ಭಾರತ ಮತ್ತು ಶ್ರೀಲಂಕಾ (IND vs SL) ನಡುವೆ ಎರಡನೇ ಏಕದಿನ ಪಂದ್ಯ ಕೋಲ್ಕತ್ತಾದ ಐತಿಹಾಸಿಕ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ (Eden Gardens) ನಡೆಯಿತು. ಟಾಸ್ ಗೆದ್ದ 216 ರನ್ಗಳ ಟಾರ್ಗೆಟ್ ನೀಡಿತು. ಈ ಮೊತ್ತ ಬೆನ್ನಟ್ಟಿದ ಭಾರತ ತಂಡ 43.2 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 219 ರನ್ ಗಳಿಸುವ ಮೂಲಕ 4 ವಿಕೆಟ್ಗಳ ಜಯ ದಾಖಲಿಸಿತು. ಈ ಮೂಲಕ ಟೀಂ ಇಂಡಿಯಾ 3 ಸರಣಿಯಲ್ಲಿ 2-0 ಅಂತರದಿಂದ ಸರಣಿ ಕೈವಶ ಮಾಡಿಕೊಂಡಿದೆ.
ಟೀಂ ಇಂಡಿಯಾಗೆ ಆಸರೆಯಾದ ಕನ್ನಡಿಗ:
ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ಆರಂಭಿಕರು ಇಂದು ಬೇಗ ಫೇವೆಲಿಯನ್ ಸೇರಿದರು. ನಾಯಕ ರೋಹಿತ್ ಶರ್ಮಾ 17 ರನ್ ಮತ್ತು ಶುಭ್ಮನ್ ಗಿಲ್ 21 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ವಿರಾಟ್ ಕೊಹ್ಲಿ ಸಹ ಕೇವಲ 4 ರನ್ ಗಳಿಸಿ ಔಟ್ ಆದರು. ಆದರೆ ಕನ್ನಡಿಗ ಕೆಎಲ್ ರಾಹುಲ್ 103 ಎಸೆತದಲ್ಲಿ 64 ರನ್ ಗಳಿಸುವ ಮೂಲಕ ತಂಡದ ಗೆಲುವುನಲ್ಲಿ ಪ್ರಮುಖ ಪಾತ್ರವಹಿಸಿದರು. ಉಳಿದಂತೆ ಶ್ರೇಯಸ್ ಅಯ್ಯರ್ 28 ರನ್, ಹಾರ್ದಿಕ್ ಪಾಂಡ್ಯ 36 ರನ್, ಅಕ್ಷರ್ ಪಟೇಲ್ 21 ರನ್ ಮತ್ತು ಕುಲ್ದೀಪ್ ಯಾದವ್ 10 ರನ್ ಗಳಿಸಿದರು.
A victory by 4️⃣ wickets for #TeamIndia in the second #INDvSL ODI here in Kolkata and the series is sealed 2️⃣-0️⃣ 👏👏
Scorecard ▶️ https://t.co/jm3ulz5Yr1 @mastercardindia pic.twitter.com/f8HvDZRJIY
— BCCI (@BCCI) January 12, 2023
ಇನ್ನು, ಶ್ರೀಲಂಕಾ ಕಡಿಮೆ ಮೊತ್ತದ ಟಾರ್ಗೆಟ್ ನೀಡಿದರೂ ಭಾರತವನ್ನು ಕಟ್ಟಿಹಾಕುವಲ್ಲಿ ಒಂದು ಹಂತದಲ್ಲಿ ಯಶಸ್ವಿಯಾಗಿತ್ತು ಎಂದು ಹೇಳಬಹುದು. ಲಂಕಾ ಪರ ಕುಸನ್ ರಾಜಿತ ಕುಮಾರ, ಚಾಮಿಕ ಕರುಣಾರತ್ನೆ ತಲಾ 2 ವಿಕೆಟ್ ಪಡೆದು ಮಿಂಚಿದರೆ, ಧನಂಜಯ್ ಡಿ ಸಿಲ್ವಾ ಮತ್ತು ಕುಸಾಲ್ ರಂಜಿತ್ ತಲಾ 1 ವಿಕೆಟ್ ಪಡೆದರು.
ಬ್ಯಾಟಿಂಗ್ನಲ್ಲಿ ಎಡವಿದ ಶ್ರೀಲಂಕಾ:
ಇನ್ನು, ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವು 39.4 ಓವರ್ಗಳಲ್ಲಿ 10 ವಿಕೆಟ್ ನಷ್ಟಕ್ಕೆ 215 ರನ್ ಗಳಿಸಿತು. ಕುಸಲ್ ಮೆಂಡಿಸ್ 34 ರನ್, ಅವಿಷ್ಕ ಫೆರ್ನಾಂಡೋ 20 ರನ್, ಚರಿತ್ ಅಸಲಂಕಾ 15 ರನ್, ಧನಂಜಯ್ ಡಿ ಸಿಲ್ವಾ ಶೂನ್ಯ, ನುವಾನಿಡು ಫೆರ್ನಾಂಡೋ 50 ರನ್, ನಾಯಕ ದಸುನ್ ಶಾನಕ 2 ರನ್, ವನಿಂದು ಹಸರಂಗ 21 ರನ್, ಚಾಮಿಕ ಕರುಣಾರತ್ನೆ 17 ರನ್, ದುನಿತ್ ವೆಲಾಲಗೆ 32 ರನ್, ಕುಸನ್ ರಾಜಿತ ಕುಮಾರ 17 ರನ್ ಮತ್ತು ಕೊನೆಯಲ್ಲಿ ಲಹೀರು ಕುಮಾರಾ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.
ಇದನ್ನೂ ಓದಿ: Dhoni-Kohli: ಕೊಹ್ಲಿ, ಧೋನಿಯ ಪುಟ್ಟ ಮಕ್ಕಳ ಬಗ್ಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳ ವಿರುದ್ಧ ಮಹಿಳಾ ಆಯೋಗ ಗರಂ
ನಂಬಿಕೆ ಉಳಿಸಿಕೊಂಡ ಕುಲ್ದೀಪ್ ಯಾದವ್:
ಇನ್ನು, ಟಾಸ್ ಸೋತು ಮೊದಲು ಬೌಲಿಂಗ್ ಮಾಡಿದ ಭಾರತ ತಂಡಕ್ಕೆ ಇಂದು ಸಿರಾಜ್ ಮತ್ತು ಕುಲ್ದೀಪ್ ಭಾರತದ ಪರ ಭರ್ಜರಿ ಬೌಲಿಂಗ್ ಮಾಡಿದರು. ಮೊಹಮ್ಮದ್ ಸಿರಾಜ್ 5.4 ಓವರ್ ಮಾಡಿ 30 ರನ್ ನೀಡಿ 3 ವಿಕೆಟ್ ಪಡೆದರೆ, ಕುಲ್ದೀಪ್ ಯಾದವ್ 10 ಓವರ್ ಮಾಡಿ 51 ರನ್ ನೀಡಿ 3 ವಿಕೆಟ್ ಪಡೆದರು. ಉಳಿದಂತೆ ಉಮ್ರಾನ್ ಮಲಿಕ್ 2 ವಿಕೆಟ್ ಮತ್ತು ಅಕ್ಷರ್ ಪಟೇಲ್ 1 ವಿಕೆಟ್ ಪಡೆದು ಮಿಂಚಿದರು. ಇಂದು ಚಹಾಲ್ ಬದಲಿಗೆ ಕುಲ್ದೀಪ್ ಯಾದವ್ ಅವರಿಗೆ ರೋಹಿತ್ ಶರ್ಮಾ ಅವಕಾಶ ನೀಡಿದ್ದರು. ಸಿಕ್ಕ ಅವಕಾಶವನ್ನು ಯಾದವ್ ಸರಿಯಾಗಿ ಬಳಿಸಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ