ಬೆಂಗಳೂರು (ಡಿ. 31): ಸಿನಿಮಾ ನಟರೆಂದರೆ ತೆರೆಯ ಮೇಲೆ ಮಾತ್ರ ಹೀರೋಯಿಸಂ ತೋರಿಸುತ್ತಾರೆ ಎಂದು ನೀವಂದುಕೊಂಡಿದ್ದರೆ ಅದು ತಪ್ಪು. ಸ್ಯಾಂಡಲ್ವುಡ್ ನಟರೊಬ್ಬರು ನಿನ್ನೆ ರಾತ್ರಿ 'ಅವನೇ ಶ್ರೀಮನ್ನಾರಾಯಣ' ಸಿನಿಮಾ ನೋಡಿ ಮನೆಗೆ ಹೋಗುವಾಗ ನಿಜವಾಗಿಯೂ ಹೀರೋಯಿಸಂ ತೋರಿಸಿ ಸಾಹಸ ಮೆರೆದಿದ್ದಾರೆ.
ಚಿನ್ನಾಭರಣಗಳನ್ನು ಕದ್ದ ದರೋಡೆಕೋರರನ್ನು ಪೊಲೀಸ್ ಅಧಿಕಾರಿಯಾಗಿರುವ ನಾಯಕ ಯಾವ ರೀತಿ ಹಿಡಿಯುತ್ತಾನೆ ಎಂಬುದು ಇಂದು ತೆರೆ ಕಾಣಲಿರುವ 'ಅವನೇ ಶ್ರೀಮನ್ನಾರಾಯಣ' ಸಿನಿಮಾದ ಕತೆ. ಗುರುವಾರ ರಾತ್ರಿ ಈ ಸಿನಿಮಾದ ಪ್ರೀಮಿಯರ್ ಶೋ ಇತ್ತು. ಈ ಪ್ರೀಮಿಯರ್ ಶೋ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಸ್ಯಾಂಡಲ್ವುಡ್ ನಟ ರಘು ಭಟ್ ಸಿನಿಮೀಯ ರೀತಿಯಲ್ಲಿ ದರೋಡೆಕೋರರನ್ನು ಹಿಡಿದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ