ಬೆಂಗಳೂರು(ಜ. 22): ಸಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕಕ್ಕೆ ಹ್ಯಾಟ್ರಿಕ್ ಪ್ರಶಸ್ತಿ ಪಡೆಯಲು ಇನ್ನು ಮೂರು ಗೆಲುವು ಬಾಕಿ ಇದೆ. ಕೊನೆ ಕ್ಷಣದವರೆಗೆ ಇದ್ದ ತೂಗುಯ್ಯಾಲೆ ಸ್ಥಿತಿಯಲ್ಲಿ ಕರ್ನಾಟಕ ಕ್ವಾರ್ಟರ್ಫೈನಲ್ ಸುತ್ತು ಪ್ರವೇಶಿಸಿದ್ದಾಗಿದೆ. ಇದೀಗ ಎಂಟರ ಹಂತದ ಪಂದ್ಯಗಳ ಎದುರಾಳಿಗಳ ಪಟ್ಟಿ ಸಿದ್ಧವಾಗಿದೆ. ಕರ್ನಾಟಕಕ್ಕೆ ಪಂಜಾಬ್ ಸವಾಲೊಡ್ಡುತ್ತಿದೆ. ಗ್ರೂಪ್ ಹಂತದಲ್ಲಿ ಪಂಜಾಬ್ ಎದುರು ಸೋತಿದ್ದ ಕರ್ನಾಟಕ್ಕೆ ಈಗ ಸೇಡು ತೀರಿಸಿಕೊಂಡು ಸೆಮಿಫೈನಲ್ ತಲುಪುವ ಅವಕಾಶ ಸಿಕ್ಕಿದೆ. ಅಹ್ಮದಾಬಾದ್ನಲ್ಲಿ ಜ. 26ರಂದು ಮಧ್ಯಾಹ್ನ 12ಕ್ಕೆ ಪಂದ್ಯ ನಡೆಯಲಿದೆ. ಸ್ಟಾರ್ ಸ್ಪೋರ್ಟ್ ಟಿವಿ ವಾಹಿನಿಗಳಲ್ಲಿ ಮತ್ತು ಹಾಟ್ಸ್ಟಾರ್ನಲ್ಲಿ ನೇರ ಪ್ರಸಾರ ಇರಲಿದೆ.
ಕರ್ನಾಟಕ ಮತ್ತು ಪಂಜಾಬ್ ತಂಡಗಳ ಜೊತೆ ತಮಿಳುನಾಡು, ಹಿಮಾಚಲ ಪ್ರದೇಶ, ಹರಿಯಾಣ, ಬರೋಡಾ, ರಾಜಸ್ಥಾನ ಮತ್ತು ಬಿಹಾರ ತಂಡಗಳು ಕ್ವಾರ್ಟರ್ಫೈನಲ್ ಪ್ರವೇಶಿಸಿವೆ. ಕರ್ನಾಟಕ ಮತ್ತು ಹಿಮಾಚಲ ಪ್ರದೇಶ ಬಿಟ್ಟು ಉಳಿದ ತಂಡಗಳು ತಮ್ಮ ತಮ್ಮ ಗುಂಪುಗಳಲ್ಲಿ ಅಗ್ರಸ್ಥಾನ ಪಡೆದು ಕ್ವಾಲಿಫೈ ಆಗಿವೆ. ಕರ್ನಾಟಕ, ಹಿ.ಪ್ರ. ತಂಡಗಳು ರನ್ ರೇಟ್ ಮತ್ತು ಪಾಯಿಂಟ್ ಆಧಾರದಲ್ಲಿ ಅರ್ಹತೆ ಪಡೆದಿವೆ. ಪ್ಲೇಟ್ ಗ್ರೂಪ್ನಿಂದ ಬಿಹಾರ ತಂಡ ಕ್ವಾಲಿಫೈ ಆಗಿದೆ. ಸೆಮಿಫೈನಲ್, ಫೈನಲ್ ಅನ್ನೂ ಒಳಗೊಂಡಂತೆ ಎಲ್ಲಾ ನಾಕೌಟ್ ಪಂದ್ಯಗಳು ಅಹ್ಮದಾಬಾದ್ನಲ್ಲೇ ನಡೆಯಲಿವೆ.
ಇದನ್ನೂ ಓದಿ: IPL 2021: ಹರಾಜಿಗೂ ಮುನ್ನ ಅಚ್ಚರಿ ಮೂಡಿಸಿದ RCB ನಡೆ..!
ಈ ಟೂರ್ನಿಯಲ್ಲಿ ಅತಿ ಹೆಚ್ಚು ಅಚ್ಚರಿ ಮೂಡಿಸಿದ್ದು ಮುಂಬೈ ತಂಡದ ಸಾಧನೆ. ಇಲೈಟ್ ಇ ಗ್ರೂಪ್ನಲ್ಲಿದ್ದ ಮುಂಬೈ ಕೇವಲ ಒಂದು ಗೆಲುವಿನೊಂದಿಗೆ ಕೊನೆಯ ಸ್ಥಾನ ಗಳಿಸಿ ನಿರಾಶೆ ಉಂಟು ಮಾಡಿದೆ. ಡೆಲ್ಲಿ, ಹೈದರಾಬಾದ್, ಸೌರಾಷ್ಟ್ರ, ಉತ್ತರ ಪ್ರದೇಶದಂಥ ಬಲಿಷ್ಠ ತಂಡಗಳೂ ನಾಕೌಟ್ ಹಂತಕ್ಕೆ ಅರ್ಹತೆ ಪಡೆಯಲು ವಿಫಲವಾಗಿವೆ.
Karnataka will face Punjab in the quarter final of the Syed Mushtaq Ali Trophy 2020-21.
Game is held at Sardar Vallabhbhai Patel Stadium, Ahmedabad on 26-Jan at 12:00 PM. It'll be aired live on TV & streamed on hotstar. #SMAT #KARvPUN
— Karnataka Ranji Team║ಕರ್ನಾಟಕ ರಣಜಿ ತಂಡ (@RanjiKarnataka) January 22, 2021
ಕ್ವಾರ್ಟರ್ಫೈನಲ್ ಪಂದ್ಯಗಳು (ಮಧ್ಯಾಹ್ನ 12ರಿಂದ):
ಜ. 26 – ಕರ್ನಾಟಕ ಮತ್ತು ಪಂಜಾಬ್
ಜ. 26 – ತಮಿಳುನಾಡು ಮತ್ತು ಹಿಮಾಚಲ ಪ್ರದೇಶ
ಜ. 27 – ಹರಿಯಾಣ ಮತ್ತು ಬರೋಡಾ
ಜ. 27 – ರಾಜಸ್ಥಾನ ಮತ್ತು ಬಿಹಾರ
ಸೆಮಿಫೈನಲ್ ಪಂದ್ಯಗಳು: ಜ. 29 (ಸಂಜೆ 7ರಿಂದ)
ಫೈನಲ್ ಪಂದ್ಯ: ಜ. 31 (ಸಂಜೆ 7ರಿಂದ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ