Suresh Raina: ಪೊಲೀಸ್ ಬಂಧನದ ಬಗ್ಗೆ ವಿವರಣೆ ನೀಡಿದ ಸುರೇಶ್ ರೈನಾ..!

Suresh Raina

Suresh Raina

ಆಡಳಿತ ಮಂಡಳಿ ನಿಗದಿ ಪಡಿಸಿರುವ ನಿಯಮಗಳನ್ನು ಹಾಗೂ ಕಾನೂನುಗಳನ್ನು ಗೌರವದಿಂದ ಪಾಲಿಸುತ್ತೇನೆ. ಅದರಂತೆ ಭವಿಷ್ಯದಲ್ಲೂ ನಡೆದುಕೊಳ್ಳುತ್ತೇನೆ ಎಂದು ಸುರೇಶ್‌ ರೈನಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

  • Share this:

    ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ಮಾಜಿ ಆಟಗಾರ ಸುರೇಶ್ ರೈನಾ ಅವರನ್ನು ಮುಂಬೈ ಪೊಲೀಸರು ಮಂಗಳವಾರ ಬಂಧಿಸಿದ್ದರು. ಇದರ ಬೆನ್ನಲ್ಲೇ ಜಾಮೀನು ಪಡೆದ ಹೊರಬಂದ ರೈನಾ, ನಡೆದಿರುವ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ನಾನು ಮುಂಬೈಗೆ ಶೂಟಿಂಗ್​ಗಾಗಿ ಬಂದಿದ್ದೆ. ಇದೇ ವೇಳೆ ಸ್ನೇಹಿತರೊಬ್ಬರು ಭೋಜನಕ್ಕಾಗಿ ಆಹ್ವಾನಿಸಿದ್ದರು. ಹೀಗಾಗಿ ಅಂದು ಪಾರ್ಟಿಯಲ್ಲಿ ಕಾಣಿಸಿಕೊಂಡಿರುವುದಾಗಿ ರೈನಾ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.


    ಅಲ್ಲದೆ ನಾನು ಮುಂಬೈಗೆ ಶೂಟಿಂಗ್​ಗಾಗಿ ಮುಂಬೈ ಬಂದಿದ್ದರಿಂದ ಇಲ್ಲಿನ ಕೋವಿಡ್ ನಿಯಮಗಳ ಬಗ್ಗೆ ಕೂಡ ಅರಿವಿರಲಿಲ್ಲ. ಶೂಟಿಂಗ್ ಮುಗಿಸಿ ಬೇಗನೆ ದಿಲ್ಲಿಗೆ ಮರಳಬೇಕು ಅಂದುಕೊಂಡಿದ್ದೆ. ಆದರೆ ತಡವಾದ ಕಾರಣ, ಸ್ನೇಹಿತರ ಆಹ್ವಾನ ಕೂಡ ಸ್ವೀಕರಿಸಿದೆ. ಆದರೆ ನಾನು ಸ್ಥಳೀಯ ಸಮಯ ಹಾಗೂ ಕೋವಿಡ್‌ ಮಾರ್ಗಸೂಚಿಗಳನ್ನು ಗಮನಿಸಿರಲಿಲ್ಲ ಎಂದು ರೈನಾ ತಿಳಿಸಿದ್ದಾರೆ.


    ಈ ಬಗ್ಗೆ ಅರಿವಾದಾದ ತಕ್ಷಣವೇ ಅಧಿಕಾರಿಗಳು ರೂಪಿಸಿದ ಕಾರ್ಯ ಸೂಚಿಗಳನ್ನು ಪಾಲಿಸಿದ್ದೇನೆ. ಅನಿರೀಕ್ಷಿತವಾಗಿ ನಡೆದಿರುವ ಘಟನೆ ಬಗ್ಗೆ ವಿಷಾದಿಸುತ್ತೇನೆ. ಹಾಗೆಯೇ ಆಡಳಿತ ಮಂಡಳಿ ನಿಗದಿ ಪಡಿಸಿರುವ ನಿಯಮಗಳನ್ನು ಹಾಗೂ ಕಾನೂನುಗಳನ್ನು ಗೌರವದಿಂದ ಪಾಲಿಸುತ್ತೇನೆ. ಅದರಂತೆ ಭವಿಷ್ಯದಲ್ಲೂ ನಡೆದುಕೊಳ್ಳುತ್ತೇನೆ ಎಂದು ಸುರೇಶ್‌ ರೈನಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.


    ಬ್ರಿಟನ್‌ನಿಂದ ಕೊರೋನಾ ಮಾದರಿ ಮತ್ತೊಂದು ವೈರಸ್‌ ಹರಡುತ್ತಿರುವ ಕಾರಣ ಮಹಾರಾಷ್ಟ್ರ ಸರ್ಕಾರವು ಹಲವು ರಾತ್ರಿ ಕರ್ಫ್ಯೂ ವಿಧಿಸಿತ್ತು. ಆದರೆ, ಮುಂಬೈ ಕ್ಲಬ್‌ನ ಸಿಬ್ಬಂದಿ ನಿಯಮಗಳನ್ನು ಉಲ್ಲಂಘಿಸಿದ್ದರು. ಇದೇ ವೇಳೆ ಕ್ಲಬ್​ನಲ್ಲಿದ್ದ ರೈನಾ ಸೇರಿದಂತೆ 34 ಮಂದಿ ಸೆಲೆಬ್ರಿಟಿಗಳನ್ನು ಬಂಧಿಸಲಾಗಿತ್ತು.

    Published by:zahir
    First published: