ಬೆಂಗಳೂರು (ಜನವರಿ 16); ಕರ್ನಾಟಕ ಕ್ರಿಕೆಟ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಅನಿರುದ್ಧ್ ಜೋಶಿ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದಾಗಿ ಇಲ್ಲಿ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ತಂಡ ರೈಲ್ವೇಸ್ ತಂಡದ ಎದುರಿನ ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಅಲ್ಲದೆ, ಈ ಮೂಲಕ ಕರ್ನಾಟಕ ತಂಡ ಈ ಟೂರ್ನಿಯಲ್ಲಿ ಮೂರನೇ ಗೆಲುವನ್ನು ದಾಖಲಿಸಿದೆ. ಗೆಲುವು ಅಷ್ಟೇನು ಸುಲಭವಲ್ಲ ಎಂಬಂತಹ ಪಂದ್ಯದಲ್ಲಿ ನಿರ್ಣಾಯಕ ಘಟ್ಟದ ಕೊನೆಯ ಓವರ್ನಲ್ಲಿ ಸತತ ಎರಡು ಸಿಕ್ಸರ್ ಸಿಡಿಸುವ ಮೂಲಕ ಗೆಲುವನ್ನು ಖಚಿತಪಡಿಸಿರುವ ಅನಿರುದ್ಧ ಜೋಶಿ ಆಟಕ್ಕೆ ಇದೀಗ ಹಲವು ಹಿರಿಯ ಕ್ರಿಕೆಟ್ ಆಟಗಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ವರ್ಷದ ಟೂರ್ನಿಯಲ್ಲೇ ಅತ್ಯಂತ ರೋಚಕ ಪಂದ್ಯ ಎಂಬ ಹೆಗ್ಗಳಿಕೆಗೂ ಈ ಪಂದ್ಯ ಪಾತ್ರವಾಗಿದೆ.
SIX & SIX!! Aniruddha Joshi hits back to back sixes and seals the game for Karnataka who win by 2 wickets.
Aniruddha Joshi 64*(40b, 3x4s, 4x6s). Absolute #ChampionStuff #SMAT #KARvRLW
— Karnataka Ranji Team║ಕರ್ನಾಟಕ ರಣಜಿ ತಂಡ (@RanjiKarnataka) January 16, 2021
ಗುರಿ ಬೆನ್ನಟ್ಟಿದ ಕರ್ನಾಟಕ ತಂಡ 25 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತ್ತು. ಆರಂಭಿಕ ಆಟಗಾರ ರೋಹನ್ ಖದಮ್ ವಿಕೆಟ್ ಕಬಳಿಸುವಲ್ಲಿ ರೈಲ್ವೆಸ್ ಬೌಲರ್ ಪ್ರದೀಪ್ ಯಶಸ್ವಿಯಾಗಿದ್ದರು. ತದನಂತರ ಕರ್ನಾಟಕ ಆಟಗಾರರು ಪೆವಿಲಿಯನ್ ಪರೇಡ್ ನಡೆಸಲು ಆರಂಭಿಸಿದ್ದರು. ಒಂದು ಹಂತದಲ್ಲಿ ತಂಡದ ಮೊತ್ತ 93 ಆಗುವಷ್ಟರಲ್ಲಿ ಕರ್ನಾಟಕ ತಂಡ ಎಲ್ಲಾ ಪ್ರಮುಖ 6 ವಿಕೆಟ್ಗಳನ್ನು ಕಳೆದುಕೊಂಡು ಸೋಲಿನ ಸುಳಿಯಲ್ಲಿ ಸಿಲುಕಿತ್ತು. ಗೆಲ್ಲಲು ಇನ್ನೂ 39 ಎಸೆತಗಳಲ್ಲಿ 60 ರನ್ಗಳ ಅಗತ್ಯತೆ ಇತ್ತು.
ಇದನ್ನೂ ಓದಿ: ಭಾರತೀಯ ಕ್ರಿಕೆಟ್ನ ಆಲ್ರೌಂಡರ್ಗಳಾದ ಹಾರ್ದಿಕ್-ಕ್ರುನಾಲ್ ಪಾಂಡ್ಯ ಅವರ ತಂದೆ ಹಿಮಾಂಶು ಪಾಂಡ್ಯ ನಿಧನ!
ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಮತ್ತೊಂದೆಡೆ ಜವಾಬ್ದಾರಿಯುತ ಆಟ ಪ್ರದರ್ಶಿಸಿದ ಅನಿರುದ್ಧ್ ತಂಡದ ಗೆಲುವಿಗಿದ್ದ ಕೊನೆಯ ಆಸರೆಯಾಗಿದ್ದರು. ಅದಕ್ಕೆ ತಕ್ಕಂತೆ ಬ್ಯಾಟ್ ಬೀಸಿದ ಅವರು ಕೇವಲ 40 ಎಸೆತಗಳಲ್ಲಿ 3 ಬೌಂಡರಿ 4 ಸಿಕ್ಸರ್ ಸಹಿತ 64 ರನ್ ಸಿಡಿಸುವ ಮೂಲಕ ತಂಡಕ್ಕೆ ಗೆಲುವನ್ನು ತಂದಿಟ್ಟರು. ಇನ್ನೂ ಕೊನೆಯ ಓವರ್ನಲ್ಲಿ ಸತತ ಎರಡು ಸಿಕ್ಸರ್ ಸಿಡಿಸುವ ಮೂಲಕ ರೈಲ್ವೇಸ್ ತಂಡಕ್ಕೆ ಆಘಾತ ನೀಡುವಲ್ಲಿ ಅವರು ಸಫಲರಾದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ