ಭಾರತದ ಯುವ ವೇಗಿಗಳ ಮಾರಕ ದಾಳಿ: 35 ರನ್ ಗಳಿಗೆ ಆಲೌಟ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

23 ಎಸೆತಗಳನ್ನು ಎದುರಿಸಿದ ಮಧ್ಯಪ್ರದೇಶದ ತಂಡ ಆಟಗಾರರು ಯಾವುದೇ ರನ್​ ಗಳಿಸದೇ ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್​ ಕಡೆ ಹೆಜ್ಜೆಹಾಕಿ ಅಚ್ಚರಿ ಮೂಡಿಸಿದ್ದರು.

  • News18
  • 2-MIN READ
  • Last Updated :
  • Share this:

23 ಎಸೆತ..ಯಾವುದೇ ರನ್ನಿಲ್ಲ..ಸರ್ವ ವಿಕೆಟ್​ ಪತನ. ಇದು ಯಾವುದೋ ಗಲ್ಲಿ ಕ್ರಿಕೆಟ್​ನ ಕಾಮೆಂಟರಿಯಲ್ಲ. ಬದಲಾಗಿ ಪ್ರಸ್ತುತ ನಡೆಯುತ್ತರುವ ರಣಜಿ ಟೂರ್ನಿಯ ಭಾರತದ ತಂಡವೊಂದರ ಸ್ಕೋರ್ ಕಾರ್ಡ್. ಎಲೈಟ್​ ಎ ಗ್ರೂಪಿನ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಮಧ್ಯಪ್ರದೇಶ ತಂಡ ಆಂಧ್ರಪದೇಶವನ್ನು ಎದುರಿಸಿತ್ತು.

ಮೊದಲ ಇನಿಂಗ್ಸ್​ನಲ್ಲಿ ಆಂಧ್ರ ಬ್ಯಾಟ್ಸ್​ಮನ್​ಗಳನ್ನು 132 ರನ್​ಗೆ ಕಟ್ಟಿಹಾಕಲು ಮಧ್ಯಪ್ರದೇಶ ತಂಡ ಬೌಲರ್​ಗಳು ಯಶಸ್ವಿಯಾಗಿದ್ದರು. ಆದರೆ ನಂತರ ಬ್ಯಾಟಿಂಗ್​ ಇಳಿದ ಮಧ್ಯಪ್ರದೇಶದ ಸ್ಥಿತಿ ಕೂಡ ಭಿನ್ನವಾಗಿರಲಿಲ್ಲ. ಕೇವಲ 91 ರನ್​ಗಳಿಸಿ ಮೊದಲ ಇನಿಂಗ್ಸ್​ ಕೊನೆಗೊಳಿಸಿತು. ಮೊದಲ ಇನಿಂಗ್ಸ್​ನ ತಪ್ಪನ್ನು ತಿದ್ದಿಕೊಂಡ ಆಂಧ್ರ ಪ್ರದೇಶದ ಬ್ಯಾಟಿಂಗ್​ ಪಡೆ ದ್ವಿತೀಯ ಇನಿಂಗ್ಸ್​ನಲ್ಲಿ ಭರ್ಜರಿ 301 ಬಾರಿಸಿತ್ತು.

ಮೊದಲ ಇನಿಂಗ್ಸ್​ ಹಿನ್ನೆಡೆಯೊಂದಿಗೆ 342 ರನ್​ಗಳ ಬೃಹತ್​ ಗುರಿ ಪಡೆದ ಮಧ್ಯಪ್ರದೇಶ ತಂಡವು 19 ರನ್​ಗಳಿಸುವಷ್ಟರಲ್ಲೇ ತನ್ನ ಪ್ರಮುಖ 3 ವಿಕೆಟ್​ಗಳನ್ನು ಕಳೆದುಕೊಂಡಿತು. ಆದರೆ ನಾಲ್ಕನೇ ವಿಕೆಟ್​ಗೆ ಚೇತರಿಕೆಯ ಭರವಸೆ ನೀಡಿದ್ದ ಬ್ಯಾಟ್ಸ್​ಮನ್ಸ್​ಗಳು 35 ರನ್​ಗಳ ತನಕ 3 ವಿಕೆಟ್​ನಲ್ಲೇ ಕ್ರೀಸ್ ಕಚ್ಚಿ ನಿಂತಿದ್ದರು.

ಇದನ್ನೂ ಓದಿ: ಸ್ಟೇಟ್​ ಬ್ಯಾಂಕ್ ಆಫ್​ ಇಂಡಿಯಾ ನೇರ ನೇಮಕಾತಿ: ವಾರ್ಷಿಕ ವೇತನ 52 ಲಕ್ಷ ರೂ.

ಆದರೆ ನಂತರ ನಡೆದ ನಾಟಕೀಯ ಬೆಳವಣಿಗೆಯಲ್ಲಿ  23 ಎಸೆತಗಳನ್ನು ಎದುರಿಸಿದ ಮಧ್ಯಪ್ರದೇಶದ ತಂಡ ಆಟಗಾರರು ಯಾವುದೇ ರನ್​ ಗಳಿಸದೇ ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್​ ಕಡೆ ಹೆಜ್ಜೆಹಾಕಿ ಅಚ್ಚರಿ ಮೂಡಿಸಿದ್ದರು.

ಇದನ್ನೂ ಓದಿ: VIDEO: ವಯಸ್ಕರಿಗೆ ಮಾತ್ರ: ಬೆಚ್ಚಿಬೀಳಿಸುತ್ತೆ ಅಪಘಾತದ ಭೀಕರ ದೃಶ್ಯ..!

ಆಂಧ್ರ ಪ್ರದೇಶ ಪರ ಕೆ.ವಿ ಶಶಿಕಾಂತ್ ಮಾರಕ ದಾಳಿ ನಡೆಸಿ​ 6 ವಿಕೆಟ್​ ಕಬಳಿಸಿದರೆ, ವಿಜಯ್​ ಕುಮಾರ್​ 3 ವಿಕೆಟ್ ಉರುಳಿಸಿದರು. ಒಬ್ಬರು ಗಾಯಾಳು ಆಗಿದ್ದರಿಂದ ಬ್ಯಾಟಿಂಗ್​ಗೆ ಇಳಿದಿರಲಿಲ್ಲ. ರಣಜಿ ಕ್ರಿಕೆಟ್​​ನಲ್ಲಿ ಅಪರೂಪ ಎನ್ನುವಂತಿದ್ದ ಈ ಪಂದ್ಯವನ್ನು ಆಂಧ್ರ ತಂಡ 307 ರನ್​ಗಳ ಅಂತರದಿಂದ ಗೆದ್ದುಕೊಂಡರು.



ಇದನ್ನೂ ಓದಿ: 48MP ಕ್ಯಾಮೆರಾ ​ಫೋನ್​ಗೆ ಕೇವಲ 10 ಸಾವಿರ ರೂ..!

First published: