India vs Bangladesh: ಮೊದಲ ಟಿ-20 ಪಂದ್ಯದಲ್ಲೇ ಗೆದ್ದು ಬೀಗಲಿದೆ ಭಾರತ; ಯಾಕೆ ಗೊತ್ತಾ..?

ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬಗ್ಗೆ ಆಯ್ಕೆದಾರರು ಹೆಚ್ಚಿನ ಗಮನ ಹರಿಸಲಿದ್ದಾರೆ. ನಾಯಕತ್ವದೊಂದಿಗೆ ಕೆ.ಎಲ್. ರಾಹುಲ್ ಅವರಿಗೆ ಮಧ್ಯಮ ಕ್ರಮಾಂಕದ ಜವಾಬ್ದಾರಿಯನ್ನು ವಹಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹಾಗೆಯೇ ನ್ಯೂಜಿಲೆಂಡ್ ವಿರುದ್ಧ ಶ್ರೇಷ್ಠ ಪ್ರದರ್ಶನ ನೀಡಿದ ಶ್ರೇಯಸ್ ಅಯ್ಯರ್ ಅವರಿಗೆ ಚಾನ್ಸ್ ಸಿಗುವುದು ಬಹುತೇಕ ಖಚಿತ.

ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬಗ್ಗೆ ಆಯ್ಕೆದಾರರು ಹೆಚ್ಚಿನ ಗಮನ ಹರಿಸಲಿದ್ದಾರೆ. ನಾಯಕತ್ವದೊಂದಿಗೆ ಕೆ.ಎಲ್. ರಾಹುಲ್ ಅವರಿಗೆ ಮಧ್ಯಮ ಕ್ರಮಾಂಕದ ಜವಾಬ್ದಾರಿಯನ್ನು ವಹಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹಾಗೆಯೇ ನ್ಯೂಜಿಲೆಂಡ್ ವಿರುದ್ಧ ಶ್ರೇಷ್ಠ ಪ್ರದರ್ಶನ ನೀಡಿದ ಶ್ರೇಯಸ್ ಅಯ್ಯರ್ ಅವರಿಗೆ ಚಾನ್ಸ್ ಸಿಗುವುದು ಬಹುತೇಕ ಖಚಿತ.

ಅಂಕಿಅಂಶದ ಜೊತೆ ಬಾಂಗ್ಲಾ ಆಟಗಾರರಿಗೆ ಅನುಭವದ ಕೊರತೆ ಇರುವ ಕಾರಣ ಮೊದಲ ಟಿ-20 ಪಂದ್ಯದಲ್ಲಿ ಭಾರತ ಗೆಲುವು ಸಾಧಿಸುವುದು ನಿಶ್ಚಿತ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಪಂದ್ಯ ನಾಳೆ ಸಂಜೆ 7 ಗಂಟೆಗೆ ಆರಂಭವಾಗಲಿದೆ.

  • Share this:

    ಬೆಂಗಳೂರು (ನ. 02): ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಯನ್ನು ವೈಟ್​ವಾಶ್ ಮಾಡಿದ ಬಳಿಕ ಟೀಂ ಇಂಡಿಯಾ ಸದ್ಯ ಟಿ-20 ಸರಣಿಗೆ ಸಜ್ಜಾಗಿದೆ. ನಾಳೆ (ನ. 03) ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ ನಡೆಯಲಿದ್ದು, ರೋಹಿತ್ ಪಡೆ ಶುಭಾರಂಭ ಮಾಡುವ ವಿಶ್ವಾಸದಲ್ಲಿದೆ.

    ಮೊದಲ ಟಿ-20 ಕದನದಲ್ಲಿ ಭಾರತವೇ ಗೆಲ್ಲಲಿದೆ ಎಂಬುದಕ್ಕೆ ಅನೇಕ ಕಾರಣಗಳಿವೆ. ಅವುಗಳಲ್ಲಿ ಪ್ರಮುಖವಾದವುಗಳನ್ನು ನೋಡುವುದಾದರೆ…

    India vs Bangladesh: Rohit Sharma speaks to Sourav Ganguly, says team ready to play first T20I
    2018 ಏಷ್ಯಾಕಪ್​ನಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಟ್ರೋಫಿ ಗೆದ್ದಾಗ ಸಂಭ್ರಮಿಸುತ್ತಿರುವ ಆಟಗಾರರು


    ಈವರೆಗೆ ಬಾಂಗ್ಲಾದೇಶ ವಿರುದ್ಧದ ಟಿ-20 ಪಂದ್ಯದಲ್ಲಿ ಭಾರತ ಒಂದೇ ಒಂದು ಸೋಲನ್ನು ಕಂಡಿಲ್ಲ. ಉಭಯ ತಂಡಗಳು ಒಟ್ಟು 8 ಟಿ-20 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಎಂಟೂ ಪಂದ್ಯಗಳಲ್ಲಿ ಗೆದ್ದು ಬೀಗಿದ್ದು ಭಾರತ.

    (VIDEO): ಪುರುಷರಿಂದಲೂ ಅಸಾಧ್ಯ ಬೌಂಡರಿ ಲೈನ್​ ಪಕ್ಕ ಹರ್ಮನ್​​ಪ್ರೀತ್ ಹಿಡಿದ ಈ ಮ್ಯಾಜಿಕ್ ಕ್ಯಾಚ್

    ಭಾರತ ಪರ ಟಿ-20 ಪಂದ್ಯಗಳಲ್ಲಿ ನಾಯಕನಾಗಿ ರೋಹಿತ್ ಶರ್ಮಾ ಅದ್ಭುತ ದಾಖಲೆ ಹೊಂದಿದ್ದಾರೆ. ಅಲ್ಲದೆ ಅರುಣ್ ಜೇಟ್ಲಿ ಕ್ರೀಡಾಂಗಣ ಹಿಟ್​ಮ್ಯಾನ್​ಗೆ ಲಕ್ಕಿ ಗ್ರೌಂಡ್ ಎಂದೇ ಹೇಳಬಹುದು. ಈ ಸ್ಟೇಡಿಯಂನಲ್ಲಿ ರೋಹಿತ್ ಒಂದು ಪಂದ್ಯವನ್ನಾಡಿದ್ದು ನ್ಯೂಜಿಲೆಂಡ್ ವಿರುದ್ಧ 55 ಎಸೆತಗಳಲ್ಲಿ 80 ರನ್ ಬಾರಿಸಿದ್ದರು. ಅಲ್ಲದೆ ಐಪಿಎಲ್​ನಲ್ಲಿ ಎರಡು ಅರ್ಧಶತಕ ಕೂಡ ಇದೇ ಮೈದಾನದಲ್ಲಿ ಸಿಡಿಸಿದ್ದಾರೆ.

    ಶಿಖರ್ ಧವನ್​ಗೆ ಇದು ಹೋಮ್​ ಗ್ರೌಂಡ್ ಆಗಿರುವುದರಿಂದ ಅಬ್ಬರಿಸುವುದು ಖಚಿತ. ಜೊತೆಗೆ ಧವನ್ ಕೂಡ ಈ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧ ಮತ್ತು ಐಪಿಎಲ್ ಸೇರಿ ಒಟ್ಟು 4 ಅರ್ಧಶತಕ ಗಳಿಸಿದ್ದಾರೆ. ಶ್ರೇಯಸ್ ಐಯರ್ ಐಪಿಎಲ್​ನಲ್ಲಿ ಡೆಲ್ಲಿ ತಂಡದ ನಾಯಕ. ಹೀಗಾಗಿ ಈ ಗ್ರೌಂಡ್​ನ ಬಗ್ಗೆ ಚೆನ್ನಾಗಿಯೆ ಅರಿತುಕೊಂಡಿದ್ದಾರೆ.

    ಶಾರ್ದೂಲ್ ಠಾಕೂರ್, ದೀಪಕ್ ಚಹಾರ್ ಹಾಗೂ ಖಲೀಲ್ ಅಹ್ಮದ್​ಗೆ ತಮ್ಮ ಪ್ರತಿಭೆಯನ್ನು ತೋರ್ಪಡಿಸಲು ಇದೊಂದು ಅತ್ಯುತ್ತಮ ವೇದಿಕೆ. ಇನ್ನು ಸ್ಪಿನ್ನರ್ ಯಜುವೇಂದ್ರ ಚಹಾಲ್ ಕೂಡ ಹಿಂದಿನ ನ್ಯೂಜಿಲೆಂಡ್ ವಿರುದ್ಧ 4 ಓವರ್​ಗೆ 26 ರನ್ ನೀಡಿ 2 ವಿಕೆಟ್ ಪಡೆದು ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದರು.

    IND vs BAN: 2015ರಲ್ಲಿ ಕೊನೆ ಪಂದ್ಯ: 4 ವರ್ಷದ ಬಳಿಕ ಟೀಂ ಇಂಡಿಯಾ ಪರ ಕಣಕ್ಕಿಳಿಯಲಿದ್ದಾರೆ ಈ ಆಟಗಾರ?

    ಇತ್ತ ಬಾಂಗ್ಲಾದೇಶ ಈ ಮೈದಾನದಲ್ಲಿ ಆಡುತ್ತಿರುವುದು ಇದೇ ಮೊದಲು. ಕೆಲ ಬಾಂಗ್ಲಾ ಆಟಗಾರರಿಗಷ್ಟೆ ಭಾರತದ ಮೈದಾನದಲ್ಲಿ ಆಡಿದ ಅನುಭವವಿದೆ. ಇದು ಬಾಂಗ್ಲಾ ಹುಲಿಗಳಿಗೆ ಹಿನ್ನಡೆಯಾಗುವುದು ಖಚಿತ. ಜೊತೆಗೆ ಶಕಿಬ್ ಅಲ್ ಹಸನ್ ಎರಡು ವರ್ಷ ಕ್ರಿಕೆಟ್​ನಿಂದ ಬ್ಯಾನ್ ಆಗಿರುವ ಶಾಕ್​ನಿಂದ ಬಾಂಗ್ಲಾ ಆಟಗಾರರು ಇನ್ನೂ ಹೊರಬಂದಿಲ್ಲ.

    ಅಂಕಿಅಂಶದ ಜೊತೆ ಬಾಂಗ್ಲಾ ಆಟಗಾರರಿಗೆ ಅನುಭವದ ಕೊರತೆ ಇರುವ ಕಾರಣ ಮೊದಲ ಟಿ-20 ಪಂದ್ಯದಲ್ಲಿ ಭಾರತ ಗೆಲುವು ಸಾಧಿಸುವುದು ನಿಶ್ಚಿತ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಪಂದ್ಯ ನಾಳೆ ಸಂಜೆ 7 ಗಂಟೆಗೆ ಆರಂಭವಾಗಲಿದೆ.

    First published: