• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • ರಶೀದ್ ಖಾನ್​ ಔಟ್​ಗಾಗಿ ಅಪೀಲ್ ಮಾಡಿದಾಗ ಅಂಪೈರ್ ಅರ್ಧ ಕೈ ಎತ್ತಿ ಮಾಡಿದ್ದೇನು ಗೊತ್ತಾ?

ರಶೀದ್ ಖಾನ್​ ಔಟ್​ಗಾಗಿ ಅಪೀಲ್ ಮಾಡಿದಾಗ ಅಂಪೈರ್ ಅರ್ಧ ಕೈ ಎತ್ತಿ ಮಾಡಿದ್ದೇನು ಗೊತ್ತಾ?

ರಶೀದ್ ಖಾನ್ ಹಾಗೂ ಅಂಪೈರ್

ರಶೀದ್ ಖಾನ್ ಹಾಗೂ ಅಂಪೈರ್

ರಶೀದ್ ಖಾನ್ ಎಸೆದ ಗೂಗ್ಲಿಯನ್ನು ಸರಿಯಾಗಿ ಕನೆಕ್ಟ್​​​ ಮಾಡುವಲ್ಲಿ ಬ್ಯೂ ​ ವೆಬ್​ಸ್ಟೆರ್ ಎಡವಿದರು. ಚೆಂಡು ಬ್ಯಾಟ್ಸ್​ಮನ್​​ ಪಾಡ್​ಗೆ ತಾಗಿದ ಪರಿಣಾಮ ರಶೀದ್ ಖಾನೆ ಸೇರಿ ತಂಡದ ಇತರೆ ಆಟಗಾರರು ಎಲ್​ಬಿ ಔಟ್​ಗಾಗಿ ಅಂಪೈರ್​ಗೆ ಮನವಿ ಮಾಡಿದರು.

  • Share this:

ಆಸ್ಟ್ರೇಲಿಯಾದಲ್ಲಿ ಸಾಗುತ್ತಿರುವ ಬಿಗ್​​ಬ್ಯಾಷ್ ಟಿ-20 ಲೀಗ್ ದಿನದಿಂದ ದಿನಕ್ಕೆ ರೋಚಕತೆ ಪಡೆಯುತ್ತಿದೆ. ಇತ್ತೀಚೆಗಷ್ಟೆ ಗ್ಲೆನ್ ಮ್ಯಾಕ್ಸ್​ವೆಲ್​, ಡೇಲ್ ಸ್ಟೈನ್ ಅಬ್ಬರಿಸಿ ಭಾರೀ ಸದ್ದು ಮಾಡಿದ್ದರು.

ಸದ್ಯ ಅಡಿಲೇಡ್ ಸ್ಟ್ರೈಕರ್ಸ್​​ ಹಾಗೂ ಮೆಲ್ಬೋರ್ನ್​​ ರೆನೆಗೆಡ್ಸ್​ ನಡುವಣ ಪಂದ್ಯದಲ್ಲಿ ನಡೆದ ಘಟನೆಯ ವಿಡಿಯೋ ಒಂದು ಎಲ್ಲಡೆ ವೈರಲ್ ಆಗುತ್ತಿದೆ.

ನಿನ್ನೆ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಡಿಲೇಡ್ ತಂಡ 20 ಓವರ್​ನಲ್ಲಿ 6 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿತು. ಪಿಲಿಪ್ ಸಲ್ಟ್​ 26 ಎಸೆತಗಳಲ್ಲಿ 54 ರನ್​ ಸಿಡಿಸಿದರೆ, ನಾಯಕ ಅಲೆಕ್ಸ್​ ಕ್ಯಾರಿ 37 ಎಸೆತಗಳಲ್ಲಿ 41 ರನ್ ಗಳಿಸಿದರು. ಮೆಲ್ಬೋರ್ನ್​ ಪರ ಕೇನ್ ರಿಚರ್ಡಸನ್ 4 ವಿಕೆಟ್ ಕಿತ್ತರು.

AUS vs NZ Boxing Day Test: ಬಾಕ್ಸಿಂಗ್ ಟೆಸ್ಟ್​ ಗೆದ್ದು ಬೀಗಿದ ಆಸ್ಟ್ರೇಲಿಯಾ; ಸರಣಿ ಕಾಂಗರೂಗಳ ಪಾಲು

 



156 ರನ್​ಗಳ ಸಾಧಾರಣ ಗುರಿ ಬೆನ್ನಟ್ಟಿದ ಮೆಲ್ಬೋರ್ನ್​ ತಂಡ ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು.ನಾಯಕ ಆ್ಯರೋನ್ ಫಿಂಚ್ ಅರ್ಧಶತಕ ಬಾರಿಸಿದ್ದು ಬಿಟ್ಟರೆ, ಬ್ಯೂ ವೆಬ್​ಸ್ಟೆರ್ ಅಜೇಯ 37 ರನ್ ಗಳಿಸಿದರಷ್ಟೆ. 20 ಓವರ್​ನಲ್ಲಿ 8 ವಿಕೆಟ್ ಕಳೆದುಕೊಂಡು 137 ರನ್ ಗಳಿಸಲಷ್ಟೆ ಶಕ್ತವಾಗಿ ಸೋಲೊಪ್ಪಿಗೊಂಡಿತು.

ಈ ನಡುವೆ ಮೆಲ್ಬೋರ್ನ್​ ತಂಡ ಟಾರ್ಗೆಟ್ ಬೆನ್ನಟ್ಟುತ್ತಿದ್ದ 17ನೇ ಓವರ್​ನಲ್ಲಿ ಘಟನೆಯೊಂದು ನಡೆಯಿತು. ರಶೀದ್ ಖಾನ್ ಎಸೆದ ಗೂಗ್ಲಿಯನ್ನು ಸರಿಯಾಗಿ ಕನೆಕ್ಟ್​​​ ಮಾಡುವಲ್ಲಿ ಬ್ಯೂ ​ ವೆಬ್​ಸ್ಟೆರ್ ಎಡವಿದರು. ಚೆಂಡು ಬ್ಯಾಟ್ಸ್​ಮನ್​​ ಪಾಡ್​ಗೆ ತಾಗಿದ ಪರಿಣಾಮ ರಶೀದ್ ಖಾನೆ ಸೇರಿ ತಂಡದ ಇತರೆ ಆಟಗಾರರು ಎಲ್​ಬಿ ಔಟ್​ಗಾಗಿ ಅಂಪೈರ್​ಗೆ ಮನವಿ ಮಾಡಿದರು.

ಒಂದು ಪಂದ್ಯದಲ್ಲಿ ಆಕರ್ಷಕ ಶತಕ, ಜೊತೆಗೆ 4 ವಿಕೆಟ್; ಭಾರತದ ಮಾಜಿ ಆಟಗಾರರ ಸಾಧನೆ ಇಲ್ಲಿದೆ ನೋಡಿ!

 


ಈ ಸಂದರ್ಭ ಅಂಪೈರ್ ಡೇವಿಡ್​ಸನ್​ ಔಟ್ ಎಂದು ಅರ್ಧ ಕೈ ಮೇಲೆತ್ತಿದರು. ಆದರೆ, ಅರ್ಧ ಕೈ ಮೇಲೆತ್ತಿದ ಹೊತ್ತಿಗೆ ಔಟ್ ಅಲ್ಲ ಎಂದು ಅಂಪೈರ್​ಗೆ ಅನಿಸಿದೆ. ಬಳಿಕ ಕೈ ಯನ್ನು ಮೂಗಿನ ಮೇಲೆ ಉಜ್ಜುವ ಮೂಲಕ ಇದು ನಾಟೌಟ್ ಎಂದಿದ್ದಾರೆ.

ಅಂಪೈರ್ ಕೈ ಎತ್ತಲು ಶುರು ಮಾಡಿದ್ದನ್ನು ಗಮನಿಸಿದ ರಶೀದ್ ಖಾನ್ ಅದಾಗಲೆ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಇತ್ತ ಬ್ಯಾಟ್ಸ್​​ಮನ್​ ಕೂಡ ತಾನು ಔಟ್ ಎಂದು ನಿರಾಸೆಯಾಗಿದ್ದರು. ಬಳಿಕ ಫೀಲ್ಡಿಂಗ್ ತಂಡದ ಬಳಿಕ ತಾನು ಔಟ್ ಕೊಟ್ಟಿಲ್ಲ, ಇದು ನಾಟೌಟ್ ಎಂದು ಅಂಪೈರ್​​ ಹೇಳಿದರು.

 


ಕ್ರಿಕೆಟ್ ದಿಗ್ಗಜರಿಂದ ಟೀಕೆಗೆ ಗುರಿಯಾದ ಶ್ರೇಯಸ್ ಐಯರ್- ಶಿವಂ ದುಬೆ; ಅಷ್ಟಕ್ಕು ಆಗಿದ್ದೇನು?

ಸದ್ಯ ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಟ್ವಿಟ್ಟರ್​​ನಲ್ಲಂತು ಸಾಕಷ್ಟು ಕಮೆಂಟ್​ಗಳು ಬರುತ್ತಿವೆ. ಅಂತಿಮವಾಗಿ ಈ ಪಂದ್ಯದಲ್ಲಿ ಅಡಿಲೇಡ್ ಸ್ಟ್ರೈಕರ್ಸ್​​ ತಂಡ 18 ರನ್​ಗಳ ಭರ್ಜರಿ ಜಯ ಸಾಧಿಸಿತು.

 


 

Published by:Vinay Bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು