಿ ಅನಂತಕುಮಾರ್ ನೀಡುವುದಿಲ್ಲ" ಎನ್ನುವ ಮೂಲಕ ತೇಜ್ವಸಿ ಸೂರ್ಯಗೆ ಪಂಕ್ಚರ್ ಮಾಡಿದ್ದಾರೆ.
Sir you are mistaken - this is @Tej_AnanthKumar and not @Tejasvi_Surya. @Tej_AnanthKumar has been serving more than 1050 government school children across Karnataka for the past 20 years. She knows the pain of the poor as she comes from the same background herself. https://t.co/avTiZA5tVi
— Aishwarya Ananthkumar (@AishTAK) December 24, 2019
ತೇಜಸ್ವಿ ಸೂರ್ಯ @Tejasvi_Surya ಗೆ ಅನಂತಕುಮಾರ್ ಮಗಳಿಂದ "ಪಂಚ್ಟರ್" https://t.co/nih8fs4kEX
— Raksha Ramaiah 🇮🇳 (@RakshaRamaiah) December 25, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ