• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • IPL 2021 Promo: ಹೊಸ ಅವತಾರದಲ್ಲಿ ಧೋನಿ.. ಅಸಲಿ ಪಿಕ್ಚರ್ ಇನ್ನೂ ಬಾಕಿ ಇದೆ ಎಂದ CSK ಕ್ಯಾಪ್ಟನ್

IPL 2021 Promo: ಹೊಸ ಅವತಾರದಲ್ಲಿ ಧೋನಿ.. ಅಸಲಿ ಪಿಕ್ಚರ್ ಇನ್ನೂ ಬಾಕಿ ಇದೆ ಎಂದ CSK ಕ್ಯಾಪ್ಟನ್

ಹೊಸ ಲುಕ್​​ನಲ್ಲಿ ಧೋನಿ

ಹೊಸ ಲುಕ್​​ನಲ್ಲಿ ಧೋನಿ

MS Dhoni: ಇಂಟರ್ವಲ್​​ ನಂತರ ದ್ವಿತೀಯಾರ್ಧದಲ್ಲಿ ಬಿರುಗಾಳಿ ಬರಲಿದೆ. ಇದರಲ್ಲಿ ಡ್ರಾಮಾ, ಸಸ್ಪೆನ್ಸ್, ಕ್ಲೈಮ್ಯಾಕ್ಸ್, ಗಬ್ಬರ್ (ಶಿಖರ್ ಧವನ್), ಹಿಟ್​ಮ್ಯಾನ್​​ (ರೋಹಿತ್ ಶರ್ಮಾ) ಎಲ್ಲರೂ ಇದ್ದಾರೆ. ಅಸಲಿ ಪಿಕ್ಷರ್​​ ಇನ್ನು ಬಾಕಿ ಇದೆ ಎನ್ನುವ ಮೂಲಕ ನೋಡುಗರಲ್ಲಿ ಕುತೂಹಲ ಮೂಡಿಸಿದ್ದಾರೆ.

ಮುಂದೆ ಓದಿ ...
  • Share this:

ಗೋಲ್ಡನ್​​​ ಮತ್ತು ನೇರಳೆ ಬಣ್ಣದ ಬಟ್ಟೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕ್ಯಾಪ್ಟನ್​​ ಮಹೇಂದ್ರ ಸಿಂಗ್ ಧೋನಿ ಐಪಿಎಲ್​​ 2021 ಪ್ರೋಮೋದಲ್ಲಿ ಮಿಂಚಿದ್ದಾರೆ. ತಲೈವಾ ಧೋನಿಯ ಈ ಹೊಸ ಅವತಾರಕ್ಕೆ ಕ್ರಿಕೆಟ್​ ಅಭಿಮಾನಿಗಳ ಹುಬ್ಬೇರಿಸಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 14 ನೇ ಆವೃತ್ತಿಯ ದ್ವಿತೀಯಾರ್ಧದ ಹೊಸ ಪ್ರೋಮೋವನ್ನು ಬಿಡುಗಡೆ ಮಾಡಲಾಗಿದೆ. ಕೊರೊನಾ ಕಾರಣದಿಂದ ಐಪಿಎಲ್​​ 14ನೇ ಆವೃತ್ತಿಯನ್ನು ಮೇ ತಿಂಗಳಲ್ಲಿ ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಐಪಿಎಲ್​ ಸೆ.19ರಿಂದ ಶುರುವಾಗುತ್ತಿದ್ದು, ಧೋನಿ ಭರ್ಜರಿಯಾಗಿ ಪ್ರೇಕ್ಷಕರನ್ನು ಆಹ್ವಾನಿಸಿದ್ದಾರೆ.


ವಿಭಿನ್ನ ಗೆಟಪ್​​ನಲ್ಲಿ ಕಾಣಿಸಿಕೊಂಡಿರುವ ಧೋನಿ ಐಪಿಎಲ್ ಅನ್ನು ಸಿನಿಮಾಗೆ ಹೋಲಿಸಿದ್ದಾರೆ. ಇಂಟರ್ವಲ್​​ ನಂತರ ದ್ವಿತೀಯಾರ್ಧದಲ್ಲಿ ಬಿರುಗಾಳಿ ಬರಲಿದೆ. ಇದರಲ್ಲಿ ಡ್ರಾಮಾ, ಸಸ್ಪೆನ್ಸ್, ಕ್ಲೈಮ್ಯಾಕ್ಸ್, ಗಬ್ಬರ್ (ಶಿಖರ್ ಧವನ್), ಹಿಟ್​ಮ್ಯಾನ್​​ (ರೋಹಿತ್ ಶರ್ಮಾ) ಎಲ್ಲರೂ ಇದ್ದಾರೆ. ಅಸಲಿ ಪಿಕ್ಷರ್​​ ಇನ್ನು ಬಾಕಿ ಇದೆ ಎನ್ನುವ ಮೂಲಕ ನೋಡುಗರಲ್ಲಿ ಕುತೂಹಲ ಮೂಡಿಸಿದ್ದಾರೆ.



ಏಪ್ರಿಲ್-ಮೇ ತಿಂಗಳಲ್ಲಿ ಕೇವಲ 29 ಪಂದ್ಯಗಳು ಮಾತ್ರ ನಡೆದಿದ್ದವು. ಕೊರೊನಾದಿಂದಾಗಿ ಟೂರ್ನಮೆಂಟ್ ಅನ್ನು ತಕ್ಷಣವೇ ಅಮಾನತುಗೊಳಿಸಲಾಗಿತ್ತು. ಅನೇಕ ಸಭೆಗಳ ನಂತರ  ಬಿಸಿಸಿಐ ಯುಎಇಯಲ್ಲಿ ಉಳಿದ ಪಂದ್ಯಗಳನ್ನು ಐಸಿಸಿ ಟಿ 20 ವಿಶ್ವಕಪ್‌ಗಿಂತ ಮೊದಲು ಸೆಪ್ಟೆಂಬರ್‌-ಅಕ್ಟೋಬರ್​​ನಲ್ಲಿ ನಡೆಸಲು ನಿರ್ಧರಿಸಿತು.


ಧೋನಿ ನೇತೃತ್ವದ ಸಿಎಸ್‌ಕೆ ತಂಡ ಆಡಿದ 7 ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಗೆಲ್ಲುವ ಮೂಲಕ ಅಗ್ರ ತಂಡಗಳಲ್ಲಿ ಒಂದಾಗಿದೆ. ಸೀಸನ್ ಮುಂದೂಡುವ ಮುನ್ನ ಸಿಎಸ್​​ಕೆ ಎರಡನೇ ಸ್ಥಾನದಲ್ಲಿತ್ತು. ಐಪಿಎಲ್​​ ಟೂರ್ನಿಯ ಸೆಕೆಂಡ್​​ ಹಾಫ್​​ ಸೆಪ್ಟೆಂಬರ್ 19 ರಂದು ದುಬೈನಲ್ಲಿ ಆರಂಭವಾಗಲಿದ್ದು. ಸಿಎಸ್​​​ಕೆ ತಮ್ಮ ಸಾಂಪ್ರದಾಯಿಕ ಎದುರಾಳಿಯಾದ ಮುಂಬೈ ಇಂಡಿಯನ್ಸ್‌ನೊಂದಿಗೆ ಸೆಣಸಲಿದೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

Published by:Kavya V
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು