JNU ಹೊಸ ನಿಯಮ: ಮುಷ್ಕರ ಹೂಡಿದ್ರೆ ಭಾರೀ ದಂಡ, ಹಿಂಸಾಚಾರ ಮಾಡಿದ್ರೆ ಗೇಟ್​ಪಾಸ್​!

 ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯ

 ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯ

10-ಪುಟಗಳ 'ಜೆಎನ್‌ಯು ವಿದ್ಯಾರ್ಥಿಗಳಿಗೆ ಶಿಸ್ತು ಮತ್ತು ಸರಿಯಾದ ನಡವಳಿಕೆಯ ನಿಯಮ'ಗಳನ್ನು ಜಾರಿಗೊಳಿಸಲಾಗಿದೆ. ಇದರಲ್ಲಿ ಪ್ರತಿಭಟನೆ ಮತ್ತು ಫೋರ್ಜರಿಯಂತಹ ವಿವಿಧ ಕೃತ್ಯಗಳಿಗೆ ಶಿಕ್ಷೆಯನ್ನು ನಿಗದಿಗೊಳಿಸಲಾಗಿದೆ. ಶಿಸ್ತು ಉಲ್ಲಂಘನೆಗಾಗಿ ತನಿಖಾ ಪ್ರಕ್ರಿಯೆ ಬಗ್ಗೆಯೂ ಉಲ್ಲೇಖಿಸಲಾಗಿದೆ.

ಮುಂದೆ ಓದಿ ...
  • News18 Kannada
  • 3-MIN READ
  • Last Updated :
  • New Delhi, India
  • Share this:

ನವದೆಹಲಿ(ಮಾ.02): ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ (Jawaharlal Nehru University) ಹೊಸ ನಿಯಮಗಳ ಪ್ರಕಾರ, ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ಧರಣಿ ಹೂಡಿದ್ರೆ 20,000 ರೂ. ದಂಡ ಪಾವತಿಸಬೇಕಾಗುತ್ತದೆ. ಅಲ್ಲದೇ ಹಿಂಸಾಚಾರದಲ್ಲಿ ಭಾಗಿಯಾದ್ರೆ ಪ್ರವೇಶವೇ ರದ್ದುಗೊಳಿಸಲಾಗುತ್ತದೆ ಇಲ್ಲವೇ 30,000 ರೂ. ದಂಡ ಪಾವತಿಸಬೇಕಾಗುತ್ತದೆ. 10-ಪುಟಗಳ 'ಜೆಎನ್‌ಯು ವಿದ್ಯಾರ್ಥಿಗಳಿಗೆ ಶಿಸ್ತು ಮತ್ತು ಸರಿಯಾದ ನಡವಳಿಕೆಯ ನಿಯಮ'ಗಳನ್ನು ಜಾರಿಗೊಳಿಸಲಾಗಿದೆ. ಇದರಲ್ಲಿ ಪ್ರತಿಭಟನೆ ಮತ್ತು ಫೋರ್ಜರಿಯಂತಹ ವಿವಿಧ ಕೃತ್ಯಗಳಿಗೆ ಶಿಕ್ಷೆಯನ್ನು ನಿಗದಿಗೊಳಿಸಲಾಗಿದೆ. ಶಿಸ್ತು ಉಲ್ಲಂಘನೆಗಾಗಿ ತನಿಖಾ ಪ್ರಕ್ರಿಯೆ ಬಗ್ಗೆಯೂ ಉಲ್ಲೇಖಿಸಲಾಗಿದೆ.


ಇದನ್ನೂ ಓದಿ: JNU Recruitment: 88 ಪ್ರೊಫೆಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ತಿಂಗಳಿಗೆ 2.18 ಲಕ್ಷ ಸಂಬಳ


ಡಾಕ್ಯುಮೆಂಟ್ ಪ್ರಕಾರ, ಈ ನಿಯಮಗಳು ಫೆಬ್ರವರಿ 3 ರಂದು ಜಾರಿಗೆ ಬಂದಿವೆ. ವಿಶ್ವವಿದ್ಯಾನಿಲಯದಲ್ಲಿ ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸುವ ಸಂಂಧ ನಡೆದ ಪ್ರತಿಭಟನೆಯ ಬಳಿಕ ಇವುಗಳನ್ನು ಜಾರಿಗೆ ತರಲಾಗಿದೆ. ಅದನ್ನು ಕಾರ್ಯಕಾರಿ ಮಂಡಳಿ ಅನುಮೋದಿಸಿದೆ ಎಂದು ನಿಯಮಗಳಿಗೆ ಸಂಬಂಧಿಸಿದ ದಾಖಲೆಯಲ್ಲಿ ಹೇಳಲಾಗಿದೆ. ಈ ಮಂಡಳಿಯು ವಿಶ್ವವಿದ್ಯಾನಿಲಯದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾಗಿದೆ.


ಇದನ್ನೂ ಓದಿ: JNU: ಗೋಡೆಗಳ ಮೇಲೆ ಬ್ರಾಹ್ಮಣ ವಿರೋಧಿ ಬರಹ, ಘಟನೆಗೆ ಕಾರಣ ತಿಳಿಸಿದ ಉಪ ಕುಲಪತಿ


ಆದಾಗ್ಯೂ, ಕಾರ್ಯಕಾರಿ ಮಂಡಳಿಯ ಸದಸ್ಯರು ಪಿಟಿಐಗೆ ಈ ವಿಷಯವನ್ನು ಹೆಚ್ಚುವರಿ ಅಜೆಂಡಾ ಐಟಂ ಆಗಿ ಜಾರಿಗೊಳಿಸಲಾಗಿದೆ ಮತ್ತು "ಕೋರ್ಟ್ ಪ್ರಕರಣಗಳಿಗೆ" ದಾಖಲೆಯನ್ನು ಸಿದ್ಧಪಡಿಸಲಾಗಿದೆ ಎಂದು ಉಲ್ಲೇಖಿಸಿದ್ದಾರೆ. ಜೆಎನ್‌ಯುನಲ್ಲಿನ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಕಾರ್ಯದರ್ಶಿ ವಿಕಾಸ್ ಪಟೇಲ್ ಈ ಹೊಸ ನಿಯಮಗಳನ್ನು 'ತುಘಲಕ್ ತೀರ್ಪು' ಎಂದು ಕರೆದಿದ್ದಾರೆ..




ಜೆಎನ್‌ಯು ಉಪಕುಲಪತಿ ಶಾಂತಿಶ್ರೀ ಡಿ ಪಂಡಿತ್ ಅವರ ಪ್ರತಿಕ್ರಿಯೆಯನ್ನು ತಿಳಿಯಲು, 'ಪಿಟಿಐ-ಭಾಷಾ' ಸಂದೇಶಗಳನ್ನು ಕಳುಹಿಸಿತ್ತು. ಅಲ್ಲದೇ ಅವರಿಗೆ ಕರೆ ಮಾಡಿತ್ತು. ಆದರೆ ಇದ್ಯಾವುದಕ್ಕೂ ಅವರು ಉತ್ತರಿಸಲಿಲ್ಲ. ಗಮನಾರ್ಹವಾಗಿ, ಜನವರಿಯಲ್ಲಿ, ಗುಜರಾತ್ ಗಲಭೆಗಳ ಕುರಿತು ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರದ ಬಗ್ಗೆ ಜೆಎನ್‌ಯುನಲ್ಲಿ ಸಾಕಷ್ಟು ಕೋಲಾಹಲ ಉಂಟಾಗಿತ್ತು. ಸಾಕ್ಷ್ಯಚಿತ್ರದ ಪ್ರದರ್ಶನದಿಂದ ಉದ್ಭವಿಸಿದ ವಿವಾದದಲ್ಲಿ, ಜೆಎನ್‌ಯು ವಿದ್ಯಾರ್ಥಿ ಸಂಘಟನೆಗಳು (ಎಬಿವಿಪಿ ಮತ್ತು ಎಡ) ಸಹ ಪರಸ್ಪರರ ಹಲವಾರು ಆರೋಪಗಳನ್ನು ಮಾಡಿದ್ದವು.

Published by:Precilla Olivia Dias
First published: