• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • 2011 ವಿಶ್ವಕಪ್ ಫೈನಲ್ ಫಿಕ್ಸಿಂಗ್ ಪ್ರಕರಣ: ಸಾಕ್ಷ್ಯವಿಲ್ಲ ಎಂದು ತನಿಖೆ ಕೈ ಬಿಟ್ಟ ಶ್ರೀಲಂಕಾ!

2011 ವಿಶ್ವಕಪ್ ಫೈನಲ್ ಫಿಕ್ಸಿಂಗ್ ಪ್ರಕರಣ: ಸಾಕ್ಷ್ಯವಿಲ್ಲ ಎಂದು ತನಿಖೆ ಕೈ ಬಿಟ್ಟ ಶ್ರೀಲಂಕಾ!

2011 ವಿಶ್ವಕಪ್ ಗೆದ್ದವೇಳೆ ಸಂಭ್ರಮದಲ್ಲಿರುವ ಟೀಂ ಇಂಡಿಯಾ ಆಟಗಾರರು.

2011 ವಿಶ್ವಕಪ್ ಗೆದ್ದವೇಳೆ ಸಂಭ್ರಮದಲ್ಲಿರುವ ಟೀಂ ಇಂಡಿಯಾ ಆಟಗಾರರು.

ಪ್ರಕರಣ ಕುರಿತು ಅಂದು ತಂಡಲ್ಲಿದ್ದ ಮಾಜಿ ಆಟಗಾರರು, ಆಯ್ಕೆ ಸಮಿತಿ ಮಾಜಿ ಮುಖ್ಯಸ್ಥರನ್ನ ವಿಚಾರಣೆಗೊಳಪಡಿಸಲಾಗಿತ್ತು. ಈ ವೇಳೆ ಆಟಗಾರರು ಮತ್ತು ಅಧಿಕಾರಿಗಳು ನೀಡಿದ ಉತ್ತರ, ತೃಪ್ತಿ ತಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

  • Share this:

    ಶ್ರೀಲಂಕಾ ಪೊಲೀಸರು 2011ರ ವಿಶ್ವಕಪ್​ ಫೈನಲ್​ ಮ್ಯಾಚ್​ ಫಿಕ್ಸಿಂಗ್ ಆರೋಪ ಸಂಬಂಧ ನಡೆಸುತ್ತಿದ್ದ ತನಿಖೆಯನ್ನು ಕೈ ಬಿಟ್ಟಿದ್ದಾರೆ. ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದ ತನಿಖೆಯಿಂದ ಹಿಂದೆ ಸರಿಯುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅಂದಿನ ತಂಡದ ನಾಯಕ ಕುಮಾರ ಸಂಗಕ್ಕರ ಮತ್ತು ಪ್ರಮುಖ ಬ್ಯಾಟ್ಸ್‌ಮನ್‌ ಮಾಹೇಲ ಜಯವರ್ಧನೆ ಅವರನ್ನು ಸುದೀರ್ಘ‌ ವಿಚಾರಣೆ ನಡೆಸಿದ ಬಳಿಕ ಪೊಲೀಸರು ಈ ಹೇಳಿಕೆ ನೀಡಿದ್ದಾರೆ.

    ಶ್ರೀಲಂಕಾದ ಮಾಜಿ ಕ್ರೀಡಾ ಸಚಿವರು 2011ರ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಮ್ಯಾಚ್‌ ಫಿಕ್ಸಿಂಗ್‌ ನಡೆದಿದೆ. ಶ್ರೀಲಂಕಾ ತಂಡ ಫೈನಲ್‌ನಲ್ಲಿ ಬೇಕೆಂದೆ ಟೀಂ ಇಂಡಿಯಾ ವಿರುದ್ಧ ಸೋತಿತ್ತು ಎಂದು ಗಂಭೀರ ಆರೋಪ ಮಾಡಿದ್ದರು.

    Kuldeep Yadav: ನನಗೆ ಅತ್ಯಂತ ಸವಾಲೆನಿಸಿದ ಇಬ್ಬರು ಬ್ಯಾಟ್ಸ್​ಮನ್​ಗಳು ಇವರೇ..!

    ಟೂರ್ನಿ ಮುಗಿದು 10 ವರ್ಷಗಳು ಕಳೆದ ನಂತರ ಇಂಥದ್ದೊಂದು ಗಂಭೀರ ಆರೋಪ ಹೊರಬಂದಿದ್ದನ್ನು ಶ್ರೀಲಂಕಾದ ಮಾಜಿ ಕ್ರಿಕೆಟಿಗರಾದ ಹಾಗೂ ಆ ವಿಶ್ವಕಪ್‌ನಲ್ಲಿ ಆಡಿದ್ದ ಕುಮಾರ ಸಂಗಕ್ಕಾರ ಮತ್ತು ಮತ್ತು ಮಹೇಲಾ ಜಯವರ್ಧನೆ ಕಟುವಾಗಿ ಟೀಕಿಸಿದ್ದರು.

    ಪ್ರಕರಣ ಕುರಿತು ಅಂದು ತಂಡಲ್ಲಿದ್ದ ಮಾಜಿ ಆಟಗಾರರು, ಆಯ್ಕೆ ಸಮಿತಿ ಮಾಜಿ ಮುಖ್ಯಸ್ಥರನ್ನ ವಿಚಾರಣೆಗೊಳಪಡಿಸಲಾಗಿತ್ತು. ಈ ವೇಳೆ ಆಟಗಾರರು ಮತ್ತು ಅಧಿಕಾರಿಗಳು ನೀಡಿದ ಉತ್ತರ, ತೃಪ್ತಿ ತಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಹೀಗಾಗಿ ತನಿಖೆಯನ್ನ ಕೈಬಿಟ್ಟಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    “ನಾವು ಕೇಂದ್ರ ಕ್ರೀಡಾ ಸಚಿವಾಲಯದ ಕಾರ್ಯದರ್ಶಿಗೆ ಈಗಾಗಲೇ ವರದಿ ಸಲ್ಲಿಸಿದ್ದೇವೆ. ನಡೆದ ಆಂತರಿಕ ಸಂವಾದದ ಬಳಿಕ ನಾವು ತನಿಖೆಯನ್ನು ಮುಗಿಸಿದ್ದೇವೆ. ಪಂದ್ಯ ಫಿಕ್ಸ್‌ ಆಗಿರುವುದಕ್ಕೆ ನಮಗೆ ಯಾವುದೇ ಸಾಕ್ಷ್ಯಗಳು ಲಭಿಸಿಲ್ಲ“ ಎಂದು ಪೊಲೀಸ್‌ ಮಹಾನಿರ್ದೇಶಕ ಜಗತ್‌ ಫೊನ್ಸೇಕ ತಿಳಿಸಿದ್ದಾರೆ.

    ABD ಫೇವರೇಟ್​ IPL​ ತಂಡದ ನಾಯಕ ಕೊಹ್ಲಿ ಅಲ್ಲ.. ಮತ್ಯಾರು?


    ಈ ನಡುವೆ ಅಭಿಮಾನಿಗಳ ಪ್ರತಿಭಟನೆಗೆ ಶ್ರೀಲಂಕಾ ಸರ್ಕಾರ ಕರಗಿತ ಎಂಬ ಮಾತುಗಳೂ ಕೇಳಿಬರುತ್ತಿವೆ. ಶ್ರೀಲಂಕಾ ತಂಡದ ಮಾಜಿ ಕ್ರಿಕೆಟಿಗರನ್ನು ನಿರಂತರವಾಗಿ ವಿಚಾರಣೆಗೊಳಪಡಿಸಿದ್ದು, ಲಂಕಾ ಕ್ರಿಕೆಟ್ ಫ್ಯಾನ್ಸ್​ನ ಕೆರಳಿಸಿತ್ತು. ವಿಚಾರಣೆ ನೆಪದಲ್ಲಿ ಆಟಗಾರರಿಗೆ ಗಂಟೆಗಳ ಕಾಲ ಮಾನಸಿಕ ಹಿಂಸೆ ನೀಡಲಾಗುತ್ತದೆ. ಈ ಮೂಲಕ ಲೆಜೆಂಡರಿ ಆಟಗಾರರಿಗೆ ಅವಮಾನ ಮಾಡಲಾಗುತ್ತದೆ ಎಂದು ಶ್ರೀಲಂಕಾ ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಶ್ರೀಲಂಕಾ ಕ್ರಿಕೆಟ್​ ಬೋರ್ಡ್​ ಆಫೀಸ್​ ಮುಂದೆ ಪ್ರತಿಭಟನೆ ನಡೆಸಿ, ಶ್ರೀಲಂಕಾ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಘಟನೆ ಕೂಡ ನಡೆದಿತ್ತು.

    Published by:Vinay Bhat
    First published: