ಬೆಂಗಳೂರು (ನ. 25): ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅತಿ ಹೆಚ್ಚು ಎನರ್ಜಿ ಇರುವ ತಂಡವೆಂದರೆ ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು. 12 ಆವೃತ್ತಿ ಕಳೆದರೂ ಕೊಹ್ಲಿ ಪಡೆ ಒಮ್ಮೆಯೂ ಕಪ್ ಗೆದ್ದಿಲ್ಲ. ಆದರೂ ಆರ್ಸಿಬಿಗೆ ಅಭಿಮಾನಿಗಳೇ ದೇವರು. ಗೆದ್ದರು- ಸೋತರು ಸದಾ ಆರ್ಸಿಬಿ ತಂಡಕ್ಕೆ ಬೆಂಬಲಿಸುತ್ತಾ ಬಂದಿದ್ದಾರೆ ಕನ್ನಡಿಗರು.
ಆದರೆ, ಸದ್ಯ ಆರ್ಸಿಬಿ ಅಭಿಮಾನಿಗಳು ಆರ್ಸಿಬಿ ತಂಡದ ವಿರದ್ಧವೇ ತಿರುಗಿ ಬಿದ್ದಿದ್ದಾರೆ. ಅಲ್ಲದೆ ನಾವಿನ್ನು ಆರ್ಸಿಬಿಗೆ ಬೆಂಬಲವನ್ನೇ ನೀಡುವುದಿಲ್ಲ ಎಂದು ಕೆಲವರು ಪಟ್ಟು ಹಿಡಿದು ಕೂತಿದ್ದಾರೆ. ಇದಕ್ಕೆ ಕಾರಣವಾದರೂ ಏನು..?
ಆರ್ಸಿಬಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ 30 ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿದೆ. ಇಷ್ಟು ಫಾಲೋವರ್ಗಳಲ್ಲಿ ಕನ್ನಡಿಗರ ಸಂಖ್ಯೆ ಕೊಂಚ ಹೆಚ್ಚಿದೆ ಎನ್ನಬಹುದು. ಹೀಗಿರುವಾಗ ಆರ್ಸಿಬಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಬೆಂಗಳೂರು ಪದ ಕೈಬಿಟ್ಟು ರಾಯಲ್ ಚಾಲೆಂಜರ್ಸ್ ಎಂದು ಬದಲಾವಣೆ ಮಾಡಿಕೊಂಡಿದೆ. ಇದರಿಂದ ರೊಚ್ಚಿಗೆದ್ದ ಅಭಿಮಾನಿಗಳು ಆರ್ಸಿಬಿ ವಿರುದ್ಧ ತಿರುಗಿ ಬಿದ್ದಿದ್ದಾರೆ.
IPL 2020: ಈ ಬಾರಿ ಹರಾಜಿನಲ್ಲಿ ಕೋಟಿ ಕೋಟಿಗೆ ಸೇಲ್ ಆಗಲಿದ್ದಾರೆ ಈ 5 ಸ್ಟಾರ್ ಆಟಗಾರರು!
ಅನೇಕರು ಟ್ವೀಟ್ ಮಾಡುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ. ಅದರಲ್ಲು ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕ ಸಿಂಪಲ್ ಸಿನಿ ಅವರು, "ಒಂದು ಕಪ್ ಗೆಲ್ಲದಿದ್ದರೂ, ಒಬ್ಬ ಕನ್ನಡಿಗನನ್ನೂ ಆಡಿಸದಿದ್ದರೂ, ನಾವು ನಿಮ್ಮನ್ನು ಇಷ್ಟಪಡಲು ಕಾರಣ ರಾಯಲ್ ಚಾಲೆಂಜರ್ ಅಲ್ಲ. ನಿಮ್ಮ ಊರು, ಸೂರು, ಕ್ರೀಡಾಂಗಣ ಮತ್ತು ನೀವೆ ಆಗಿದ್ದ 'ಬೆಂಗಳೂರು'. ಈಗ ಅದನ್ನೇ ಬಿಟ್ಟು ಮುನ್ನೆಡೆಯಲು ಹೊರಟರೆ ಅಭಿಮಾನಿಗಳ ಕೆಂಗಣ್ಣು ಬಿದ್ದೀತು. ದಯವಿಟ್ಟು ಬೆಂಗಳೂರು ಸೇರಿಸಿ, ಸೋಲೋ ಗೆಲುವೋ ಜೊತೆಗೇ ಇರುತ್ತೇವೆ" ಎಂದು ಟ್ವೀಟ್ ಮಾಡಿದ್ದಾರೆ.
ಒಂದು ಕಪ್ ಗೆಲ್ಲದಿದ್ದರೂ
ಒಬ್ಬ ಕನ್ನಡಿಗನನ್ನೂ ಆಡಿಸದಿದ್ದರೂ
ನಾವು ನಿಮ್ಮನ್ನು ಇಷ್ಟಪಡಲು ಕಾರಣ,ನಿಮ್ಮೊಳ ರಾಯಲ್ ಚಾಲೆಂಜರ್ ಅಲ್ಲ.
ನಿಮ್ಮ ಊರು,ಸೂರು,ಕ್ರೀಡಾಂಗಣ&ನೀವೆ ಆಗಿದ್ದ "ಬೆಂಗಳೂರು"
ಈಗ ಅದನ್ನೇ ಬಿಟ್ಟು ಮುನ್ನೆಡೆಯಲು ಹೊರಟರೆ ಅಭಿಮಾನಿಗಳ ಕೆಂಗಣ್ಣು ಬಿದ್ದೀತು
ದಯವಿಟ್ಟು ಬೆಂಗಳೂರು ಸೇರಿಸಿ,
ಸೋಲೋ ಗೆಲುವೋ ಜೊತೆಗಂತು ಇರುತ್ತೇವೆ. pic.twitter.com/BTkw4IYHl3
— ಸುನಿ/SuNi (@SimpleSuni) November 24, 2019
@RCBTweets shame on you for removing Bangalore from your page name. We all support RCB not because they are Royal Challengers we support RCB because it's our Bangalore's team.
Learn how to respect fans emotions with team. Such a shame.
— Bharath_S (@_Bharathgowda) November 24, 2019
@RCBTweets even without a single cup the support you are getting is not only because of your name " ROYAL CHALLENGERS" but of the BRAND "BENGALURU"
CHANGE IT ASAP BEFORE IT IS TOO LATE
ನಮ್ಮ ನಾಡು ನಮ್ಮ ಜಲ ನಮ್ಮ ಊರು ನಮ್ಮ ಜನ ನಮ್ಮ #Karnataka ನಮ್ಮ ಹೆಮ್ಮೆ@bengalurufc ನೋಡಿ ಕಲಿತುಕೊಳ್ಳಿ
— uday harshith gowda (@udayharshith) November 24, 2019
ಕರೆಕ್ಟ್ ಆಗಿ ಹೇಳಿದ್ರಿ ಅಣ್ಣಾ..ನಾವು @RCBTweets ನಾ ಬೆಂಬಲಿಸ್ತಿರೋದು ತಂಡದಲ್ಲಿ ದೊಡ್ಡ ಪ್ಲೇಯರ್ಸ್ ಇದ್ದಾರೆ ಅಂತಾ ಅಲ್ಲಾ,ನಮ್ಮ ಹೆಮ್ಮೆಯ ಊರು "ಬೆಂಗಳೂರು" ಅಂತ ಹೆಸರಿದೆ ಎನ್ನುವ ಕಾರಣಕ್ಕೆ ನಾವು ಬೆಂಬಲಿಸ್ತಿರೋದು,
ಇವರು ನಮ್ಮ ಕನ್ನಡನಾಡಿನ ಅಪ್ಪಟ ತಂಡ @bengalurufc ನಾ ನೋಡಿ ಬುಧ್ಧಿ ಕಲಿಯಬೇಕು, ಜೈ ಬೆಂಗಳೂರು, ಜೈ 💪 pic.twitter.com/rCP8l6pRB7
— Panchakshari (@Panchak46958164) November 24, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ