ಬಾಲಿವುಡ್ನ ಸೂಪರ್ ಹಿಟ್ ಚಿತ್ರ 3 ಈಡಿಯಟ್ಸ್ (3 Idiots) ಎರಡನೇ ಭಾಗ ಬರಲಿದೆ ಎಂಬ ಸುದ್ದಿಗಳು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ. ಜನರು ಅಮೀರ್ ಖಾನ್ (Aamir Khan) ಅವರನ್ನು ಮತ್ತೆ ಅದೇ ರೂಪದಲ್ಲಿ ನೋಡಲು ಬಯಸುತ್ತಿದ್ದಾರಂತೆ. ಆದರೆ ವೈರಲ್ ಆಗುತ್ತಿರುವ ಚಿತ್ರಗಳಿಗೆ ಸಂಬಂಧಿಸಿದ ಸತ್ಯ ಈಗ ಹೊರಬರುತ್ತಿದೆ. ಈ ಚಿತ್ರಗಳು ಯಾವುದೇ ಸೀಕ್ವೆಲ್ನಲ್ಲ ಬದಲಾಗಿ ಜಾಹೀರಾತಿನದ್ದಾಗಿದ್ದು (Advertisement) ಇದರಲ್ಲಿ ಕ್ರಿಕೆಟಿಗರು ಮತ್ತು ನಟರ ಪ್ರೋಮೋ ಅಭಿಮಾನಿಗಳನ್ನು ಆಶ್ಚರ್ಯಗೊಳಿಸುತ್ತಿದೆ.
ಕ್ರಿಕೆಟಿಗರು vs ಬಾಲಿವುಡ್:
ವಾಸ್ತವವಾಗಿ, ಡ್ರೀಮ್ 11 ಅಪ್ಲಿಕೇಶನ್ ಹೊಸ ಪ್ರೋಮೋವನ್ನು ಬಿಡುಗಡೆ ಮಾಡಿದೆ. ಈ ಪ್ರೋಮೋದಲ್ಲಿ, ಅಮೀರ್ ಖಾನ್, ಆರ್ ಮಾಧವನ್ ಮತ್ತು ಶರ್ಮನ್ ಜೋಶಿ ಜೊತೆಗೆ, ಭಾರತೀಯ ಕ್ರಿಕೆಟಿಗರಾದ ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ರಾಹುಲ್ ಚಹಾರ್, ಹಾರ್ದಿಕ್ ಪಾಂಡ್ಯ ಸೇರಿದಂತೆ ಅನೇಕ ಪ್ರಸಿದ್ಧ ಆಟಗಾರರು ಕಾಣಿಸಿಕೊಂಡಿದ್ದಾರೆ. ಬಿಡುಗಡೆಯಾದ ವೀಡಿಯೊದಲ್ಲಿ, ಅಮೀರ್, ಮಾಧವನ್ ಮತ್ತು ಜೋಶಿ ಪತ್ರಿಕಾಗೋಷ್ಠಿಯಲ್ಲಿ ಒಟ್ಟಿಗೆ ಕುಳಿತಿರುವುದನ್ನು ತೋರಿಸಲಾಗಿದೆ.
#3Idiots ka Press Conference... Cricket Pe?!?! This #Cricket season, #SabKhelenge!
.
.
.#Dream11 @ImRo45 @hardikpandya7 @ashwinravi99 @TheSharmanJoshi pic.twitter.com/r0NSoz8IOj
— Dream11 (@Dream11) March 25, 2023
ಅಮೀರ್ ಖಾನ್ ತಮಾಷೆಯ ಮಾತು:
ವಿಡಿಯೋದಲ್ಲಿ ಅಮೀರ್ ಖಾನ್ ತಮಾಷೆಯಾಗಿ ಮಾತನಾಡುತ್ತಿರುವುದನ್ನು ತೋರಿಸಲಾಗಿದೆ. ಇವರು ನಟನೆಯಲ್ಲಿ ಬ್ಯುಸಿಯಾಗಿದ್ದಾರೆ ಎಂದು ನಾವು ಭಾವಿಸಿದ್ದೇವೆ, ಆದ್ದರಿಂದ ನಾವು ಕ್ರಿಕೆಟ್ ಆಡುತ್ತೇವೆ. ಕ್ರಿಕೆಟ್ ಆಡುವ ನಟರನ್ನು ನೋಡಿ ತುಂಬಾ ನಗುವ ಅಮೀರ್ ಅವರ ಈ ಮಾತಿಗೆ ಅನೇಕ ಕ್ರಿಕೆಟಿಗರ ಪ್ರತಿಕ್ರಿಯೆಗಳು ಸಹ ತೋರಿಸಲಾಗಿದೆ.
ಇದನ್ನೂ ಓದಿ: Virat Kohli: 9ನೇ ತರಗತಿ ಪ್ರಶ್ನೆಪತ್ರಿಕೆಯಲ್ಲಿ ಕೊಹ್ಲಿ ಬಗ್ಗೆ ಪ್ರಶ್ನೆ, ಫೋಟೋ ನೋಡಿ ಅಚ್ಚರಿಯಾದ ಸ್ಟೂಡೆಂಟ್ಸ್
ರೋಹಿತ್ ತಮಾಷೆಯ ಉತ್ತರ:
ಅಮೀರ್ ಖಾನ್ ಅವರ ಈ ಹೇಳಿಕೆಗೆ ರೋಹಿತ್ ಶರ್ಮಾ ತಮಾಷೆಯಾಗಿ ಉತ್ತರಿಸಿದ್ದಾರೆ. ‘ಲಗಾನ್’ನಲ್ಲಿ ಕ್ರಿಕೆಟ್ ಆಡುವುದರಿಂದ ಯಾರೂ ಕ್ರಿಕೆಟಿಗರಾಗುವುದಿಲ್ಲ. ಇದರ ನಡುವೆ ಆಮೀರ್ ತಮ್ಮ ವೃತ್ತಿ ಜೀವನದಲ್ಲಿ ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ ಎನ್ನುತ್ತಾರೆ ಜೋಶಿ. ಈ ಬಗ್ಗೆ ರೋಹಿತ್, 'ಎರಡು ವರ್ಷದಲ್ಲಿ ಒಂದು ಹಿಟ್ ಕೊಟ್ಟು ಯಾರೂ ಹಿಟ್ಮ್ಯಾನ್ ಆಗುವುದಿಲ್ಲ!' ಎನ್ನುವ ಮೂಲಕ ಅಮೀರ್ಗೆ ಟಾಂಗ್ ನೀಡಿದ್ದಾರೆ.
ಬಿಡುಗಡೆಯಾದ ವೀಡಿಯೊದಲ್ಲಿ, ಮೂವರೂ ನಟರು ನಟನಾ ಕ್ಷೇತ್ರಕ್ಕೆ ಕಾಲಿಡಲು ಅನೇಕ ಕ್ರಿಕೆಟಿಗರನ್ನು ಎಳೆಯುತ್ತಿದ್ದಾರೆ ಮತ್ತು ಆಟಗಾರರು ನಟರನ್ನು ಗೇಲಿ ಮಾಡುತ್ತಿದ್ದಾರೆ. ಇದೇ ವೇಳೆ ನಟರು ಕ್ರಿಕೆಟ್ ಕ್ಷೇತ್ರಕ್ಕೂ ಕಾಲಿಟ್ಟು ಆಟಗಾರರಿಗೆ ಸವಾಲು ಹಾಕುವುದಾಗಿ ಘೋಷಿಸಿದ್ದಾರೆ.
ರೋಹಿತ್ ಬಳಿಕ ಪಾಂಡ್ಯ ನಾಯಕ:
ಕೌಟುಂಬಿಕ ಕಾರಣಗಳಿಂದಾಗಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಇರಲಿಲ್ಲ. ಇದಾದ ನಂತರ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಗೆ ಏಕದಿನ ತಂಡದ ನಾಯಕತ್ವವನ್ನು ಹಸ್ತಾಂತರಿಸಲಾಯಿತು. ಏಕದಿನದಲ್ಲಿ ಮೊದಲ ಬಾರಿಗೆ ನಾಯಕತ್ವ ವಹಿಸಿದ್ದ ಪಾಂಡ್ಯ ನಾಯಕತ್ವದಲ್ಲಿ ಭಾರತ ಭರ್ಜರಿ ಜಯ ದಾಖಲಿಸಿತು. ಇದೀಗ ಏಕದಿನ ಪಂದ್ಯದಲ್ಲೂ ಹಾರ್ದಿಕ್ ತಮ್ಮ ನಾಯಕತ್ವದ ಪ್ರಭಾವವನ್ನು ತೋರಿಸಿದ್ದಾರೆ. ನಿಸ್ಸಂಶಯವಾಗಿ ಅವರು ರೋಹಿತ್ ಶರ್ಮಾ ನಂತರ ನಾಯಕರಾಗಿ ಆಯ್ಕೆ ಆಗುವ ಸಾಧ್ಯತೆ ಹೆಚ್ಚಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ