• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • KL Rahul: ಬಾತ್​ರೂಮ್​ನಲ್ಲಿ ಕಣ್ಣೀರು ಹಾಕಿದ ರಾಹುಲ್​, ಕನ್ನಡಿಗನಿಗೆ ಸಲಹೆ ನೀಡಿದ RCB ಆಟಗಾರ

KL Rahul: ಬಾತ್​ರೂಮ್​ನಲ್ಲಿ ಕಣ್ಣೀರು ಹಾಕಿದ ರಾಹುಲ್​, ಕನ್ನಡಿಗನಿಗೆ ಸಲಹೆ ನೀಡಿದ RCB ಆಟಗಾರ

ಕೆಎಲ್ ರಾಹುಲ್

ಕೆಎಲ್ ರಾಹುಲ್

KL Rahul: ಟೀಂ ಇಂಡಿಯಾದ ಆರಂಭಿಕ ಆಟಗಾರ ಕೆಎಲ್ ರಾಹುಲ್ ಟೆಸ್ಟ್ ಕ್ರಿಕೆಟ್‌ನಲ್ಲಿ ಕೆಟ್ಟ ಫಾರ್ಮ್‌ನಲ್ಲಿದ್ದಾರೆ. ಆಸ್ಟ್ರೇಲಿಯ ವಿರುದ್ಧ ನಡೆಯುತ್ತಿರುವ ಸರಣಿಯಲ್ಲಿ ಮೂರು ಇನ್ನಿಂಗ್ಸ್‌ಗಳಲ್ಲಿ ಕೇವಲ 38 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ.

  • Share this:

ಟೀಂ ಇಂಡಿಯಾದ ಆರಂಭಿಕ ಆಟಗಾರ ಕೆಎಲ್ ರಾಹುಲ್ (KL Rahul) ಟೆಸ್ಟ್ ಕ್ರಿಕೆಟ್‌ನಲ್ಲಿ ಕೆಟ್ಟ ಫಾರ್ಮ್‌ನಲ್ಲಿದ್ದಾರೆ. ಆಸ್ಟ್ರೇಲಿಯ ವಿರುದ್ಧ ನಡೆಯುತ್ತಿರುವ ಸರಣಿಯಲ್ಲಿ ಮೂರು ಇನ್ನಿಂಗ್ಸ್‌ಗಳಲ್ಲಿ ಕೇವಲ 38 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಕಳಪೆ ಫಾರ್ಮ್​​ ಮತ್ತು ತೀವ್ರ ಟೀಕೆಗಳ ನಂತರ, ಮಾರ್ಚ್ 1 ರಿಂದ ಇಂದೋರ್‌ನಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯದ ಆಡುವ ಹನ್ನೊಂದರಲ್ಲಿ ರಾಹುಲ್ ಭಾಗವಾಗುವುದಿಲ್ಲ ಎಂದು ಹೇಳಲಅಗುತ್ತಿದೆ. ಕಳೆದ ಒಂದು ವರ್ಷದಿಂದ ರಾಹುಲ್ ಟೆಸ್ಟ್ ಕ್ರಿಕೆಟ್‌ನಲ್ಲಿ (Test Cricket) ಫಾರ್ಮ್ ಕಳೆದುಕೊಂಡಿದ್ದಾರೆ. ರಾಹುಲ್ ಅವರ ಉಪನಾಯಕ ಸ್ಥಾನವನ್ನೂ ಕಳೆದುಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಭಾರತದ ಅನುಭವಿ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ (Dinesh Karthi) ಅವರು ಕೆಎಲ್ ರಾಹುಲ್‌ಗೆ ಸ್ವಲ್ಪ ಸಮಯ ವಿರಾಮ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ.


ರಾಹುಲ್​ಗೆ ಕಾರ್ತಿಕ್​​ ಸಲಹೆ:


ದಿನೇಶ್ ಕಾರ್ತಿಕ್ ತಮ್ಮ ಕ್ರಿಕೆಟ್ ಮತ್ತು ವೈಯಕ್ತಿಕ ಜೀವನ ಎರಡರಲ್ಲೂ ಹಲವು ಏಳುಬೀಳುಗಳನ್ನು ಕಂಡಿದ್ದಾರೆ. ಮುಂದಿನ ಪಂದ್ಯದಿಂದ ತಾವೂ ಹೊರಗುಳಿಯಲಿದ್ದಾರೆ ಎಂಬುದು ಸ್ವತಃ ರಾಹುಲ್‌ಗೂ ಗೊತ್ತಿದೆ ಎಂದು ಕಾರ್ತಿಕ್​ ಹೇಳಿದ್ದಾರೆ. ರಾಹುಲ್​ ಮೊದಲು ತನ್ನ ಮನಸ್ಥಿತಿಯನ್ನು ಸರಿಪಡಿಸಬೇಕಾಗಿದೆ. ಅವರು ತಮ್ಮ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಗಮನ ಹರಿಸಬೇಕು ಎಂದಿದ್ದಾರೆ. ಮುಂದಿನ ಪಂದ್ಯದಿಂದ ಅವರನ್ನು ಕೈಬಿಟ್ಟರೆ ಅದು ಕೇವಲ ಒಂದು ಇನ್ನಿಂಗ್ಸ್‌ನಿಂದಲ್ಲ ಎಂದು ಅವರಿಗೆ ತಿಳಿದಿದೆ. ಆತ ಕ್ಲಾಸ್ ಪ್ಲೇಯರ್. ಅವರು ಎಲ್ಲಾ ಸ್ವರೂಪಗಳಲ್ಲಿ ತುಂಬಾ ಒಳ್ಳೆಯ ಆಟಗಾರ. ಬಹುಶಃ ಅವರು ಆಟದಿಂದ ಸ್ವಲ್ಪ ಸಮಯ ವಿರಾಮ ತೆಗೆದುಕೊಳ್ಳಬೇಕು. ಅವರು ಏಕದಿನದಲ್ಲಿ ಹೊಸ ಪುನರಾಗಮನ ಮಾಡಬೇಕು ಎಂದಿದ್ದಾರೆ.


ದಿನೇಶ್ ಕಾರ್ತಿಕ್ ಈ ಕುರಿತು ಮಾತನಾಡಿದ್ದು, ‘ಇದು ವೃತ್ತಿಪರ ಜಗತ್ತು. ನೀವು ಆ ದುಃಖದ ಕ್ಷಣಗಳನ್ನು ಎದುರಿಸಬೇಕಾಗುತ್ತದೆ, ಆದರೆ ಆಟಗಾರನಾಗಿ, ನಾನು ಅವನ್ನು ನೋಡಿದಾಗ ಆತ ಏನು ಅನುಭವಿಸಿದ್ದಾನೆಂದು ನನಗೆ ತಿಳಿದಿದೆ. ಅಲ್ಲದೇ ನೀವು ಡ್ರೆಸ್ಸಿಂಗ್ ಕೋಣೆಗೆ ಕಾಲಿಟ್ಟಾಗ, ಸದ್ದಿಲ್ಲದೆ ಶೌಚಾಲಯಕ್ಕೆ ಹೋಗಿ ಮತ್ತು ಕಣ್ಣೀರು ಸುರಿಸಿದಾಗ. ಇದು ಒಳ್ಳೆಯ ಭಾವನೆ ಅಲ್ಲ, ಏಕೆಂದರೆ ನೀವು ಏನೂ ಮಾಡಲು ಸಾಧ್ಯವಿಲ್ಲ ಎಂದು ತೋರಿಸುತ್ತದೆ. ಇದರಿಂದ ನೀವು ಹೊರಬರಬೇಕು‘ ಎಂದು ಹೇಳಿದ್ದಾರೆ.


ಇದನ್ನೂ ಓದಿ: IPL 2023: RCB ತಂಡಕ್ಕೆ ಶಾಕ್​ ಮೇಲೆ ಶಾಕ್​! ಮತ್ತೆ ಗಾಯಕ್ಕೆ ತುತ್ತಾದ ಮ್ಯಾಕ್ಸ್​ವೆಲ್​, ಇಬ್ಬರು ಸ್ಟಾರ್ ಆಟಗಾರರು ಇಂಜುರಿ


ಗಿಲ್​ ಖಾತೆ ತೆರೆಯಬೇಕು:


ಡಿಸೆಂಬರ್ 2021ರಲ್ಲಿ ಸೆಂಚುರಿಯನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಶತಕ ಗಳಿಸಿದ ನಂತರ ರಾಹುಲ್ ಕೊನೆಯ 12 ಇನ್ನಿಂಗ್ಸ್‌ಗಳಲ್ಲಿ 16.5 ಸರಾಸರಿ ಹೊಂದಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಇತರ ತಜ್ಞರಂತೆ, ದಿನೇಶ್ ಕಾರ್ತಿಕ್ ಕೂಡ ಮುಂದಿನ ಎರಡು ಪಂದ್ಯಗಳಲ್ಲಿ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಶುಭಮನ್ ಗಿಲ್ ತೆರೆಯಬೇಕು ಎಂದು ಹೇಳಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ ಶುಭ್​ಮನ್ ಗಿಲ್ ಭಾರತದ ಎಲ್ಲಾ ಫಾರ್ಮೆಟ್‌ನಲ್ಲಿ ಅದ್ಭುತವಾಗಿದ್ದಾರೆ.




ನಾನು ಶುಭಮನ್ ಗಿಲ್ ಜೊತೆ ಹೋಗುತ್ತೇನೆ. ಅವರು ತುಂಬಾ ಚೆನ್ನಾಗಿ ಬ್ಯಾಟಿಂಗ್ ಮಾಡಿದ್ದಾರೆ. ಭಾರತದ ಮೂರನೇ ಟೆಸ್ಟ್‌ನಲ್ಲಿ ಒಂದೇ ಒಂದು ಬದಲಾವಣೆ ಇರಲಿದೆ. ಕೆಎಲ್ ರಾಹುಲ್ ಬಗ್ಗೆ ನನಗೆ ಬೇಸರವಾಯಿತು. ಆದರೆ ಕೆಎಲ್ ರಾಹುಲ್ ಬಲವಾದ ಪುನರಾಗಮನವನ್ನು ಮಾಡುತ್ತಾರೆ ಎಂಬುದು ಖಚಿತ ಎಂದಿದ್ದಾರೆ.


ಭಾರತ ಸಂಭಾವ್ಯ ಪ್ಲೇಯಿಂಗ್​ 11:


ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಇಶಾನ್ ಕಿಶನ್ (WK), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶ್ರೇಯಸ್ ಅಯ್ಯರ್.

Published by:shrikrishna bhat
First published: