ನ್ಯೂಸ್ 18 ಕನ್ನಡ
ದುಬೈ (ಜೂ. 30): ಕಬಡ್ಡಿ ಮಾಸ್ಟರ್ಸ್ ದುಬೈ ಟೂರ್ನಿಯ ಇಂದಿನ ಫೈನಲ್ ಕಾದಾಟದಲ್ಲಿ ಇರಾನ್ ತಂಡವನ್ನು ಭಾರತ ಮಣಿಸಿ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.
44-26 ಅಂಕಗಳ ಅಂತರದಿಂದ ಗೆಲುವು ಸಾಧಿಸಿರುವ ಭಾರತ, ಮೊದಲಾರ್ಧದ ಆರಂಭದಲ್ಲೇ ಮುನ್ನಡೆ ಸಾಧಿಸಿತು. ಮೊದಲ ರೈಡ್ನಿಂದಲೇ ಅದ್ಭುತ ಪ್ರದರ್ಶನ ತೋರಿದ ಭಾರತೀಯ ಆಟಗಾರರು 4-0 ಅಂತರದ ಮುನ್ನಡೆ ಸಾಧಿಸಿತು. ಇದಕ್ಕೆ ಪ್ರತಿಯಾಗಿ ಇರಾನ್ ತಂಡಕೂಡ ಎದುರೇಟು ನೀಡಲು ಹರಸಾಹಸ ಪಟ್ಟಿತಾದರು ಯಶಸ್ವಿಯಾಗಿಲ್ಲ. ರೈಡಿಂಗ್ ಹಾಗೂ ಕ್ಯಾಚಿಂಗ್ನಿಂದ ಪ್ರಾಬಲ್ಯ ಸಾಧಿಸಿದ ಭಾರತ ಮೊದಲಾರ್ಧದಲ್ಲಿ 18-11 ಅಂತರದ ಮುನ್ನಡೆ ಸಾಧಿಸಿತು.
ದ್ವಿತೀಯಾರ್ಧದಲ್ಲು ಇದೇ ದಾಳಿಯನ್ನು ಮುಂದುವರೆಸಿದ ಭಾರತ ಅಜಯ್ ಠಾಕೂರ್, ಮೋನು ಗೋಯತ್ ಅವರು ಉತ್ತಮ ರೈಡ್ ನಡೆಸಿದರು. ಈ ಮೂಲಕ ಚೊಚ್ಚಲ ಮಾಸ್ಟರ್ ಕಬಡ್ಡಿ ಟೂರ್ನಿಯಲ್ಲಿ ಭಾರತ 44-26 ಅಂಕಗಳ ಅಂತರದಲ್ಲಿ ಇರಾನ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ.
Congratulations Indian Kabaddi Team On Winning Kabaddi Masters 2018. #INDvIRN
We Are Proud Of You 🇮🇳🇮🇳 Jai Hind pic.twitter.com/UfKxgYgp05
— Narendra Modi (@narendramodi177) June 30, 2018
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ