IND vs NZ: ವಿಶ್ವಕಪ್ನಲ್ಲಿಂದು ಭಾರತ vs ನ್ಯೂಜಿಲೆಂಡ್; ಕೊಹ್ಲಿ ತಂಡದಲ್ಲಾಗಲಿದೆ ಪ್ರಮುಖ ಬದಲಾವಣೆ
ನ್ಯೂಜಿಲೆಂಡ್ ತಂಡದಲ್ಲಿ ಫಾರ್ಮ್ನ ಕೊರತೆ ಎದ್ದು ಕಾಣುತ್ತಿದೆ. ಕೇನ್ ವಿಲಿಯಮ್ಸನ್ ಹಾಗೂ ರಾಸ್ ಟೈಲರ್ ತಂಡಕ್ಕೆ ಪ್ರಮುಖ ಆಧಾರ. ಇವರ ವಿಕೆಟ್ಗಳನ್ನು ಕಿತ್ತರೆ ಭಾರತ ಸುಲಭವಾಗಿ ಗೆಲುವನ್ನು ತೆಕ್ಕೆಗೆ ತೆಗೆದುಕೊಳ್ಳಬಹುದು.

ವಿರಾಟ್-ಕೇನ್ ವಿಲಿಯಮ್ಸನ್
- News18
- Last Updated: July 9, 2019, 8:32 AM IST
ಇಂದು ವಿಶ್ವಕಪ್ನ ಮೊದಲ ಸೆಮಿ ಫೈನಲ್ ಮ್ಯಾಂಚೆಸ್ಟರ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಭಾರತ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಈಗಾಗಲೇ ಅದ್ಭುತ ಫಾರ್ಮ್ ಅನ್ನು ಕಾಯ್ದುಕೊಂಡಿರುವ ಕೊಹ್ಲಿ ಪಡೆ ಲೀಗ್ ಹಂತದಲ್ಲಿ ಸೋತಿರುವುದು ಕೇವಲ ಒಂದು ಪಂದ್ಯದಲ್ಲಿ ಮಾತ್ರ. ಹಾಗಾಗಿ ಟೀಂ ಇಂಡಿಯಾ ಗೆಲ್ಲುವ ಹಾಟ್ ಫೆವರಿಟ್ ತಂಡ.
ಅತ್ತ ಕೇನ್ ವಿಲಿಯಮ್ಸನ್ ಮುನ್ನಡೆಸುವ ತಂಡ ಲೀಗ್ ಹಂತದಲ್ಲಿ 3 ಬಾರಿ ಸೋಲುಂಡಿದೆ. ಇವೆಲ್ಲಕ್ಕಿಂತ ಮುಖ್ಯವಾಗಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಲೀಗ್ ಹಂತದ ಪಂದ್ಯವು ಮಳೆಗೆ ಅಹುತಿಯಾಗಿತ್ತು. ಹೀಗಾಗಿ ಮೊದಲ ಸೆಮಿ ಫೈನಲ್ನ ಮೂಲಕ ಉಭಯ ತಂಡಗಳು ಇಂಗ್ಲೆಂಡ್ ಪಿಚ್ನಲ್ಲಿ ಪ್ರಥಮ ಬಾರಿ ಮುಖಾಮುಖಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎರಡು ತಂಡಗಳಿಂದ ಪ್ರಬಲ ಪೈಪೋಟಿಯನ್ನು ನಿರೀಕ್ಷೆ ಇದೆ.
ಭಾರತ ತಂಡ ಈ ಬಾರಿಯ ವಿಶ್ವಕಪ್ನಲ್ಲಿ ಫಾರ್ಮ್ನಲ್ಲಿದೆ. ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಕನ್ನಡಿಗ ಕೆ ಎಲ್ ರಾಹುಲ್ ಎಚ್ಚರಿಕೆಯ ಆಟವಾಡುತ್ತಿದ್ದಾರೆ. ಹೀಗಾಗಿ ಇವರ ವಿಕೆಟ್ ಕೀಳುವುದು ಸುಲಭದ ಮಾತೇನು ಅಲ್ಲ. ಇನ್ನು, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯಾ, ರಿಷಭ್ ಪಂತ್ ಬ್ಯಾಟಿಂಗ್ನಲ್ಲಿ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲೂ ರೊಹಿತ್-ರಾಹುಲ್ ಅಬ್ಬರದ ಪ್ರದರ್ಶನ ನೀಡುವ ಎಲ್ಲ ಸಾಧ್ಯತೆ ಇದೆ.
ಇದನ್ನೂ ಓದಿ: ಭಾರತ-ನ್ಯೂಜಿಲೆಂಡ್ ಸೆಮಿ ಫೈನಲ್ಗೆ ವರುಣನ ಅಡ್ಡಿ: ಮಳೆ ಬಂದರೆ ಫೈನಲ್ಗೇರುವ ತಂಡ ಯಾವುದು?
ಈ ಬಾರಿಯ ಟೂರ್ನಿಯಲ್ಲಿ ನ್ಯೂಜಿಲೆಂಡ್ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. ಆದರೆ, ಕೊನೆಯ ಮೂರು ಪಂದ್ಯಗಳನ್ನು ಸತತವಾಗಿ ಸೋತಿದೆ. ಪಾಕಿಸ್ತಾನ ನೀಡಿದ್ದ 241 ರನ್ ಗುರಿಯನ್ನು ನ್ಯೂಜಿಲೆಂಡ್ ಮುಟ್ಟಿಲ್ಲ. ಇಂಗ್ಲೆಂಡ್ ವಿರುದ್ಧವಂತೂ ಹೀನಾಯವಾಗಿ ಸೋತಿತ್ತು. ಬಾಂಗ್ಲಾ ನೀಡಿದ್ದ ಸಣ್ಣ ಮೊತ್ತವನ್ನು ತಡಕಾಡಿ ಗೆದ್ದಿತ್ತು. ಹಾಗಾಗಿ, ಭಾರತವನ್ನು ಎದುರಿಸುವುದು ನ್ಯೂಜಿಲೆಂಡ್ಗೆ ಅಷ್ಟು ಸುಲಭದ ಮಾತಲ್ಲ.
ನ್ಯೂಜಿಲೆಂಡ್ ತಂಡದಲ್ಲಿ ಫಾರ್ಮ್ನ ಕೊರತೆ ಎದ್ದು ಕಾಣುತ್ತಿದೆ. ಕೇನ್ ವಿಲಿಯಮ್ಸನ್ ಹಾಗೂ ರಾಸ್ ಟೈಲರ್ ತಂಡಕ್ಕೆ ಪ್ರಮುಖ ಆಧಾರ. ಇವರ ವಿಕೆಟ್ಗಳನ್ನು ಕಿತ್ತರೆ ಭಾರತ ಸುಲಭವಾಗಿ ಗೆಲುವನ್ನು ತೆಕ್ಕೆಗೆ ತೆಗೆದುಕೊಳ್ಳಬಹುದು. ಬದಲಾವಣೆ ಏನು?:
ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭರ್ಜರಿ ಜಯ ಸಾಧಿಸಿರುವ ಟೀಂ ಇಂಡಿಯಾ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿದ್ದಾರೆ. ಇಲ್ಲಿ ಲಂಕಾ ವಿರುದ್ದದ ಪಂದ್ಯದ ವೇಳೆ ತಂಡದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 2 ಬದಲಾವಣೆ ಮಾಡಿಕೊಂಡಿದ್ದರು. ಚಹಾಲ್ ಬದಲಿಗೆ ಕುಲ್ದೀಪ್ ಯಾದವ್ಗೆ ಹಾಗೂ ಮೊಹಮ್ಮದ್ ಶಮಿ ಬದಲಿಗೆ ರವೀಂದ್ರ ಜಡೇಜ ಅವರನ್ನು ಆಯ್ಕೆ ಮಾಡಲಾಗಿತ್ತು.
ಆದರೆ ಅದೇ ತಂಡವನ್ನು ಸೆಮಿ ಫೈನಲ್ನಲ್ಲಿ ಆಡಿಸುವುದು ಅನುಮಾನ. ಏಕೆಂದರೆ ನಿರ್ಣಾಯಕ ಪಂದ್ಯದಲ್ಲಿ ಬಲಿಷ್ಠರನ್ನೇ ಕಣಕ್ಕಿಳಿಸಲು ಟೀಂ ಮ್ಯಾನೇಜ್ಮೆಂಟ್ ನಿರ್ಧರಿಸಿದ್ದಾರೆ. ಅದರಂತೆ ಮಂಗಳವಾರ ಟೀಂ ಇಂಡಿಯಾವನ್ನು ಪ್ರತಿನಿಧಿಸುವ ಆಟಗಾರರು ಯಾರು ಎಂಬ ಪಟ್ಟಿ ಇಲ್ಲಿದೆ.
ಇದನ್ನೂ ಓದಿ: ಪಾಕ್ ತಂಡವನ್ನು ಟೂರ್ನಿಯಿಂದ ಹೊರಗಿಡಲು ಇಂಗ್ಲೆಂಡ್ ವಿರುದ್ದ ಟೀಂ ಇಂಡಿಯಾ ಉದ್ದೇಶ ಪೂರ್ವಕವಾಗಿ ಸೋತಿತೇ?
ಓಪನರ್ಸ್:
ರೋಹಿತ್-ರಾಹುಲ್
ಈಗಾಗಲೇ ಶ್ರೀಲಂಕಾ ವಿರುದ್ಧ 189 ರನ್ಗಳ ಮೊದಲ ವಿಕೆಟ್ ಜೊತೆಯಾಟ ಕಾಣಿಕೆ ನೀಡಿ ಭರ್ಜರಿ ಆರಂಭ ಒದಗಿಸಿರುವ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಸೆಮಿ ಫೈನಲ್ನಲ್ಲೂ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ.
ಮಧ್ಯಮ ಕ್ರಮಾಂಕ:
ಕೊಹ್ಲಿ-ರಿಷಭ್-ದಿನೇಶ್ ಕಾರ್ತಿಕ್
ಟೀಂ ಇಂಡಿಯಾ ನಾಯಕನ ಚಿಂತೆಗೆ ಕಾರಣವಾಗಿರುವುದು ತಂಡದ ಮಧ್ಯಮ ಕ್ರಮಾಂಕ. ಓನ್ಡೌನ್ನಲ್ಲಿ ವಿರಾಟ್ ಕೊಹ್ಲಿ ಮಿಂಚಿದರೆ, ರಿಷಭ್ ಪಂತ್ ಸಹ ತಕ್ಕ ಮಟ್ಟಿನ ಕಾಣಿಕೆಯನ್ನು ಬ್ಯಾಟ್ ಮೂಲಕ ಧಾರೆಯೆದಿದ್ದಾರೆ. ಆದರೆ ಇಲ್ಲಿ ಐದನೇ ಬ್ಯಾಟ್ಸ್ಮನ್ ಆಗಿ ಯಾರು ಎಂಬ ಪ್ರಶ್ನೆ ಭಾರತ ತಂಡವನ್ನು ಕಾಡುತ್ತಿದೆ. ಈ ಹಿಂದೆ ಕೇದರ್ ಜಾಧವ್ಗೆ ಅವಕಾಶ ನೀಡಲಾಗಿದ್ದರೂ ಅವರಿಂದ ನಿರೀಕ್ಷಿತ ಮಟ್ಟದ ಆಟ ಪ್ರದರ್ಶನವಾಗಿರಲಿಲ್ಲ. ಇನ್ನು ಅವರ ಬದಲಿಗೆ ದಿನೇಶ್ ಕಾರ್ತಿಕ್ಗೆ ಸ್ಥಾನ ನೀಡಿದಾಗಲೂ ಎರಡಂಕಿ ಮೊತ್ತಗಳಿಸುವಲ್ಲಿ ವಿಫಲರಾಗಿದ್ದರು. ಆದರೆ ಅನುಭವ ಮತ್ತು ಒತ್ತಡವನ್ನು ನಿಭಾಯಿಸುವ ಸಾರ್ಮಥ್ಯವನ್ನು ಪರಿಗಣನೆಗೆ ತೆಗೆದು ನಾಳೆ ದಿನೇಶ್ ಕಾರ್ತಿಕ್ ಅವರಿಗೆ ಅವಕಾಶ ನೀಡುವ ಸಾಧ್ಯತೆ ಹೆಚ್ಚು.
ಅತ್ತ ಕೇನ್ ವಿಲಿಯಮ್ಸನ್ ಮುನ್ನಡೆಸುವ ತಂಡ ಲೀಗ್ ಹಂತದಲ್ಲಿ 3 ಬಾರಿ ಸೋಲುಂಡಿದೆ. ಇವೆಲ್ಲಕ್ಕಿಂತ ಮುಖ್ಯವಾಗಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಲೀಗ್ ಹಂತದ ಪಂದ್ಯವು ಮಳೆಗೆ ಅಹುತಿಯಾಗಿತ್ತು. ಹೀಗಾಗಿ ಮೊದಲ ಸೆಮಿ ಫೈನಲ್ನ ಮೂಲಕ ಉಭಯ ತಂಡಗಳು ಇಂಗ್ಲೆಂಡ್ ಪಿಚ್ನಲ್ಲಿ ಪ್ರಥಮ ಬಾರಿ ಮುಖಾಮುಖಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎರಡು ತಂಡಗಳಿಂದ ಪ್ರಬಲ ಪೈಪೋಟಿಯನ್ನು ನಿರೀಕ್ಷೆ ಇದೆ.
ಭಾರತ ತಂಡ ಈ ಬಾರಿಯ ವಿಶ್ವಕಪ್ನಲ್ಲಿ ಫಾರ್ಮ್ನಲ್ಲಿದೆ. ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಕನ್ನಡಿಗ ಕೆ ಎಲ್ ರಾಹುಲ್ ಎಚ್ಚರಿಕೆಯ ಆಟವಾಡುತ್ತಿದ್ದಾರೆ. ಹೀಗಾಗಿ ಇವರ ವಿಕೆಟ್ ಕೀಳುವುದು ಸುಲಭದ ಮಾತೇನು ಅಲ್ಲ. ಇನ್ನು, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯಾ, ರಿಷಭ್ ಪಂತ್ ಬ್ಯಾಟಿಂಗ್ನಲ್ಲಿ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲೂ ರೊಹಿತ್-ರಾಹುಲ್ ಅಬ್ಬರದ ಪ್ರದರ್ಶನ ನೀಡುವ ಎಲ್ಲ ಸಾಧ್ಯತೆ ಇದೆ.
ಇದನ್ನೂ ಓದಿ: ಭಾರತ-ನ್ಯೂಜಿಲೆಂಡ್ ಸೆಮಿ ಫೈನಲ್ಗೆ ವರುಣನ ಅಡ್ಡಿ: ಮಳೆ ಬಂದರೆ ಫೈನಲ್ಗೇರುವ ತಂಡ ಯಾವುದು?
ಈ ಬಾರಿಯ ಟೂರ್ನಿಯಲ್ಲಿ ನ್ಯೂಜಿಲೆಂಡ್ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. ಆದರೆ, ಕೊನೆಯ ಮೂರು ಪಂದ್ಯಗಳನ್ನು ಸತತವಾಗಿ ಸೋತಿದೆ. ಪಾಕಿಸ್ತಾನ ನೀಡಿದ್ದ 241 ರನ್ ಗುರಿಯನ್ನು ನ್ಯೂಜಿಲೆಂಡ್ ಮುಟ್ಟಿಲ್ಲ. ಇಂಗ್ಲೆಂಡ್ ವಿರುದ್ಧವಂತೂ ಹೀನಾಯವಾಗಿ ಸೋತಿತ್ತು. ಬಾಂಗ್ಲಾ ನೀಡಿದ್ದ ಸಣ್ಣ ಮೊತ್ತವನ್ನು ತಡಕಾಡಿ ಗೆದ್ದಿತ್ತು. ಹಾಗಾಗಿ, ಭಾರತವನ್ನು ಎದುರಿಸುವುದು ನ್ಯೂಜಿಲೆಂಡ್ಗೆ ಅಷ್ಟು ಸುಲಭದ ಮಾತಲ್ಲ.
ನ್ಯೂಜಿಲೆಂಡ್ ತಂಡದಲ್ಲಿ ಫಾರ್ಮ್ನ ಕೊರತೆ ಎದ್ದು ಕಾಣುತ್ತಿದೆ. ಕೇನ್ ವಿಲಿಯಮ್ಸನ್ ಹಾಗೂ ರಾಸ್ ಟೈಲರ್ ತಂಡಕ್ಕೆ ಪ್ರಮುಖ ಆಧಾರ. ಇವರ ವಿಕೆಟ್ಗಳನ್ನು ಕಿತ್ತರೆ ಭಾರತ ಸುಲಭವಾಗಿ ಗೆಲುವನ್ನು ತೆಕ್ಕೆಗೆ ತೆಗೆದುಕೊಳ್ಳಬಹುದು.
Loading...
ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭರ್ಜರಿ ಜಯ ಸಾಧಿಸಿರುವ ಟೀಂ ಇಂಡಿಯಾ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿದ್ದಾರೆ. ಇಲ್ಲಿ ಲಂಕಾ ವಿರುದ್ದದ ಪಂದ್ಯದ ವೇಳೆ ತಂಡದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 2 ಬದಲಾವಣೆ ಮಾಡಿಕೊಂಡಿದ್ದರು. ಚಹಾಲ್ ಬದಲಿಗೆ ಕುಲ್ದೀಪ್ ಯಾದವ್ಗೆ ಹಾಗೂ ಮೊಹಮ್ಮದ್ ಶಮಿ ಬದಲಿಗೆ ರವೀಂದ್ರ ಜಡೇಜ ಅವರನ್ನು ಆಯ್ಕೆ ಮಾಡಲಾಗಿತ್ತು.
ಆದರೆ ಅದೇ ತಂಡವನ್ನು ಸೆಮಿ ಫೈನಲ್ನಲ್ಲಿ ಆಡಿಸುವುದು ಅನುಮಾನ. ಏಕೆಂದರೆ ನಿರ್ಣಾಯಕ ಪಂದ್ಯದಲ್ಲಿ ಬಲಿಷ್ಠರನ್ನೇ ಕಣಕ್ಕಿಳಿಸಲು ಟೀಂ ಮ್ಯಾನೇಜ್ಮೆಂಟ್ ನಿರ್ಧರಿಸಿದ್ದಾರೆ. ಅದರಂತೆ ಮಂಗಳವಾರ ಟೀಂ ಇಂಡಿಯಾವನ್ನು ಪ್ರತಿನಿಧಿಸುವ ಆಟಗಾರರು ಯಾರು ಎಂಬ ಪಟ್ಟಿ ಇಲ್ಲಿದೆ.
ಇದನ್ನೂ ಓದಿ: ಪಾಕ್ ತಂಡವನ್ನು ಟೂರ್ನಿಯಿಂದ ಹೊರಗಿಡಲು ಇಂಗ್ಲೆಂಡ್ ವಿರುದ್ದ ಟೀಂ ಇಂಡಿಯಾ ಉದ್ದೇಶ ಪೂರ್ವಕವಾಗಿ ಸೋತಿತೇ?
ಓಪನರ್ಸ್:
ರೋಹಿತ್-ರಾಹುಲ್
ಈಗಾಗಲೇ ಶ್ರೀಲಂಕಾ ವಿರುದ್ಧ 189 ರನ್ಗಳ ಮೊದಲ ವಿಕೆಟ್ ಜೊತೆಯಾಟ ಕಾಣಿಕೆ ನೀಡಿ ಭರ್ಜರಿ ಆರಂಭ ಒದಗಿಸಿರುವ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಸೆಮಿ ಫೈನಲ್ನಲ್ಲೂ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ.
ಮಧ್ಯಮ ಕ್ರಮಾಂಕ:
ಕೊಹ್ಲಿ-ರಿಷಭ್-ದಿನೇಶ್ ಕಾರ್ತಿಕ್
ಟೀಂ ಇಂಡಿಯಾ ನಾಯಕನ ಚಿಂತೆಗೆ ಕಾರಣವಾಗಿರುವುದು ತಂಡದ ಮಧ್ಯಮ ಕ್ರಮಾಂಕ. ಓನ್ಡೌನ್ನಲ್ಲಿ ವಿರಾಟ್ ಕೊಹ್ಲಿ ಮಿಂಚಿದರೆ, ರಿಷಭ್ ಪಂತ್ ಸಹ ತಕ್ಕ ಮಟ್ಟಿನ ಕಾಣಿಕೆಯನ್ನು ಬ್ಯಾಟ್ ಮೂಲಕ ಧಾರೆಯೆದಿದ್ದಾರೆ. ಆದರೆ ಇಲ್ಲಿ ಐದನೇ ಬ್ಯಾಟ್ಸ್ಮನ್ ಆಗಿ ಯಾರು ಎಂಬ ಪ್ರಶ್ನೆ ಭಾರತ ತಂಡವನ್ನು ಕಾಡುತ್ತಿದೆ. ಈ ಹಿಂದೆ ಕೇದರ್ ಜಾಧವ್ಗೆ ಅವಕಾಶ ನೀಡಲಾಗಿದ್ದರೂ ಅವರಿಂದ ನಿರೀಕ್ಷಿತ ಮಟ್ಟದ ಆಟ ಪ್ರದರ್ಶನವಾಗಿರಲಿಲ್ಲ. ಇನ್ನು ಅವರ ಬದಲಿಗೆ ದಿನೇಶ್ ಕಾರ್ತಿಕ್ಗೆ ಸ್ಥಾನ ನೀಡಿದಾಗಲೂ ಎರಡಂಕಿ ಮೊತ್ತಗಳಿಸುವಲ್ಲಿ ವಿಫಲರಾಗಿದ್ದರು. ಆದರೆ ಅನುಭವ ಮತ್ತು ಒತ್ತಡವನ್ನು ನಿಭಾಯಿಸುವ ಸಾರ್ಮಥ್ಯವನ್ನು ಪರಿಗಣನೆಗೆ ತೆಗೆದು ನಾಳೆ ದಿನೇಶ್ ಕಾರ್ತಿಕ್ ಅವರಿಗೆ ಅವಕಾಶ ನೀಡುವ ಸಾಧ್ಯತೆ ಹೆಚ್ಚು.
Loading...