• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Bengaluru Rains: ಸಿಲಿಕಾನ್ ಸಿಟಿಯಲ್ಲಿ ಭಾರೀ ಮಳೆ ಬೆನ್ನಲ್ಲೇ ರಸ್ತೆ ಗುಂಡಿ ದರ್ಶನ; ವಾಹನ ಸವಾರರಿಗೆ ಟೆನ್ಶನ್​ ಶುರು!

Bengaluru Rains: ಸಿಲಿಕಾನ್ ಸಿಟಿಯಲ್ಲಿ ಭಾರೀ ಮಳೆ ಬೆನ್ನಲ್ಲೇ ರಸ್ತೆ ಗುಂಡಿ ದರ್ಶನ; ವಾಹನ ಸವಾರರಿಗೆ ಟೆನ್ಶನ್​ ಶುರು!

ರಸ್ತೆಗುಂಡಿಗಳ ದರ್ಶನ

ರಸ್ತೆಗುಂಡಿಗಳ ದರ್ಶನ

ಬೆಂಗಳೂರಿನಲ್ಲಿ ಮತ್ತೆ ರಸ್ತೆ ಗುಂಡಿಗಳ ಸಮಸ್ಯೆ ಶುರುವಾಗುತ್ತಿದೆ, ಪಾಲಿಕೆ ಅಧಿಕಾರಿಗಳು ಆದಷ್ಟು ಬೇಗ ಇದಕ್ಕೆ ಮುಕ್ತಿ ಕೊಡಬೇಕಿದೆ.

  • News18 Kannada
  • 5-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ರಾಜಧಾನಿ (Capital City) ಸಿಲಿಕಾನ್ ಸಿಟಿಯಲ್ಲಿ (Silicon City) ವರುಣನ ಆರ್ಭಟ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ಇದೀಗ ನಗರದಲ್ಲಿ ಮತ್ತೆ ಹಳೇ ಸಮಸ್ಯೆ ಶುರುವಾಗಿದೆ. ಸ್ವಲ್ಪ ದಿನ ನಿರಾಳದಿಂದ ಇದ್ದ ಜನರಿಗೆ ಮತ್ತೆ ಕಿರಿಕಿರಿ ಉಂಟಾಗುತ್ತಿದೆ. ಕಳೆದ ಮೂರು ದಿನದಿಂದ ಮಳೆ (Rain) ಬಂದು ನಗರದಲ್ಲಿ ಅನೇಕ ಅನಾಹುತಗಳ ಸಂಭವಿಸಿವೆ. ಇದರ ಬೆನ್ನಲ್ಲೇ ಜನರಿಗೆ ಮತ್ತೆ ಈ ರಸ್ತೆಗುಂಡಿಗಳ (Pothole) ಸಮಸ್ಯೆ ಶುರುವಾಗಿದೆ. ಸದ್ಯಕ್ಕೆ ಪಾಥ್​ ಹೋಲ್‌ಗಳ ಸಮಸ್ಯೆಗೆ ಮುಕ್ತಿ ಇಲ್ವಾ ಎನ್ನುವಂತಾಗಿದೆ.


ಕಳೆದ ನಾಲ್ಕೈದು ತಿಂಗಳ ಹಿಂದೆಯಷ್ಟೇ ಹಾಕಿದ್ದ ಡಾಂಬಾರು ಮಳೆಗೆ ಕಿತ್ತು ಬರ್ತಿದೆ. ಈ ಮೂಲಕ ಕಳಪೆ ಕಾಮಗಾರಿ ಬಣ್ಣ ಬಯಲಾಗ್ತಿದೆ. ಈ ಬಗ್ಗೆ ನ್ಯೂಸ್18 ರಿಯಾಲಿಟಿ ಚೆಕ್ ಮಾಡಿದ್ದು ನಮ್ಮ ನಗರದ ರಸ್ತೆಗಳ ಅಸಲಿ ಬಣ್ಣ ಬಯಲಾಗಿದೆ.


ಇದನ್ನೂ ಓದಿ: Accident: ಪೊಲೀಸರಿಂದ ತಪ್ಪಿಸಿಕೊಳ್ಳಲು ಫಿಲ್ಮಿ ಸ್ಟೈಲ್‌ನಲ್ಲಿ ಖದೀಮರ ಸ್ಟಂಟ್​​​! ಹಿಟ್‌ ಆ್ಯಂಡ್‌ ರನ್‌ನ ಬೆಚ್ಚಿ ಬೀಳಿಸೋ ದೃಶ್ಯ




ಇದು ರಾಮಕೃಷ್ಣ ಆಶ್ರಮದ ಸರ್ಕಲ್‌. ನಿನ್ನೆ ಮಳೆ ಬಂದ ಕಾರಣ, ರಸ್ತೆ ಕಿತ್ತು ಬಂದಿದೆ. ಇಲ್ಲಿ ಹಾಕಿದ್ದ ಟಾರ್ ಕಿತ್ತು ಬಂದು ಜಲ್ಲಿಕಲ್ಲುಗಳು ಮಾತ್ರ ರಸ್ತೆಯಲ್ಲಿವೆ. ಇದು ಕಳಪೆ ಕಾಮಗಾರಿಯೆಂದು ಎಂಥವರಿಗಾದರೂ ತಿಳಿಯುತ್ತದೆ.


ರಸ್ತೆಗುಂಡಿ


ಇನ್ನು, ಮೆಜೆಸ್ಟಿಕ್​ನ ಬಿಎಂಟಿಸಿ ಬಸ್ ನಿಲ್ದಾಣದ ಬಳಿ ಸುಮಾರು ದಿನಗಳಿಂದ ರಸ್ತೆ ಗುಂಡಿ ಇತ್ತು, ಈ ಬಗ್ಗೆ ನ್ಯೂಸ್ 18 ವಿಸೃತ ವರದಿ ಪ್ರಸಾರ ಮಾಡಿತ್ತು. ಆ ಬಳಿಕ ಬಿಎಂಟಿಸಿಯಿಂದಲೇ ಟಾರ್ ಹಾಕಿಸಿ ಪರಿಹಾರ ನೀಡಿದ್ರು. ಆದ್ರೆ ಪ್ರೀ ಮಾನ್ಸೂನ್‌ನ ಅಬ್ಬರಕ್ಕೆ ಮತ್ತೆ ರಸ್ತೆ ಗುಂಡಿ ನಿರ್ಮಾಣವಾಗಿದೆ.


ರಸ್ತೆಗುಂಡಿ

top videos


    ಇದು ಸ್ಯಾಂಪಲ್​ ಅಷ್ಟೇ. ಬೆಂಗಳೂರಿನಲ್ಲಿ ಮತ್ತೆ ರಸ್ತೆ ಗುಂಡಿಗಳ ಸಮಸ್ಯೆ ಶುರುವಾಗುತ್ತಿದೆ, ಪಾಲಿಕೆ ಅಧಿಕಾರಿಗಳು ಆದಷ್ಟು ಬೇಗ ಇದಕ್ಕೆ ಮುಕ್ತಿ ಕೊಡಬೇಕಿದೆ. ನೂತನ ಸರ್ಕಾರ ರಸ್ತೆ ಗುಂಡಿ ಮುಚ್ಚಲು ಮುಂದಾಗದಿದ್ರೆ ಜನ ಛೀ ಥೂ ಅನ್ನೋದು ಗ್ಯಾರಂಟಿ. (ವರದಿ: ಹಂಸ ಶ್ಯಾಮಲ, ನ್ಯೂಸ್ 18, ಬೆಂಗಳೂರು)

    First published: