• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Accident: ಚಾಲಕನ ನಿಯಂತ್ರಣ ತಪ್ಪಿ ಟೀ ಅಂಗಡಿಗೆ ನುಗ್ಗಿದ ಲಾರಿ; 5 ಅಮಾಯಕ ಜೀವಗಳು ಬಲಿ

Accident: ಚಾಲಕನ ನಿಯಂತ್ರಣ ತಪ್ಪಿ ಟೀ ಅಂಗಡಿಗೆ ನುಗ್ಗಿದ ಲಾರಿ; 5 ಅಮಾಯಕ ಜೀವಗಳು ಬಲಿ

ಟೀ ಸ್ಟಾಲ್​ಗೆ ನುಗ್ಗಿರುವ ಲಾರಿ

ಟೀ ಸ್ಟಾಲ್​ಗೆ ನುಗ್ಗಿರುವ ಲಾರಿ

ಅಪಘಾತಕ್ಕೆ ಲಾರಿಯ ಅತಿ ವೇಗ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಕಿರುವ ಅವಜ್ಞಾನಿಕ ರಸ್ತೆ ಉಬ್ಬು (ಹಂಪ್) ಕಾರಣ ಎನ್ನಲಾಗಿದೆ.

  • Share this:

ಚಿಕ್ಕಬಳ್ಳಾಪುರ(ನ.28): ಅತಿ ವೇಗದಿಂದ ಬಂದ ಲಾರಿ ರಸ್ತೆ ಹಂಪ್ ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ದಾಟುತ್ತಿದ್ದ ಕಾರು, ರಸ್ತೆ ಬದಿ ನಿಂತಿದ್ದ ಕಾರುಗಳು ಸೇರಿದಂತೆ ಗುದ್ದಿ ಟೀ ಅಂಗಡಿಗೆ ನುಗ್ಗಿದ ಪರಿಣಾಮ ಐವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ  ಚಿಕ್ಕಬಳ್ಳಾಪುರ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಏಳರ ಚದಲಪುರ ಗೇಟ್ ನಲ್ಲಿ ನಡೆದಿದೆ.  ಈ ಘಟನೆಯಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಚಿಕ್ಕಬಳ್ಳಾಪುರ ಮೂಲದ ವಕೀಲ ಯಮುನಾಚಾರಿ, ಬೆಂಗಳೂರು ಮೂಲದ ಕಲಾಂಜಿಯಮ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ದೊಡ್ಡಬಳ್ಳಾಪುರ ಮೂಲದ ನಿತೀಶ್ ಗೌಡ, ಚಿಕ್ಕಬಳ್ಳಾಪುರ ತಾಲ್ಲೂಕಿನ ಗವಿಗಾನಹಳ್ಳಿಯ ವೆಂಕಟೇಶ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ್ದಾರೆ. ಇನ್ನು, ರಂಗಪ್ಪ ಎಂಬ ಕೂಲಿ ಕಾರ್ಮಿಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಹೃದಯ ವಿದ್ರಾವಕ ಘಟನೆ ನಡೆದಿದೆ.


ಬೆಂಗಳೂರಿನಿಂದ ಹೈದರಾಬಾದ್ ಗೆ ತೆರಳಲು  ಅತಿವೇಗದಲ್ಲಿ ಬರುತ್ತಿದ್ದ ಕಂಟೈನರ್ ಲಾರಿ  ಚದುಲಪುರ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಹಾಕಿರುವ ಹಂಪ್ ನಿಂದ ಹಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ದಾಟುತ್ತಿದ್ದ ಸ್ವಿಪ್ಟ್ ಕಾರಿಗೆ ಗುದ್ದಿ, ಅಲ್ಲಿಯೇ ರಸ್ತೆ ಬದಿ ನಿಲ್ಲಿಸಿದ್ದ ನೆಕ್ಸಾ ಕಾರ್ ಮತ್ತು ಸ್ವಿಫ್ಟ್ ಕಾರಿಗೆ ಗುದ್ದಿದೆ. ಚಾಲಕನ ನಿಂತ್ರಣ ತಪ್ಪಿ ರಸ್ತೆ ಪಕ್ಕದಲ್ಲೆ ಇದ್ದ  ಕೃಷ್ಣ ಕಾಂಡಿಮೆಂಟ್ಸ್ ಮತ್ತು ಪಕ್ಕದ ಟೀ ಅಂಗಡಿಗೆ ನುಗ್ಗಿದೆ. ರಸ್ತೆ ದಾಟುತ್ತಿದ್ದ ಸ್ವಿಪ್ಟ್ ಕಾರಿನಲ್ಲಿದ್ದ  ವಕೀಲ ಯಮುನಾಚಾರಿ , ವೆಂಕಟೇಶ್ ಮೃತರಾಗಿದ್ದು ಜಿ.ಹೆಚ್.ಮುನಿಯಪ್ಪ ತೀವ್ರ ಗಾಯಗೊಂಡಿದ್ದಾರೆ.


ಭಾರತದ ಆರ್ಥಿಕತೆ ನಿರೀಕ್ಷಿತ ಚೇತರಿಕೆ ಇಲ್ಲ; ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ 7.5 ಕುಸಿತ


ಕೃಷ್ಣ ಕಾಂಡಿಮೆಂಟ್ಸ್ ಮುಂದೆ ನೆಕ್ಸಾ ಕಾರ್ ನಿಲ್ಲಿಸಿ ಟೀ  ಕುಡಿಯುತ್ತಿದ್ದ ನಿತೀಶ್ ಗೌಡ, ಕಲಾಂಜಿಯಮ್   ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು ಮತ್ತೊಬ್ಬನ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳಿಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ  ಬೆಂಗಳೂರಿನ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆಯಲ್ಲಿ   ಅಂಗಡಿ  ಕಾರುಗಳು ಹಾಗೂ ಲಾರಿ ನಜ್ಜುಗುಜ್ಜಾಗಿದ್ದು, ಅಪಘಾತಕ್ಕೆ ಲಾರಿಯ ಅತಿ ವೇಗ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಕಿರುವ ಅವಜ್ಞಾನಿಕ ರಸ್ತೆ ಉಬ್ಬು (ಹಂಪ್) ಕಾರಣ ಎನ್ನಲಾಗಿದೆ.

top videos


    ಸ್ಥಳಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮಿಥುನ್‌ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂದಿಗಿರಿಧಾಮ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಅಷ್ಟಕ್ಕೂ ತನ್ನದಲ್ಲದ ತಪ್ಪಿಗೆ ಐದು ಅಮಾಯಕ ಜೀವಗಳು ಬಲಿಯಾಗಿವೆ.


    ಒಟ್ಟಿನಲ್ಲಿ ವಾಹನ ಚಾಲನೆ ಮಾಡುವಾಗ ಎಚ್ಚರಿಕೆಯಿಂದ ಇರಬೇಕು. ಸಣ್ಣ ತಪ್ಪು ಯಾರದ್ದೋ ಮನೆ ದೀಪ, ಬದುಕಿನ ದಿಕ್ಕನ್ನೇ ಬದಲಿಸಿ ಬಿಡುತ್ತದೆ. ವಾಹನ ಚಾಲನೆ ಮಾಡುವಾಗ ಕನಿಷ್ಠ ಸೌಜನ್ಯದ ಜೊತೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಎಂಬುದು ನ್ಯೂಸ್18 ಕಳಕಳಿ ಮತ್ತು ಮನವಿ.

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು