ಮಯಾಂಕ್ ದ್ವಿಶತಕದ ಸಾಧನೆಗೆ ಕರ್ನಾಟಕದ ಈ ಸ್ಟಾರ್ ಬೌಲರ್​ ಕಾರಣವಂತೆ!

ಮಯಾಂಕ್ ಅಗರ್ವಾಲ್

ಮಯಾಂಕ್ ಅಗರ್ವಾಲ್

ಈ ಹಿಂದೆ ಐಪಿಎಲ್​ನಲ್ಲೂ ಕಳಪೆ ಪ್ರದರ್ಶನ ನೀಡಿದ ಪರಿಣಾಮ ಮಯಾಂಕ್​ರನ್ನು ಆರ್​ಸಿಬಿ ತಂಡ ಕೈಬಿಟ್ಟಿತ್ತು. ಬಳಿಕ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡದ ಪ್ರಮೋಷನ್ ಪ್ರೋಮೋದಿಂದಲೇ ಔಟ್ ಆಗಿದ್ದರು.

  • Share this:

ಬೆಂಗಳೂರು (ಅ. 04): ವಿಶಾಖಪಟ್ಟಣಂನಲ್ಲಿ ಸಾಗುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಭಾರತ ಉತ್ತಮ ಪ್ರದರ್ಶನ ನೀಡುತ್ತಿದೆ. ಈಗಾಗಲೇ ಮೊದಲ ಇನ್ನಿಂಗ್ಸ್​ ಮುಗಿಸಿರುವ ಕೊಹ್ಲಿ ಪಡೆ 502 ರನ್​ಗೆ ಡಿಕ್ಲೇರ್ ಮಾಡಿಕೊಂಡಿತ್ತು. ಇಡೀ ಇನ್ನಿಂಗ್ಸ್​ನ ಪ್ರಮುಖ ಹೈಲೇಟ್ಸ್​ ಮಯಾಂಕ್ ಅಗರ್ವಾಲ್ ಆಟ.

ರೋಹಿತ್ ಶರ್ಮಾ ಜೊತೆಗೂಡಿ ಅದ್ಭುತ ಆಟ ಪ್ರದರ್ಶಿಸಿದ ಮಯಾಂಕ್ ಟೆಸ್ಟ್​ ಕ್ರಿಕೆಟ್​ನಲ್ಲಿ ಚೊಚ್ಚಲ ದ್ವಿಶತಕ ಸಿಡಿಸಿ ಮಿಂಚಿದರು. ಬರೋಬ್ಬರಿ 371 ಎಸೆತಗಳನ್ನು ಎದುರಿಸಿದ ಅಗರ್ವಾಲ್ 23 ಬೌಂಡರಿ ಹಾಗೂ 6 ಸಿಕ್ಸರ್ ಬಾರಿಸಿ 215 ರನ್ ಗಳಿಸಿದರು. ಈ ಮೂಲಕ ಭಾರತ ಟೆಸ್ಟ್​ ತಂಡದಲ್ಲಿ ಖಾಯಂ ಓಪನರ್ ಸ್ಥಾನವನ್ನು ಭದ್ರ ಪಡಿಸಿಕೊಂಡರು.

ಆದರೆ, ಒಂದು ಕಾಲದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಮಯಾಂಕ್ ಇಂದು ಈ ರೀತಿಯ ಪ್ರದರ್ಶನ ನೀಡಲು ಕರ್ನಾಟಕದ ಆಟಗರಾನೇ ಕಾರಣ ಎಂಬುದು ಬಹಿರಂಗವಾಗಿದೆ.

India vs South Africa, Live Cricket Score: ಎಲ್ಗರ್-ಡಿಕಾಕ್ ಶತಕದ ಜೊತೆಯಾಟ; ಆಫ್ರಿಕಾ ಫೈಟ್​ಬ್ಯಾಕ್​!

Vinay Kumar is the man behind the success of Mayank Agarwal, says Robin Uthappa
ವಿನಯ್ ಕುಮಾರ್


ಈ ಹಿಂದೆ ಐಪಿಎಲ್​ನಲ್ಲಿ ಕಳಪೆ ಪ್ರದರ್ಶನ ನೀಡಿದ ಪರಿಣಾಮ ಮಯಾಂಕ್​ರನ್ನು ಆರ್​ಸಿಬಿ ತಂಡ ಕೈಬಿಟ್ಟಿತ್ತು. ಬಳಿಕ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡದ ಪ್ರಮೋಷನ್ ಪ್ರೋಮೋದಿಂದಲೇ ಔಟ್ ಆಗಿದ್ದರು.

ಈ ಸಂದರ್ಭ ರಣಜಿ ಕ್ರಿಕೆಟ್​ ಮಯಾಂಕ್​ಗೆ ಕೈಹಿಡಿಯಿತು. ಇಲ್ಲಿ ಮಯಾಂಕ್ ಮಿಂಚಲು ಪ್ರಮುಖ ಕಾರಣ ದಾವಣಗೆರೆ ಎಕ್ಸ್​ಪ್ರೆಸ್ ವಿನಯ್ ಕುಮಾರ್. ಕರ್ನಾಟಕ ರಣಜಿ ತಂಡದ ನಾಯಕನಾಗಿದ್ದ ವಿನಯ್ ಅವರು ಮಯಾಂಕ್​ಗೆ ಅನೇಕ ಟಿಪ್ಸ್​ ನೀಡಿದರಂರೆ. ಈ ಅಚ್ಚರಿಯ ಸಂಗತಿಯನ್ನು ರಾಬಿನ್ ಉತ್ತಪ್ಪ ತಿಳಿಸಿದ್ದಾರೆ.

ಅಂತರಾಷ್ಟ್ರೀಯ ಕ್ರಿಕೆಟ್​ಗೆ ಟೀಂ ಇಂಡಿಯಾದ ಸ್ಟಾರ್ ಆಟಗಾರ ನಿವೃತ್ತಿ?

 


"ವಿನಯ್ ಕುಮಾರ್ ಅವರು ಮಯಾಂಕ್​ಗೆ ಉತ್ತಮ ರನ್ ಗಳಿಸುವಂತೆ ಪ್ರೇರಣೆ ಮಾಡಿದ್ದರು. ಇದಾದ ಬೆನ್ನಲ್ಲೆ ಮಹಾರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಅಗರ್ವಾಲ್ ಭರ್ಜರಿ ತ್ರಿಶತಕ ಬಾರಿಸಿದ್ದರು. ಆ ಬಳಿಕ ಮಯಾಂಕ್ ತಿರುಗಿ ನೋಡಿದ್ದೇಯಿಲ್ಲ. ರನ್​ ಮಳೆಯನ್ನೇ ಹರಿಸಿದರು. ಭಾರತ ಟೆಸ್ಟ್​ ತಂಡಕ್ಕೆ ಪದಾರ್ಪಣೆ ಮಾಡಿದರು" ಎಂದು ಉತ್ತಪ್ಪ ಹೇಳಿದ್ದಾರೆ.

First published: