ಟಿ-20ಯಲ್ಲಿ 200ಕ್ಕೂ ಅಧಿಕ ರನ್ ಚಚ್ಚುವ ಗುರಿ; ಇಬ್ಬರು ಸ್ಟಾರ್ ಆಟಗಾರರನ್ನು ಹೊರಗಿಟ್ಟ ಕೊಹ್ಲಿ
ಟೀಂ ಇಂಡಿಯಾ 200ಕ್ಕೂ ಅಧಿಕ ರನ್ ಕಲೆಹಾಕುವ ಯೋಜನೆ ಹೊಂದಬೇಕು. ಇದಕ್ಕೆ ಕೆಳ ಕ್ರಮಾಂಕದಲ್ಲು ಬ್ಯಾಟ್ ಬೀಸುವ ಆಟಗಾರರ ಅಗತ್ಯವಿದೆ. ರಾಹುಲ್ ಚಹಾರ್ ಹಾಗೂ ವಾಷಿಂಗ್ಟನ್ ಸುಂದರ್ರನ್ನು ಪ್ರಯೋಗ ಮಾಡಲಾಗುತ್ತಿದೆ- ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ (ಟೀಂ ಇಂಡಿಯಾ ನಾಯಕ)
- News18 Kannada
- Last Updated: September 17, 2019, 9:20 AM IST
ಬೆಂಗಳೂರು (ಸೆ. 17): 2020ರಲ್ಲಿ ಐಸಿಸಿ ಟಿ-20 ವಿಶ್ವಕಪ್ ನಡೆಯಲಿದೆ. ಈ ಹೊತ್ತಿಗೆ ಟೀಂ ಇಂಡಿಯಾ ಬಲಿಷ್ಠವಾಗಬೇಕಿದೆ. 2019ರ ಏಕದಿನ ವಿಶ್ವಕಪ್ ಗೆಲ್ಲಲು ವಿಫಲವಾದ ಕೊಹ್ಲಿ ಪಡೆ ಸದ್ಯ ಟಿ-20 ವಿಶ್ವಕಪ್ ಮೇಲೆ ಕಣ್ಣಿಟ್ಟಿದೆ. ಇದಕ್ಕೆ ಈಗಿಂದಲೇ ಭರ್ಜರಿ ತಯಾರಿಯಲ್ಲೂ ತೊಡಗಿದೆ. ಯುವ ಆಟಗಾರರನ್ನು ತಯಾರು ಮಾಡುವ ಉದ್ದೇಶದಿಂದ ಅವರಿಗೆ ಸಾಕಷ್ಟು ಅವಕಾಶ ನೀಡುತ್ತಿದೆ.
ಆದರೆ, ಟೀಂ ಇಂಡಿಯಾದ ಖಾಯಂ ಸ್ಪಿನ್ನರ್ಗಳಿಬ್ಬರು ಇತ್ತೀಚೆಗೆ ತಂಡದಲ್ಲಿ ಕಾಣಿಸುತ್ತಿಲ್ಲ. ಭಾರತ ತಂಡದಲ್ಲಿ ಕುಲ್ಚಾ ಎಂದೇ ಖ್ಯಾತಿ ಪಡೆದಿರುವ ಸ್ಟಾರ್ ಸ್ಪಿನ್ನರ್ಗಳಾದ ಕುಲ್ದೀಪ್ ಯಾದವ್ ಹಾಗೂ ಯಜುವೇಂದ್ರ ಚಹಾಲ್ರನ್ನು ಇತ್ತೀಚಿನ ದಿನಗಳಲ್ಲಿ ಕಡೆಗಣಿಸಲಾಗುತ್ತಿದೆ. ಇಷ್ಟೇ ಅಲ್ಲದೆ ಇವರಿಬ್ಬರು ಮುಂಬರುವ ಟಿ-20 ವಿಶ್ವಕಪ್ನಲ್ಲೂ ಆಡುವುದು ಅನುಮಾನ ಎಂದು ಹೇಳಲಾಗುತ್ತಿದೆ.
ಸದ್ಯಕ್ಕೆ ಸೀಮಿತ ಓವರ್ ಕ್ರಿಕೆಟ್ನಲ್ಲಿ ಟೀಂ ಇಂಡಿಯಾದ ಖಾಯಂ ಸದಸ್ಯರಾಗಿರುವ ಇವರು ಟಿ-20 ತಂಡದಲ್ಲಿ ಮಾತ್ರ ಕಾಣಿಸುತ್ತಿಲ್ಲ. ಇವರ ಬದಲಿಗೆ ಯುವ ಆಟಗಾರರ ಮೊರೆ ಹೋಗುತ್ತಿದೆ ಕೊಹ್ಲಿ ಪಡೆ. ಸದ್ಯ ಸಾಗುತ್ತಿರುವ ದ. ಆಫ್ರಿಕಾ ವಿರುದ್ಧದ ಟಿ-20 ಸರಣಿಯಲ್ಲೂ ಇವರಿಬ್ಬರ ಹೆಸರಿಲ್ಲ. ಇದಕ್ಕೆ ನಾಯಕ ವಿರಾಟ್ ಕೊಹ್ಲಿ ಸ್ಪಷ್ಟನೆಯನ್ನು ನೀಡಿದ್ದಾರೆ.
ICC Test Rankings: ನಂಬರ್ ಒನ್ ಪಟ್ಟ ಭದ್ರ ಪಡಿಸಿಕೊಂಡ ಸ್ಮಿತ್; 2ನೇ ಸ್ಥಾನದಲ್ಲೇ ಉಳಿದ ಕೊಹ್ಲಿ
'2020 ರಲ್ಲಿ ಟಿ-20 ವಿಶ್ವಕಪ್ ನಡೆಯಲಿದೆ. ಈ ಹೊತ್ತಿಗೆ ನಮ್ಮ ತಂಡ ಮತ್ತಷ್ಟು ಬಲಿಷ್ಠವಾಗಬೇಕು. 200ಕ್ಕೂ ಅಧಿಕ ರನ್ ಕಲೆಹಾಕುವ ಯೋಜನೆ ಹೊಂದಬೇಕು. ಇದಕ್ಕೆ ಕೆಳ ಕ್ರಮಾಂಕದಲ್ಲು ಬ್ಯಾಟ್ ಬೀಸುವ ಆಟಗಾರರ ಅಗತ್ಯವಿದೆ. ಹೀಗಾಗಿ ರಾಹುಲ್ ಚಹಾರ್ ಹಾಗೂ ವಾಷಿಂಗ್ಟನ್ ಸುಂದರ್ರನ್ನು ಪ್ರಯೋಗ ಮಾಡಲಾಗುತ್ತಿದೆ'
'ಈಗಾಗಲೇ ಇಂಗ್ಲೆಂಡ್ ಸೇರಿದಂತೆ ಕೆಲ ತಂಡಗಳಲ್ಲಿ 8, 9 ಹಾಗೂ 10ನೇ ಕ್ರಮಾಂಕದ ವರೆಗೂ ಬ್ಯಾಟಿಂಗ್ನಲ್ಲಿ ಬಲಿಷ್ಠವಿದೆ. ಹೀಗಾಗಿ ನಮಗೆ ಬೌಲಿಂಗ್ ಜೊತೆ ಬ್ಯಾಟಿಂಗ್ನಲ್ಲೂ ಕಮಾಲ್ ಮಾಡುವ ಆಟಗಾರರು ಬೇಕಿದ್ದಾರೆ. ಇದರಲ್ಲಿ ಏನು ತಪ್ಪಿಲ್ಲ. ನಮ್ಮದು 200ಕ್ಕೂ ಅಧಿಕ ರನ್ ಕಲೆಹಾಕುವುದು ಮಾತ್ರ ಗುರಿ. ಟೀಂ ಇಂಡಿಯಾ ಬ್ಯಾಟಿಂಗ್ ಕಡೆಗೆ ಹೆಚ್ಚಿನ ಗಮನ ನೀಡುತ್ತಿದೆ' ಎಂಬುದು ವಿರಾಟ್ ಕೊಹ್ಲಿ ಮಾತು. ಈ ಹಿಂದೆ ಆಯ್ಕೆ ಸಮಿತಿ ಅಧ್ಯಕ್ಷ ಕೂಡ ಇದೇ ಮಾತನ್ನ ಹೇಳಿದ್ದರು. 'ಅನೇಕ ಯುವ ಪ್ರತಿಭಾವಂತ ಆಟಗಾರರು ಬೆಳಕಿಗೆ ಬರುತ್ತಿದ್ದಾರೆ. ಅವರಿಗೂ ಅವಕಾಶ ನೀಡಬೇಕು. ಅಲ್ಲದೆ 2020ರ ವೇಳೆ ಭಾರತ ತಂಡ ಟಿ-20 ವಿಶ್ವಕಪ್ಗೆ ಸಿದ್ಧವಾಗಿರಬೇಕು. ಇದಕ್ಕೆ ಈಗಿನಿಂದಲೇ ನಾವು ಯೋಚಿಸಿ ಹೆಜ್ಜೆ ಇಡುತ್ತಿದ್ದೇವೆ' ಎಂದು ಎಂಎಸ್ಕೆ ಪ್ರಸಾದ್ ಹೇಳಿದ್ದರು.
ಆದರೆ, ಟೀಂ ಇಂಡಿಯಾದ ಖಾಯಂ ಸ್ಪಿನ್ನರ್ಗಳಿಬ್ಬರು ಇತ್ತೀಚೆಗೆ ತಂಡದಲ್ಲಿ ಕಾಣಿಸುತ್ತಿಲ್ಲ. ಭಾರತ ತಂಡದಲ್ಲಿ ಕುಲ್ಚಾ ಎಂದೇ ಖ್ಯಾತಿ ಪಡೆದಿರುವ ಸ್ಟಾರ್ ಸ್ಪಿನ್ನರ್ಗಳಾದ ಕುಲ್ದೀಪ್ ಯಾದವ್ ಹಾಗೂ ಯಜುವೇಂದ್ರ ಚಹಾಲ್ರನ್ನು ಇತ್ತೀಚಿನ ದಿನಗಳಲ್ಲಿ ಕಡೆಗಣಿಸಲಾಗುತ್ತಿದೆ. ಇಷ್ಟೇ ಅಲ್ಲದೆ ಇವರಿಬ್ಬರು ಮುಂಬರುವ ಟಿ-20 ವಿಶ್ವಕಪ್ನಲ್ಲೂ ಆಡುವುದು ಅನುಮಾನ ಎಂದು ಹೇಳಲಾಗುತ್ತಿದೆ.

ಯಜುವೇಂದ್ರ ಚಹಾಲ್ ಹಾಗೂ ಕುಲ್ದೀಪ್ ಯಾದವ್
ICC Test Rankings: ನಂಬರ್ ಒನ್ ಪಟ್ಟ ಭದ್ರ ಪಡಿಸಿಕೊಂಡ ಸ್ಮಿತ್; 2ನೇ ಸ್ಥಾನದಲ್ಲೇ ಉಳಿದ ಕೊಹ್ಲಿ
'2020 ರಲ್ಲಿ ಟಿ-20 ವಿಶ್ವಕಪ್ ನಡೆಯಲಿದೆ. ಈ ಹೊತ್ತಿಗೆ ನಮ್ಮ ತಂಡ ಮತ್ತಷ್ಟು ಬಲಿಷ್ಠವಾಗಬೇಕು. 200ಕ್ಕೂ ಅಧಿಕ ರನ್ ಕಲೆಹಾಕುವ ಯೋಜನೆ ಹೊಂದಬೇಕು. ಇದಕ್ಕೆ ಕೆಳ ಕ್ರಮಾಂಕದಲ್ಲು ಬ್ಯಾಟ್ ಬೀಸುವ ಆಟಗಾರರ ಅಗತ್ಯವಿದೆ. ಹೀಗಾಗಿ ರಾಹುಲ್ ಚಹಾರ್ ಹಾಗೂ ವಾಷಿಂಗ್ಟನ್ ಸುಂದರ್ರನ್ನು ಪ್ರಯೋಗ ಮಾಡಲಾಗುತ್ತಿದೆ'
'ಈಗಾಗಲೇ ಇಂಗ್ಲೆಂಡ್ ಸೇರಿದಂತೆ ಕೆಲ ತಂಡಗಳಲ್ಲಿ 8, 9 ಹಾಗೂ 10ನೇ ಕ್ರಮಾಂಕದ ವರೆಗೂ ಬ್ಯಾಟಿಂಗ್ನಲ್ಲಿ ಬಲಿಷ್ಠವಿದೆ. ಹೀಗಾಗಿ ನಮಗೆ ಬೌಲಿಂಗ್ ಜೊತೆ ಬ್ಯಾಟಿಂಗ್ನಲ್ಲೂ ಕಮಾಲ್ ಮಾಡುವ ಆಟಗಾರರು ಬೇಕಿದ್ದಾರೆ. ಇದರಲ್ಲಿ ಏನು ತಪ್ಪಿಲ್ಲ. ನಮ್ಮದು 200ಕ್ಕೂ ಅಧಿಕ ರನ್ ಕಲೆಹಾಕುವುದು ಮಾತ್ರ ಗುರಿ. ಟೀಂ ಇಂಡಿಯಾ ಬ್ಯಾಟಿಂಗ್ ಕಡೆಗೆ ಹೆಚ್ಚಿನ ಗಮನ ನೀಡುತ್ತಿದೆ' ಎಂಬುದು ವಿರಾಟ್ ಕೊಹ್ಲಿ ಮಾತು.
Loading...
Loading...