• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಮದ್ದೂರಿನಲ್ಲಿ ಮಹಿಳೆಯ ಬರ್ಬರ ಹತ್ಯೆ; ಮಂಚಕ್ಕೆ ಕೈ ಕಾಲು ಕಟ್ಟಿ ಅತ್ಯಾಚಾರಗೈದು ಉಸಿರುಗಟ್ಟಿಸಿ ಕೊಲೆ

ಮದ್ದೂರಿನಲ್ಲಿ ಮಹಿಳೆಯ ಬರ್ಬರ ಹತ್ಯೆ; ಮಂಚಕ್ಕೆ ಕೈ ಕಾಲು ಕಟ್ಟಿ ಅತ್ಯಾಚಾರಗೈದು ಉಸಿರುಗಟ್ಟಿಸಿ ಕೊಲೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಈ ಕುಟುಂಬದಲ್ಲಿ ಮೂವರು ಮಾತ್ರ ಇದ್ದು, ಮೃತಳ ಗಂಡ ಅಡುಗೆ ಭಟ್ಟನ ಕೆಲಸ ಮಾಡುತ್ತಾ, ಜೀವನ ಸಾಗಿಸ್ತಿದ್ರು. ಕೊಲೆಯಾದ ಪೂರ್ಣಿಮಾ ಅಲ್ವಸ್ವಲ್ಪ ಹಣಕಾಸು ವ್ಯವಹಾರ ಮಾಡ್ತಿದ್ದು, ಇತ್ತೀಚೆಗೆ ಮನೆ ಕಟ್ಟಲು ಪ್ರಾರಂಭಿಸಿದ್ದು, ಆ ಕಾರಣಕ್ಕಾಗಿ ವಿವಿ ನಗರದಲ್ಲಿ ಬಾಡಿಗೆ ಮನೆ ಪಡೆದು ವಾಸವಾಗಿದ್ದರು.  ನಗರದಲ್ಲಿ  ಮಹಿಳೆಯನ್ನು ರೇಪ್ ಮಾಡಿ ಹತ್ಯೆ ಮಾಡಿರೋ ಸುದ್ದಿ ತಿಳಿದು ಕೆಲಕಾಲ ಆತಂಕ ನಿರ್ಮಾಣವಾಗಿತ್ತು.

ಮುಂದೆ ಓದಿ ...
  • Share this:

ಮಂಡ್ಯ(ಫೆ.03): ಸಕ್ಕರೆನಾಡು ಮಂಡ್ಯದಲ್ಲಿ ಮತ್ತೊಂದು ಬರ್ಬರ ಹತ್ಯೆ ನಡೆದಿದೆ. ಮನೆಗೆ ನುಗ್ಗಿದ ದುಷ್ಕರ್ಮಿಗಳು ಮಹಿಳೆಯನ್ನು  ಮಂಚಕ್ಕೆ ಕಟ್ಟಿ ಹಾಕಿ ಅತ್ಯಾಚಾರ ಮಾಡಿದ್ದಾರೆ. ಬಳಿಕ ದಿಂಬಿನಿಂದ ಮಹಿಳೆಯ ಉಸಿರುಗಟ್ಟಿಸಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ರಾತ್ರಿ ನಡೆದ  ಘಟನೆಯಿಂದ ಮಂಡ್ಯ ಜಿಲ್ಲೆಯ  ಜನರು ಬೆಚ್ಚಿ ಬಿದ್ದಿದ್ದಾರೆ. ಹೌದು! ಮಂಡ್ಯ ಜಿಲ್ಲೆಯಲ್ಲಿ ಮೇಲಿಂದ ಮೇಲೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ‌. ಕೊಲೆ ಸುಲಿಗೆ ಕಳ್ಳತನ ನಡೆಯುತ್ತಿತ್ತು. ಆದ್ರೀಗ ಜಿಲ್ಲೆಯಲ್ಲಿ ಮಹಿಳೆಯೊಬ್ಬಳನ್ನು ಅತ್ಯಾಚಾರಗೈದು ಬಳಿಕ‌ ದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ. ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಮದ್ದೂರು ಪಟ್ಟಣದ ಜನರು ಬೆಚ್ಚಿ ಬಿದ್ದಿದ್ದಾರೆ.


ಪಟ್ಟಣದ ವಿ.ವಿ ನಗರದ 9 ನೇ ಕ್ರಾಸ್ ನ ಮನೆಯೊಂದರಲ್ಲಿ ವಾಸವಾಗಿದ್ದ ಪೂರ್ಣಿಮಾ(39) ಎಂಬ ಮಹಿಳೆಯನ್ನು ರಾತ್ರಿ ಮಂಚಕ್ಕೆ  ಕೈ- ಕಾಲು ಕಟ್ಟಿ, ಅತ್ಯಾಚಾರ ಮಾಡಿ ಬಳಿಕ  ದಿಂಬಿನಿಂದ ಉಸಿರುಗಟ್ಟಿಸಿ ಸಾಯಿಸಿ ಪರಾರಿಯಾಗಿದ್ದಾರೆ. ರಾತ್ರಿ ಮನೆಗೆ ಬಂದಾಗ ಮಗನಿಗೆ ತನ್ನ ತಾಯಿ ಹತ್ಯೆಯಾಗಿರೋದು ತಿಳಿದು ಬಂದಿದೆ. ತಾಯಿ ಹತ್ಯೆಯಿಂದ ತಂದೆ-ಮಗ ಕಂಗಾಲಾಗಿದ್ದು ಭಯ ಭೀತಿಗೊಂಡಿದ್ದಾರೆ.


ಇನ್ನು ಈ ಕುಟುಂಬದಲ್ಲಿ ಮೂವರು ಮಾತ್ರ ಇದ್ದು, ಮೃತಳ ಗಂಡ ಅಡುಗೆ ಭಟ್ಟನ ಕೆಲಸ ಮಾಡುತ್ತಾ, ಜೀವನ ಸಾಗಿಸ್ತಿದ್ರು. ಕೊಲೆಯಾದ ಪೂರ್ಣಿಮಾ ಅಲ್ವಸ್ವಲ್ಪ ಹಣಕಾಸು ವ್ಯವಹಾರ ಮಾಡ್ತಿದ್ದು, ಇತ್ತೀಚೆಗೆ ಮನೆ ಕಟ್ಟಲು ಪ್ರಾರಂಭಿಸಿದ್ದು, ಆ ಕಾರಣಕ್ಕಾಗಿ ವಿವಿ ನಗರದಲ್ಲಿ ಬಾಡಿಗೆ ಮನೆ ಪಡೆದು ವಾಸವಾಗಿದ್ದರು.  ನಗರದಲ್ಲಿ  ಮಹಿಳೆಯನ್ನು ರೇಪ್ ಮಾಡಿ ಹತ್ಯೆ ಮಾಡಿರೋ ಸುದ್ದಿ ತಿಳಿದು ಕೆಲಕಾಲ ಆತಂಕ ನಿರ್ಮಾಣವಾಗಿತ್ತು. ಮನೆಯ ಮುಂದೆ ಜನರು ಜಮಾಯಿಸಿ ಆತಂಕದಿಂದಲೇ ಘಟನೆಯ ಬಗ್ಗೆ ಮಾತನಾಡಿಕೊಳ್ತಿದ್ರು.


ಬಾಗಲಕೋಟೆಯಲ್ಲಿ ಕಾಮಗಾರಿ ಮಾಡದೇ ವರ್ಷದ ಹಿಂದೆ ಬಿಲ್ ಎತ್ತುವಳಿ; ಮಾಹಿತಿ ಹಕ್ಕಿನಡಿ ಅಕ್ರಮ ಬಯಲು


ಘಟನೆಯ ಸುದ್ದಿ ತಿಳಿಯುತ್ತಲೇ ಮದ್ದೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಬಳಿಕ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೂಡ ಭೇಟಿ ನೀಡಿ ಪರಿಶೀಲಿಸಿ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡ್ರು. ಇನ್ನು ಕೊಲೆಯಾದ ಮಹಿಳೆ  ಹಣಕಾಸು ವ್ಯವಹಾರ ನಡೆಸ್ತಿರೋ ಹಿನ್ನೆಲೆಯಲ್ಲಿ ಈ ಕೊಲೆ ಯಾವ ಕಾರಣಕ್ಕಾಗಿ ಮಾಡಲಾಗಿದೆ ಅನ್ನೋ ಬಗ್ಗೆ  ತನಿಖೆ ನಡೆಸುತ್ತಿದ್ದಾರೆ.


ಘಟನೆಯ ಬಗ್ಗೆ ಕೆಲವೊಂದು ಸುಳಿವು ಸಿಕ್ಕಿದ್ದು, ಆ ಆಧಾರದ ಮೇಲೆ ತನಿಖೆ ನಡೆಸ್ತಿದ್ದು, ಶ್ವಾನ ದಳ ಮತ್ತು ಎಫ್​ಎಸ್​ಎಲ್​​​ ತಜ್ಞರನ್ನು ಕರೆಸಲಾಗಿದೆ. ಶೀಘ್ರವೇ ಯಾರು  ಈ ಕೃತ್ಯ ಮಾಡಿದ್ದಾರೆ ಎನ್ನುವ ಬಗ್ಗೆ ಕೂಲಂಕುಶ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವುದಾಗಿ ತಿಳಿಸಿದರು.


ಒಟ್ಟಾರೆ ಮದ್ದೂರಿನಲ್ಲಿ ನಡೆದ ಮಹಿಳೆಯ ಈ ಕೊಲೆ ಪ್ರಕರಣದಿಂದ ಜನರು ಬೆಚ್ಚಿ ಬಿದ್ದಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಮದ್ದೂರು ಪೊಲೀಸರು ಇದೀಗ ತನಿಖೆ ಕಾರ್ಯ ಚುರುಕುಗೊಳಿಸಿದ್ದು, ಕೃತ್ಯ ಎಸಗಿ ಪರಾರಿಯಾಗಿರೋ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

Published by:Latha CG
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು