• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • ರಾಹುಲ್ ಮತ್ತೆ ವೈಫಲ್ಯ, ಪಾಂಡೆ-ಪವನ್ ಮಿಂಚಿನ ಬ್ಯಾಟಿಂಗ್​ನಿಂದ ಜಾರ್ಖಂಡ್​ಗೆ ಸವಾಲಿನ ಟಾರ್ಗೆಟ್!

ರಾಹುಲ್ ಮತ್ತೆ ವೈಫಲ್ಯ, ಪಾಂಡೆ-ಪವನ್ ಮಿಂಚಿನ ಬ್ಯಾಟಿಂಗ್​ನಿಂದ ಜಾರ್ಖಂಡ್​ಗೆ ಸವಾಲಿನ ಟಾರ್ಗೆಟ್!

ಮನೀಶ್ ಪಾಂಡೆ

ಮನೀಶ್ ಪಾಂಡೆ

ಇತ್ತ ಅರ್ಧಶತಕ ಬಾರಿಸಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ದೇವದತ್ ಕೊನೆಯ ಓವರ್​ಗೆ ವರೆಗೂ ಬ್ಯಾಟ್ ಬೀಸಿ ತಂಡವನ್ನು ಉತ್ತಮ ಸ್ಥಿತಿಗೆ ತಂದಿಟ್ಟರು.

  • Share this:

ಬೆಂಗಳೂರು (ಸೆ. 26): ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯ ಪಂದ್ಯದಲ್ಲಿ ಜಾರ್ಖಂಡ್ ವಿರುದ್ಧ ಕರ್ನಾಟಕ ಸವಾಲಿನ ಮೊತ್ತ ಪೇರಿಸಿದೆ. ಪವನ್ ದೇಶಪಾಂಡೆ, ದೇವದತ್ ಪಡಿಕ್ಕಲ್ ಹಾಗೂ ನಾಯಕ ಮನೀಶ್ ಪಾಂಡೆ ಅರ್ಧಶತಕದ ನೆರವಿನಿಂದ 50 ಓವರ್​​ಗೆ ರಾಜ್ಯ ತಂಡ 285 ರನ್ ಕಲೆಹಾಕಿದೆ.

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಕರ್ನಾಟಕ ನಿಧಾನಗತಿಯ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ಕೆ ಎಲ್ ರಾಹುಲ್ ಹಾಗೂ ದೇವದತ್ ಪಡಿಕ್ಕಲ್ ಆಮೆಗತಿಯಲ್ಲಿ ಬ್ಯಾಟ್ ಬೀಸಿದರು. ರಾಹುಲ್ ಉತ್ತಮ ಇನ್ನಿಂಗ್ಸ್​ ಕಟ್ಟುವಲ್ಲಿ ಮತ್ತೆ ಎಡವಿದರು. 51 ಎಸೆತಗಳಲ್ಲಿ 1 ಬೌಂಡರಿ ಬಾರಿಸಿ ಕೇವಲ 29 ರನ್​ಗೆ ಔಟ್ ಆದರು.

ಇತ್ತ ದೇವದತ್ ಅರ್ಧಶತಕ ಬಾರಿಸಿ 83 ಎಸೆತಗಳಲ್ಲಿ 58 ರನ್​ ನಿರ್ಗಮಿಸಿದರು. ಕೃಷ್ಣಮೂರ್ತಿ ಸಿದ್ಧಾರ್ಥ್​ ಕೂಡ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲದೆ 22 ರನ್​ಗೆ ಔಟ್ ಆದರು. 30 ಓವರ್ ಆಗುವ ಹೊತ್ತಿಗೆ ತಂಡದ ಮೊತ್ತ 140ರ ಆಸುಪಾಸಿನಲ್ಲಿತ್ತಷ್ಟೆ. ಈ ಸಂದರ್ಭ ಒಂದಾದ ನಾಯಕ ಮನೀಶ್ ಪಾಂಡೆ ಹಾಗೂ ಪವನ್ ದೇಶಪಾಂಡೆ ತಂಡದ ರನ್ ಗತಿಯಲ್ಲಿ ಏರಿಸಿದರು.

ಈ ತೊಂದರೆಯಿಂದ ಬಳಲುತ್ತಿದ್ದಾರಂತೆ ಧೋನಿ; ವಿಶ್ವಕಪ್ ಬಳಿಕ MSD ಕ್ರಿಕೆಟ್ ಆಡದಿರಲು ಕಾರಣ ಬಹಿರಂಗ!

ಬಿರುಸಿನ ಆಟ ಪ್ರದರ್ಶಿಸಿದ ಈ ಜೋಡಿ ಬೌಂಡರಿ-ಸಿಕ್ಸರ್​ಗಳ ಮಳೆ ಸುರಿಸಿದರು. ಅದರಂತೆ ಇವರಿಬ್ಬರು 4ನೇ ವಿಕೆಟ್​ಗೆ 76 ರನ್​ಗಳ ಜೊತೆಯಾಟ ಆಡಿದರು. ಉತ್ತಮ ಆಟ ಪ್ರದರ್ಶಿಸುತ್ತಿದ್ದ ಪಾಂಡೆ 44 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿ 52 ರನ್​ಗೆ ಔಟ್ ಆದರು.

 



ಇತ್ತ ಅರ್ಧಶತಕ ಬಾರಿಸಿ ಭರ್ಜರಿ ಆಟ ಪ್ರದರ್ಶಿಸಿದ ದೇವದತ್ ಕೊನೆಯ ಓವರ್​ಗೆ ವರೆಗೂ ಬ್ಯಾಟ್ ಬೀಸಿ ತಂಡವನ್ನು ಉತ್ತಮ ಸ್ಥಿತಿಗೆ ತಂದಿಟ್ಟರು.

ದೇಶಪಾಂಡೆ 59 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್​ನೊಂದಿಗೆ 70 ರನ್ ಚಚ್ಚಿದರು. ಪರಿಣಾಮ ಕರ್ನಾಟಕ ನಿಗದಿತ 50 ಓವರ್​ಗೆ 9 ವಿಕೆಟ್ ಕಳೆದುಕೊಂಡು 285 ರನ್ ಕಲೆಹಾಕಿತು. ಜಾರ್ಖಂಡ್ ಪರ ರಾಹುಲ್ ಶುಕ್ಲ ಹಾಗೂ ಆನಂದ್ ಸಿಂಗ್ ತಲಾ 4 ವಿಕೆಟ್ ಕಿತ್ತರು.

ಸದ್ಯ 286 ರನ್​ಗಳ ಟಾರ್ಗೆಟ್ ಬೆನ್ನಟ್ಟಿರುವ ಜಾರ್ಖಂಡ್ ಆರಂಭದಲ್ಲೇ ಪ್ರಮುಖ 2 ವಿಕೆಟ್ ಕಳೆದುಕೊಂಡಿದೆ. ನಾಯಕ ಇಶಾನ್ ಕಿಶನ್ 11 ರನ್​ಗೆ ಔಟ್ ಆದರೆ, ಆನಂದ್ ಸಿಂಗ್ 32 ರನ್ ಗಳಿಸಿ ಗೌತಮ್​ಗೆ ವಿಕೆಟ್ ಒಪ್ಪಿಸಿದ್ದಾರೆ.

First published: