news18-kannada Updated:February 21, 2021, 8:34 PM IST
rahul tewatia
ಭಾರತ ಮತ್ತು ಇಂಗ್ಲೆಂಡ್ ನಡುವಣ 5 ಪಂದ್ಯಗಳ ಟಿ 20 ಸರಣಿಗೆ ಟೀಮ್ ಇಂಡಿಯಾ ಘೋಷಿಸಲಾಗಿದೆ. 19 ಸದಸ್ಯರ ಈ ಬಳಗದಲ್ಲಿ ಹರಿಯಾಣದ ಆಲ್ರೌಂಡರ್ ರಾಹುಲ್ ತಿವಾಠಿಯಾ ಆಯ್ಕೆಯಾಗಿದ್ದಾರೆ. ಆಯ್ಕೆಯ ಮರುದಿನವೇ, ವಿಜಯ ಹಜಾರೆ ಟ್ರೋಫಿಯಲ್ಲಿ ರಾಹುಲ್ ತಿವಾಠಿಯಾ ಅಬ್ಬರಿಸುವ ಮೂಲಕ ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಹೌದು, ಕೋಲ್ಕತಾದಲ್ಲಿ ನಡೆದ ಚಂಡೀಗಢ ವಿರುದ್ಧದ ಪಂದ್ಯದಲ್ಲಿ ರಾಹುಲ್ ತಿವಾಠಿಯಾ ಕೇವಲ 39 ಎಸೆತಗಳಲ್ಲಿ 73 ರನ್ ಚಚ್ಚಿದ್ದಾರೆ. ಇದರಲ್ಲಿ 4 ಬೌಂಡರಿ ಹಾಗೂ 6 ಸಿಕ್ಸರ್ಗಳು ಒಳಗೊಂಡಿತ್ತು.
ರಾಹುಲ್ ತಿವಾಠಿಯಾ ಹಾಗೂ ಹಿಮಾಂಶು ರಾಣಾ (102) ಅಬ್ಬರದ ನೆರವಿನಿಂದ ಹರಿಯಾಣ ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 299 ರನ್ಗಳ ಬೃಹತ್ ಮೊತ್ತ ಪೇರಿಸಿತು. ಈ ಕಠಿಣ ಗುರಿಯನ್ನು ಬೆನ್ನತ್ತಿದ ಚಂಡೀಗಢ ಪರ ಮನನ್ ವೊಹ್ರಾ (117) ಆಕರ್ಷಕ ಶತಕ ಸಿಡಿಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ಅಂತಿಮ ಹಂತದಲ್ಲಿ ಕ್ರೀಸ್ಗಿಳಿದ ಹಾಗೂ ಅಂಕಿತ್ ಕೌಶಿಕ್ 66 ಎಸೆತಗಳಲ್ಲಿ 78 ರನ್ ಸಿಡಿಸಿ, ಅಂತಿಮ ಓವರ್ನಲ್ಲಿ 300 ರನ್ ಗುರಿ ಮುಟ್ಟುವ ಮೂಲಕ ತಂಡಕ್ಕೆ 3 ವಿಕೆಟ್ಗಳ ರೋಚಕ ಜಯ ತಂದುಕೊಟ್ಟರು.
Published by:
zahir
First published:
February 21, 2021, 8:34 PM IST