Video: ಸೂರ್ಯಕುಮಾರ್ ಔಟ್ ಅಥವಾ ನಾಟೌಟ್..? ವಿಡಿಯೋ ನೋಡಿ ನೀವೇ ನಿರ್ಧರಿಸಿ..!

Dawid Malan

Dawid Malan

ಹುಲ್ ಜೊತೆಗೂಡಿ ಸೂರ್ಯಕುಮಾರ್ ಯಾದವ್ ಪವರ್​ಪ್ಲೇ ಮುಕ್ತಾಯದ ವೇಳೆಗೆ ತಂಡದ ಮೊತ್ತವನ್ನು 45 ಕ್ಕೆ ತಂದು ನಿಲ್ಲಿಸಿದರು. ಪವರ್​ಪ್ಲೇ ಬಳಿಕ ಸೂರ್ಯ ಅಬ್ಬರಿಸಲಾರಂಭಿಸಿದರೆ, ಕೆಎಲ್ ರಾಹುಲ್ ಎಚ್ಚರಿಕೆಯ ಆಟಕ್ಕೆ ಒತ್ತು ನೀಡಿದರು. ಇದಾಗ್ಯೂ 8ನೇ ಓವರ್​ನಲ್ಲಿ ಬೆನ್​ ಸ್ಟೋಕ್ಸ್​ಗೆ ವಿಕೆಟ್ ಒಪ್ಪಿಸಿ ರಾಹುಲ್ ನಿರಾಸೆ ಮೂಡಿಸಿದರು.

ಮುಂದೆ ಓದಿ ...
  • Share this:

    ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕನೇ ಟಿ20 ಪಂದ್ಯದಲ್ಲಿ ಮೂಡಿಬಂದ ತೀರ್ಪು ಹೊಸ ಚರ್ಚೆಗೆ ಕಾರಣವಾಗಿದೆ. ಚೆಂಡು ನೆಲಕ್ಕೆ ತಾಗಿದರೂ ಸೂರ್ಯಕುಮಾರ್ ಯಾದವ್​ರನ್ನು ಔಟ್ ಎಂದು ಘೋಷಿಸಿದ್ದು, ಇದೀಗ ಅಂಪೈರ್ ತೀರ್ಮಾನದ ವಿರುದ್ದ ಪ್ರಶ್ನೆಗಳು ಮೂಡುವಂತೆ ಮಾಡಿದೆ.


    ಹೌದು, ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಅವಕಾಶ ಪಡೆದ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಆರಂಭಿಕರಾಗಿ ಕಣಕ್ಕಿಳಿದರು. ಆದಿಲ್ ರಶೀದ್ ಅವರ ಮೊದಲ ಎಸೆತದಲ್ಲೇ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಹಿಟ್​ಮ್ಯಾನ್ ತಂಡದ ಖಾತೆ ತೆರೆದರು.


    ನಾಲ್ಕನೇ ಓವರ್​ನಲ್ಲಿ ರೋಹಿತ್ ಶರ್ಮಾ ಜೋಫ್ರಾ ಆರ್ಚರ್​ ಕ್ಯಾಚ್ ನೀಡಿ ನಿರ್ಗಮಿಸಿದರು. ಇನ್ನು ಚೊಚ್ಚಲ ಬಾರಿ ಟೀಮ್ ಇಂಡಿಯಾ ಪರ ಬ್ಯಾಟಿಂಗ್​ಗೆ ಇಳಿದ ಸೂರ್ಯಕುಮಾರ್ ಯಾದವ್ ಭರ್ಜರಿ ಸಿಕ್ಸರ್​ನೊಂದಿಗೆ ತಮ್ಮ ಅಂತಾರಾಷ್ಟ್ರೀಯ ಖಾತೆ ತೆರೆದಿದ್ದು ವಿಶೇಷ.



    ಅಲ್ಲದೆ ರಾಹುಲ್ ಜೊತೆಗೂಡಿ ಸೂರ್ಯಕುಮಾರ್ ಯಾದವ್ ಪವರ್​ಪ್ಲೇ ಮುಕ್ತಾಯದ ವೇಳೆಗೆ ತಂಡದ ಮೊತ್ತವನ್ನು 45 ಕ್ಕೆ ತಂದು ನಿಲ್ಲಿಸಿದರು. ಪವರ್​ಪ್ಲೇ ಬಳಿಕ ಸೂರ್ಯ ಅಬ್ಬರಿಸಲಾರಂಭಿಸಿದರೆ, ಕೆಎಲ್ ರಾಹುಲ್ ಎಚ್ಚರಿಕೆಯ ಆಟಕ್ಕೆ ಒತ್ತು ನೀಡಿದರು. ಇದಾಗ್ಯೂ 8ನೇ ಓವರ್​ನಲ್ಲಿ ಬೆನ್​ ಸ್ಟೋಕ್ಸ್​ಗೆ ವಿಕೆಟ್ ಒಪ್ಪಿಸಿ ರಾಹುಲ್ ನಿರಾಸೆ ಮೂಡಿಸಿದರು.


    ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ ಆದಿಲ್ ರಶೀದ್ ಎಸೆತದಲ್ಲಿ ಮುನ್ನುಗ್ಗಿ ಹೊಡೆಯಲು ಬಂದು ಸ್ಟಂಪ್ ಆಗಿ ಹೊರನಡೆದರು. ಇದರ ಬಳಿಕ ಜೊತೆಯಾದ ಸೂರ್ಯಕುಮಾರ್ ಯಾದವ್-ರಿಷಭ್ ಪಂತ್ ತಂಡದ ಮೊತ್ತವನ್ನು 10 ಓವರ್​ ಮುಕ್ತಾಯದ ವೇಳೆ 75 ಕ್ಕೇರಿಸಿದರು. ಅಲ್ಲದೆ ಕೇವಲ 28 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ ಸೂರ್ಯುಕುಮಾರ್ ಯಾದವ್ ಬ್ಯಾಟ್ ಮೇಲೆಕ್ಕೆತ್ತಿದರು.


    ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಸೂರ್ಯಕುಮಾರ್ ಯಾದವ್ ಅಂತಿಮ ಓವರ್​ಗಳಲ್ಲಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದರು. ಅಲ್ಲದೆ 14ನೇ ಓವರ್​ನ ಮೊದಲ ಎಸೆತದಲ್ಲೇ ಸಿಕ್ಸ್​ ಸಿಡಿಸಿದ್ದರು. ನಂತರದ ಎಸೆತದಲ್ಲಿ ಮತ್ತೊಂದು ಭರ್ಜರಿ ಹೊಡೆತಕ್ಕೆ ಕೈಹಾಕಿದರೂ, ಚೆಂಡು ಬೌಂಡರಿ ಲೈನ್​ನಿಂದ ಓಡಿ ಬಂದ ಡೇವಿಡ್ ಮಲಾನ್ ಕೈ ಸೇರಿತ್ತು.


    ಇತ್ತ ಫೀಲ್ಡ್​ ಅಂಪೈರ್ ಔಟ್ ಎಂದು ಘೋಷಿಸಿದ್ದರು. ಇದಾಗ್ಯೂ ಥರ್ಡ್​ ಅಂಪೈರ್​ ಮನವಿ ಮಾಡಲಾಯಿತು. ಈ ವೇಳೆ ಪರಿಶೀಲಿಸಿದಾಗ ಚೆಂಡು ಮೈದಾನಕ್ಕೆ ತಾಗುತ್ತಿರುವುದು ಕಾಣುತ್ತಿತ್ತು. ಹಲವು ಬಾರಿ ಪರಿಶೀಲಿಸಿದರೂ ಬೆರಳುಗಳ ಎಡೆಯಲ್ಲಿ ಚೆಂಡು ನೆಲಕ್ಕೆ ತಾಗಿರುವುದು ಸ್ಫಷ್ಟವಾಗಿತ್ತು. ಆದರೆ ಅದನ್ನೇ ಪುರಾವೆಯಾಗಿಸುವ ಅವಕಾಶವಿರಲಿಲ್ಲ. ಹೀಗಾಗಿ ಅಂತಿಮ ತೀರ್ಪು ಪ್ರಕಟಿಸುವ ಅವಕಾಶ ಮೂರನೇ ಅಂಪೈರ್​ಗಿತ್ತು. ಇದಾಗ್ಯೂ ಮೂರನೇ ಅಂಪೈರ್ ಸೂರ್ಯಕುಮಾರ್ ಅವರನ್ನು ಔಟ್ ಎಂದು ಘೋಷಿಸಿದರು.


    ಇದಕ್ಕೆ ಮುಖ್ಯ ಕಾರಣ ಆನ್-ಫೀಲ್ಡ್ ಅಂಪೈರ್ ಮೊದಲೇ ನೀಡಿದ ತೀರ್ಪು. ಹೌದು, ಚೆಂಡು ಡೇವಿಡ್ ಮಲಾನ್ ಕೈ ಸೇರುತ್ತಿದ್ದಂತೆ ಫೀಲ್ಡ್ ಅಂಪೈರ್​ ಔಟ್ ನೀಡಿದ್ದರು. ಇತ್ತ ರೀಪ್ಲೇನಲ್ಲಿ ಔಟ್ ಅಥವಾ ನಾಟೌಟ್ ಎನ್ನಲು ಸರಿಯಾದ ಪುರಾವೆ ಕೂಡ ಇರಲಿಲ್ಲ. ಹೀಗಾಗಿ 3ನೇ ಅಂಪೈರ್​ ಫೀಲ್ಡ್​ ಅಂಪೈರ್​ನ ತೀರ್ಪನ್ನೇ ಮುಂದುವರೆಸಿದರು.



    ಇತ್ತ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೂರನೇ ಅಂಪೈರ್ ತೀರ್ಮಾನಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಒಟ್ಟಿನಲ್ಲಿ ಚೆಂಡು ನೆಲಕ್ಕೆ ತಾಗಿರುವುದು ಸ್ಪಷ್ಟವಾಗಿ ಕಂಡರೂ 31 ಎಸೆತಗಳಲ್ಲಿ 3 ಸಿಕ್ಸರ್ 6 ಬೌಂಡರಿಗಳೊಂದಿಗೆ ಸೂರ್ಯಕುಮಾರ್​ ತಮ್ಮ 57 ರನ್​ಗಳ ತಮ್ಮ ಇನಿಂಗ್ಸ್​ ಅಂತ್ಯಗೊಳಿಸಬೇಕಾಯಿತು.

    Published by:zahir
    First published: